Asianet Suvarna News Asianet Suvarna News

8 ಚುನಾವಣಾ ಸಿಬ್ಬಂದಿ ಸಾವು

ರಾಜ್ಯದಲ್ಲಿ ಲೋಕಸಭಾ ಚುನಾವಣಾ ಮಹಾ ಸಮರ ಮುಕ್ತಾಯವಾಗಿದ್ದು, ಇನ್ನು ಫಲಿತಾಂಶಕ್ಕೆ ರಾಜ್ಯ ಕಾಯುತ್ತಿದೆ. ಚುನಾವಣೆ ವೇಳೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಒಟ್ಟು 8 ಅಧಿಕಾರಿಗಳು ಮರಣ ಹೊಂದಿದ್ದಾರೆ. 

8 Election Officers Died Due To Heart Attack in Karnataka
Author
Bengaluru, First Published Apr 24, 2019, 8:41 AM IST

ಬೆಂಗಳೂರು :  ಲೋಕಸಭೆ ಚುನಾವಣೆಯ ಎರಡು ಹಂತದಲ್ಲಿ ಚುನಾವಣಾ ಕಾರ್ಯ ಕ್ಕಾಗಿ ನಿಯೋಜನೆಗೊಂಡಿರುವವರ ಪೈಕಿ 8 ಮಂದಿ ಸಾವನ್ನಪ್ಪಿದ್ದಾರೆ. 

ಈ ಪೈಕಿ ಏಳು ಮಂದಿ ಹೃದಯಾಘಾತ ದಿಂದ ಮೃತರಾದರೆ ಒಬ್ಬರು ರಸ್ತೆ ಅಪಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ. ಎರಡನೇ ಹಂತದಲ್ಲಿ 12 ಕಡೆ ಮತದಾನ ಬಹಿಷ್ಕರಿಸಲಾಗಿತ್ತು. 

ಎಲ್ಲರನ್ನು ಮನವೊಲಿಕೆ ಮಾಡಿ ಮತದಾನ ಮಾಡಲು ಚುನಾವಣಾ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಎಲ್ಲಿಯೂ ಮರುಮತದಾನ ನಡೆಯುವುದಿಲ್ಲ ಎಂದು ಮುಖ್ಯ ಚುನಾವಣಾಧಿಕಾರಿಗಳು ತಿಳಿಸಿದರು.

Follow Us:
Download App:
  • android
  • ios