Asianet Suvarna News Asianet Suvarna News

Pariksha Pe Charcha 2022: ಮಕ್ಕಳು ಮೊಬೈಲ್ ನಿಂದ ದೂರ ಇರಲು ಮೋದಿ ಸಲಹೆ

ಕಳೆದ ನಾಲ್ಕು ವರ್ಷಗಳಿಂದ 'ಪರಿಕ್ಷಾ ಪೇ ಚರ್ಚೆ'  ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 1ರಂದು ನಡೆದ ಪರೀಕ್ಷಾ ಪೇ ಚರ್ಚೆಯಲ್ಲಿ ಮಕ್ಕಳು ಸಾಮಾಜಿಕ ಜಾಲತಾಣದಿಂದ ವಿಚಲಿತರಾಗದಿರಿ ಎಂದು ಸಲಹೆ ನೀಡಿದ್ದಾರೆ.

Pariksha Pe Chacha 2022 PM Narendra Modi Advised students who Distracted by Social Media gow
Author
Bengaluru, First Published Apr 1, 2022, 2:51 PM IST

ನವದೆಹಲಿ(ಎ.1): ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi ) ಅವರು ವಿದ್ಯಾರ್ಥಿಗಳಿಗೆ ತಮ್ಮ ವಾರ್ಷಿಕ  ಪರೀಕ್ಷಾ ಪೆ ಚರ್ಚಾ (Pariksha Pe Charcha) ಟಾಕ್‌ನಲ್ಲಿ, ಪರೀಕ್ಷೆಗಳಿಗೆ (Exam) ತಯಾರಿ ನಡೆಸುವಾಗ ಸಾಮಾಜಿಕ ಮಾಧ್ಯಮದಂತಹ ಗೊಂದಲ ಮತ್ತು ಅವುಗಳಿಂದ ದೂರ ಇರುವ ಕುರಿತು ಸಲಹೆಗಳನ್ನು ನೀಡಿದರು. 

ದಿನದಲ್ಲಿ ನೀವು ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಇಲ್ಲದ ಕ್ಷಣಗಳಿವೆ ಎಂದು ದೃಢಪಡಿಸಿಕೊಳ್ಳಿ, ಆದರೆ  ಇನ್‌ಲೈನ್‌ನಲ್ಲಿ ಇರುವುದನ್ನು ಮರೆಯದಿರಿ ಎಂದು "ಪರೀಕ್ಷಾ ಪೇ ಚರ್ಚಾ" ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಹೇಳಿದರು.

ನಿಮ್ಮ ಮೂಲಭೂತ ಅಂಶಗಳನ್ನು ಸುಧಾರಿಸಲು ಮತ್ತು ನಿಮ್ಮ ಆಫ್‌ಲೈನ್ ಶಿಕ್ಷಣವನ್ನು (Offline education) ಹೆಚ್ಚಿಸಲು ಆನ್‌ಲೈನ್ ಬಳಸಿ. ನಿಮ್ಮ ಅಧ್ಯಯನವನ್ನು ವಿಸ್ತರಿಸಲು ಆನ್‌ಲೈನ್ ನಿಮಗೆ ಸಹಾಯ ಮಾಡುತ್ತದೆ. ಆದರೆ ನೀವು ವಿಚಲಿತರಾಗುತ್ತಿದ್ದರೆ, ನಿಮ್ಮನ್ನು ಶಿಸ್ತುಬದ್ಧವಾಗಿ ಇರಿಸಿಕೊಳ್ಳಲು ನಿಮ್ಮ ಗ್ಯಾಜೆಟ್‌ಗಳಲ್ಲಿ ಪರಿಕರಗಳನ್ನು ಬಳಸಿ. ನಿಮ್ಮ ವ್ಯಕ್ತಿತ್ವವನ್ನು ರೂಪಿಸುವುದು ಗ್ಯಾಜೆಟ್‌ಗಳನ್ನು ಬಳಸುವಷ್ಟೇ ಮುಖ್ಯವಾಗಿದೆ  ಎಂದು ಮೋದಿ ಮಕ್ಕಳಿಗೆ ಸಲಹೆ ನೀಡಿದರು.

