Asianet Suvarna News Asianet Suvarna News

ಬಿಎಸ್‌ವೈಗೆ ರಾಜ್ಯಾಧ್ಯಕ್ಷ ಸ್ಥಾನ ಹೋಗುತ್ತೆ : ಹಿರಿಯ ಮುಖಂಡ

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ  ರಾಜ್ಯ ರಾಜಕೀಯ ನಾಯಕರಲ್ಲಿ ಪರಸ್ಪರ ವಾಕ್ಸಮರಗಳು ಜೋರಾಗಿದೆ. ಇದೇ ವೇಳೆ ಕಾಮಗ್ರೆಸ್ ಮುಖಂಡ ಶಾಮನೂರು ಶಿವಶಂಕರಪ್ಪ ಲೋಕಸಭಾ ಚುನಾವಣೆ ಬಳಿಕ ಯಡಿಯೂರಪ್ಪ ರಾಜ್ಯಾಧ್ಯಕ್ಷ ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ. 

BS Yeddyurappa Will Loss BJP State President Post Says Shamanur Shivashankarappa
Author
Bengaluru, First Published Apr 5, 2019, 9:44 AM IST

ದಾವ​ಣ​ಗೆರೆ: ಲೋಕ​ಸಭೆ ಚುನಾ​ವಣೆ ನಂತರ ಬಿ.ಎ​ಸ್‌.​ಯ​ಡಿ​ಯೂ​ರಪ್ಪ ಅವರಿಗೆ ಇರುವ ಬಿಜೆಪಿ ರಾಜ್ಯಾ​ಧ್ಯಕ್ಷ ಸ್ಥಾನ ಹೋಗ​ಲಿದ್ದು, ಮನೆಗೆ ಹೋಗು​ತ್ತಾನೆ ಎಂದು ಕಾಂಗ್ರೆ​ಸ್‌ನ ಹಿರಿಯ ನಾಯಕ, ಶಾಸಕ ಡಾ.ಶಾ​ಮ​ನೂರು ಶಿವ​ಶಂಕ​ರಪ್ಪ ಹೇಳಿದರು. 

ಈ ಮೂಲಕ ದಾವ​ಣ​ಗೆರೆ ಲೋಕ​ಸಭಾ ಕ್ಷೇತ್ರವನ್ನು ಈಗಾಗಲೇ ಗೆದ್ದಾ​ಗಿ​ದೆ ಎಂದು ಹೇಳಿಕೆ ನೀಡಿದ ಬಿಎ​ಸ್‌ವೈಗೆ ತಿರು​ಗೇಟು ನೀಡಿ​ದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫಲಿ​ತಾಂಶ ಹೊರ ಬೀಳು​ತ್ತಿ​ದ್ದಂತೆಯೇ ಯಡಿ​ಯೂ​ರಪ್ಪಗೆ ಇರುವ ಸ್ಥಾನವೂ ಹೋಗಲಿದೆ. 

ಹೀಗಾಗಿ ಅವರ ಮುಂದಿನ ಜೀವನ ಹೇಗಿರುತ್ತೆ ಅನ್ನುವುದನ್ನು ನೋಡೋಣ. ದಾವ​ಣ​ಗೆರೆ ಕ್ಷೇತ್ರ​ಕ್ಕೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾವು ಸಾಮಾನ್ಯ ವ್ಯಕ್ತಿ​ಯನ್ನು ನಿಲ್ಲಿ​ಸಿ​ದ್ದೇವೆ. ನಮ್ಮ ಅಭ್ಯರ್ಥಿಯ ಗೆಲುವು ಖಚಿತ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

Follow Us:
Download App:
  • android
  • ios