ಬಿಸಿಯೂಟ ಯೋಜನೆಗೆ ಡಾ ಶಿವಕುಮಾರ ಸ್ವಾಮೀಜಿಗಳ ಹೆಸರಿಡಲು ಸರಕಾರದ ತೀರ್ಮಾನ

ಆನ್‌ಲೈನ್ ಗೊಂದಲಗಳು ಮತ್ತು ಅವುಗಳನ್ನು ಹೇಗೆ ಎದುರಿಸುವುದು ಎಂಬ ಪ್ರಶ್ನೆಯನ್ನು ಕೆಲವು ವಿದ್ಯಾರ್ಥಿಗಳು ಕೇಳಿದಾಗ, ತಮಾಷೆ ಮಾಡಿದ ಪ್ರಧಾನ ಮಂತ್ರಿ ಮೋದಿ ಅವರು "ನನಗೆ ಒಂದು ಪ್ರಶ್ನೆಯಿದೆ.  ನಿಮ್ಮನ್ನು ನೀವು ಪ್ರಶ್ನೆ ಮಾಡಿಕೊಳ್ಳಿ, ನೀವು ಆನ್‌ಲೈನ್‌ನಲ್ಲಿ ಓದುತ್ತಿರುವಾಗ,  ನೀವು ಓದುತ್ತಿದ್ದೀರಾ ಅಥವಾ ರೀಲ್‌ಗಳನ್ನು ನೋಡುತ್ತಿದ್ದೀರಾ? ನಿಮಗೆ ತಿಳಿದಿರುತ್ತದೆ ಎಂದು ನಾನು ಭಾವಿಸುತ್ತೇನೆ. ನಾನು ನಿನ್ನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದೇನೆ ಎಂದು ಹೇಳಿದಾಗ ಮೋದಿ ಮಾತಿಗೆ ಮಕ್ಕಳು ನಕ್ಕರು.

ಇದು ಆಫ್‌ಲೈನ್ ಅಥವಾ ಆನ್‌ಲೈನ್ ಪ್ರಶ್ನೆಯಲ್ಲ, ನಿಮ್ಮ ದೇಹವು ತರಗತಿಯಲ್ಲಿರುತ್ತದೆ. ನಿಮ್ಮ ಕಣ್ಣುಗಳು ಶಿಕ್ಷಕರ ಮೇಲೆ ಇರುತ್ತದೆ, ಆದರೆ ನಿಮ್ಮ ಕಿವಿಯಲ್ಲಿ ಯಾವುದೂ ದಾಖಲಾಗುತ್ತಿಲ್ಲ. ಅದಕ್ಕೆ ಕಾರಣ ನಿಮ್ಮ ಮನಸ್ಸು ಬೇರೆಲ್ಲೋ ಇದೆ.  ಇದು ಮಾಧ್ಯಮದ ಸಮಸ್ಯೆಯಲ್ಲಿ. ನಿಮ್ಮ ಮನಸ್ಸಿನ ಸಮಸ್ಯೆಯಾಗಿದೆ.

ನೀವು ಗಮನಹರಿಸಿದರೆ ಮತ್ತು ಕಲಿಯಲು ಸಿದ್ದರಿದ್ದರೆ, ಮೆದುಳು ಪ್ರಯತ್ನಿಸಿದರೆ ನಿಮ್ಮ ಮೋಡ್ ನಲ್ಲಿ ವ್ಯತ್ಯಾಸವಾಗುವುದಿಲ್ಲ. ಗುರುಕುಲಗಳಲ್ಲಿ ಯಾವುದೇ ಮುದ್ರಣ ಕಾಗದಗಳಿರಲಿಲ್ಲ  ಅಲ್ಲಿ ಮೌಖಿಕ ರೂಪದಲ್ಲಿ ಕಲಿಯಲಾಗುತ್ತಿತ್ತು ಮತ್ತು ನೆನಪಿಸಿಟ್ಟುಕೊಳ್ಳುತ್ತಿದ್ದರು. ಈಗ ನಾವು ಆನ್‌ಲೈನ್ ಕಲಿಕೆಯ ವಿಧಾನಗಳನ್ನು ಹೊಂದಿದ್ದೇವೆ ಎಂಬುದು ಕೇವಲ ವಿಕಾಸವಾಗಿದೆ.  ವಿದ್ಯಾರ್ಥಿಗಳು ಆನ್‌ಲೈನ್ ಕಲಿಕೆಯನ್ನು ಒಂದು ಅವಕಾಶವಾಗಿ ಪರಿಗಣಿಸಬೇಕೇ ಹೊರತು ಸಮಸ್ಯೆಯಾಗಿ ಅಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.

ರಾಜ್ಯ ಸರ್ಕಾರಿ ಶಾಲಾ ಮಕ್ಕಳಿಗೆ ಶೀಘ್ರವೇ ದೊರೆಯಲಿದೆ ಸಾರಿಗೆ ಸೌಲಭ್ಯ

ಆದರೆ  ನೀವು ಆನ್‌ಲೈನ್ ಮತ್ತು ಆಫ್‌ಲೈನ್‌ ಕಲಿಕೆಯಲ್ಲಿ ಪಡೆಯುವದನ್ನು ಹೋಲಿಸಿ.  ಮತ್ತು ಇನ್ನಷ್ಟು ತಿಳಿದುಕೊಳ್ಳಲು ಪ್ರಯತ್ನಿಸಿ. ಆನ್‌ಲೈನ್ ಜ್ಞಾನವನ್ನು ವೃದ್ಧಿಸುತ್ತದೆ ಮತ್ತು ಆಫ್‌ಲೈನ್  ಅದನ್ನು  ಕಾರ್ಯಗತಗೊಳಿಸುತ್ತದೆ. ನೀವು ಆನ್‌ಲೈನ್‌ನಲ್ಲಿ ಕಲಿತಿದ್ದನ್ನು ನಾವು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ನಮಗೆ ಅಗತ್ಯವಿರುವ ಎಲ್ಲಾ ಜ್ಞಾನವನ್ನು ಹುಡುಕಬಹುದು.

ದೋಸೆ ಮಾಡುವ ವಿಡಿಯೋವನ್ನು ಉದಾಹರಣೆಯಾಗಿ ತೋರಿಸಿ ತಮ್ಮ ವಿಷಯವನ್ನು ಅವರು ವಿವರಿಸಿದರು. ಆನ್‌ಲೈನ್‌ನಲ್ಲಿ ನೀವು ದೋಸೆಯನ್ನು ಹೇಗೆ ತಯಾರಿಸಲಾಗುತ್ತದೆ ಎಂಬುದನ್ನು ನೋಡುತ್ತೀರಿ ಆದರೆ ಅದರಿಂದ ಹೊಟ್ಟೆ ತುಂಬುವುದಿಲ್ಲ.  ನಿಮ್ಮ ಹೊಟ್ಟೆಯನ್ನು ತುಂಬಲು ನೀವು ಕಲಿಯಬೇಕು ಮತ್ತು ನಂತರ ಅದನ್ನು ಕಾರ್ಯಗತಗೊಳಿಸಬೇಕು ಎಂದು ಮೋದಿ ಹೇಳಿದರು.

ಪರೀಕ್ಷೆ ಬಗ್ಗೆ ಮಕ್ಕಳಿಗಿರುವ ಫೋಬಿಯಾ ಹೋಗಲಾಡಿಸಿ ವಿದ್ಯಾರ್ಥಿಗಳ ಆತ್ಮ ಸ್ಥೈರ್ಯ ಹೆಚ್ಚಿಸುವ ಕೆಲಸವನ್ನು ದೇಶದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಮಾಡುತ್ತಿದ್ದಾರೆ. ಇದಕ್ಕಾಗಿ ಕಳೆದ ನಾಲ್ಕು ವರ್ಷಗಳಿಂದ 'ಪರಿಕ್ಷಾ ಪೇ ಚರ್ಚೆ' (Pariksha Pe Charcha) ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದು, ವಿದ್ಯಾರ್ಥಿಗಳ ಜೊತೆ ನೇರ ಮಾತುಕತೆ ನಡೆಸಿ ಅವರ ಮನೋಬಲವನ್ನ ಬಲಗೊಳಿಸುತ್ತಿದ್ದಾರೆ. ಈ ಬಾರಿ ದೇಶದ ನಾನಾ ರಾಜ್ಯಗಳ 40 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಮೋದಿ ಜೊತೆಗಿನ ಚರ್ಚೆಯ 40 ವಿದ್ಯಾರ್ಥಿಗಳ ಪಟ್ಟಿಯಲ್ಲಿ ರಾಜ್ಯದ ಏಕೈಕ ವಿದ್ಯಾರ್ಥಿ ಮಂಡ್ಯದ ನವೋದಯ ಶಾಲೆ ತರುಣ್ ಆಯ್ಕೆಯಾಗಿದ್ದು, ಆತ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ (Mysuru) ವ್ಯಾಸಂಗ ಮಾಡುತ್ತಿದ್ದಾನೆ.

 

Follow Us:
Download App:
  • android
  • ios