Asianet Suvarna News Asianet Suvarna News

ಸಿದ್ದರಾಮಯ್ಯ ಸಿಎಂ ಎಂದು ಗುರು​ತಿಸಿ, ‘ಮೋದಿ’ಗೆ ರಾಷ್ಟ್ರ​ಪತಿ ಎಂದ ಮಕ್ಕ​ಳು!

ನಮ್ಮ ರಾಜ್ಯದ ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ, ದೇಶದ ರಾಷ್ಟ್ರ​ಪತಿ ನರೇಂದ್ರ ಮೋದಿ. ಇದು ಶಾಲಾ ಮಕ್ಕಳು ಜಿಲ್ಲಾ ಉಸ್ತು​ವಾರಿ ಸಚಿವ ಈಶ್ವರ ಖಂಡ್ರೆ ಅವ​ರಿ​ಗೆ ಕೊಟ್ಟಉತ್ತ​ರ.

Children identified Siddaramaiah as CM and called 'Modi' as the President at bidar rav
Author
First Published Jun 23, 2023, 5:18 AM IST

ಬೀದ​ರ್‌ (ಜೂ.22) : ನಮ್ಮ ರಾಜ್ಯದ ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ, ದೇಶದ ರಾಷ್ಟ್ರ​ಪತಿ ನರೇಂದ್ರ ಮೋದಿ. ಇದು ಶಾಲಾ ಮಕ್ಕಳು ಜಿಲ್ಲಾ ಉಸ್ತು​ವಾರಿ ಸಚಿವ ಈಶ್ವರ ಖಂಡ್ರೆ ಅವ​ರಿ​ಗೆ ಕೊಟ್ಟಉತ್ತ​ರ. ಕಲು​ಷಿತ ನೀರು ಸೇವ​ನೆ​ಯಿಂದ ಅಸ್ವ​ಸ್ತಗೊಂಡ​ವ​ರನ್ನು ಭೇಟಿ​ಯಾಗಿ ಆರೋಗ್ಯ ವಿಚಾ​ರಿ​ಸಲು ಕರ​ಕ್ಯಾಳ ಗ್ರಾಮ​ಕ್ಕೆ ತೆರ​ಳಿದ್ದ ಜಿಲ್ಲಾ ಉಸ್ತು​ವಾರಿ ಸಚಿವ ಈಶ್ವರ ಖಂಡ್ರೆ ಅವರು ಅಲ್ಲಿನ ಶಾಲೆಗೆ ಭೇಟಿ ನೀಡಿ ಮಕ್ಕ​ಳನ್ನು ಮಾತ​ನಾ​ಡಿ​ಸಿ​ದಾಗ ಈ ಉತ್ತರಗಳು ಬಂದಿವೆ.

ಸಚಿವ ಈಶ್ವರ ಖಂಡ್ರೆ(Eshwar khandre) ಅವರು ಕೇಳಿದ ಪ್ರಶ್ನೆ​ಗ​ಳಿಗೆ ಉತ್ತ​ರಿಸಿ ಶಾಲಾ ಮಕ್ಕಳು, ರಾಜ್ಯದ ಮುಖ್ಯ​ಮಂತ್ರಿ​ಯ ಹೆಸ​ರನ್ನು ಥಟ್‌ ಅಂತ ಸ್ಪಷ್ಟ​ವಾಗಿ ಹೇಳಿದ ಸರ್ಕಾರಿ ಶಾಲಾ ಮಕ್ಕಳು, ರಾಷ್ಟ್ರ​ಪತಿ ಹೆಸರು ಹೇಳುವ ಸಂದರ್ಭ ಎಡ​ವಟ್ಟು ಮಾಡಿ​ಕೊಂಡು ಪ್ರಧಾ​ನಿ ನರೇಂದ್ರ ಮೋದಿ ಅವರ ಹೆಸ​ರನ್ನು ಹೇಳಿ ಎಲ್ಲರೂ ನಗೆ​ಗ​ಡ​ಲಲ್ಲಿ ತೇಲು​ವಂತೆ ಮಾಡಿ​ದರು. ಸಚಿವ ಖಂಡ್ರೆ ಅಧಿ​ಕಾ​ರಿ​ಗ​ಳನ್ನು ತಮ್ಮ​ತ್ತ ಕರೆದು ಇದೇನ್ರಿ ಎಂದು ಹೇಳಿ ನಮ್ಮ ದೇಶದ ರಾಷ್ಟ್ರ​ಪತಿ ದ್ರೌಪದಿ ಮುರ್ಮು ಎಂದು ಹೇಳಿ​ದ​ರ​ಲ್ಲದೆ, ರಾಜ್ಯ​ದ​ಲ್ಲಿ​ರುವ ಜಿಲ್ಲೆ​ಗಳೆಷ್ಟುಎಂದು ಕೇಳಿ​ದಾಗ ವಿದ್ಯಾ​ರ್ಥಿ​ಗ​ಳಿ​ರಲಿ ಆ ಶಾಲೆಯ ಶಿಕ್ಷಕ​ರಿಗೂ ಗೊತ್ತಿ​ರ​ಲಿಲ್ಲ. ಇದ​ರಿಂದ ಸಿಡಿ​ಮಿ​ಡಿ​ಗೊಂಡ ಸಚಿ​ವರು ಮಕ್ಕ​ಳನ್ನು ಸುಧಾ​ರಿ​ಸ​ಬೇ​ಕಾದ ನೀವೇ ಹೀಗಾ​ದರೆ ಹೇಗೆ ಎಂದು ಪ್ರಶ್ನಿಸಿ ಶಾಲೆ​ಯಲ್ಲಿ ಶೌಚಾ​ಲ​ಯದ ವ್ಯವಸ್ಥೆ, ಮಕ್ಕಳ ಹಾಜ​ರಾತಿ ಬಗ್ಗೆ ಮಾಹಿತಿ ಪಡೆದು ಸಸಿ ನೆಟ್ಟು ದೇಶ ಉಳಿ​ಸೋಣ, ಹಸಿರೇ ಉಸಿರು ಎಂಬ ಘೋಷ​ಣೆ​ಗ​ಳನ್ನು ಮಕ್ಕಳಿಗೆ ಹೇಳಿ​ಕೊ​ಟ್ಟ​ರು.

ಕಾಂಗ್ರೆಸ್‌ ಗ್ಯಾರಂಟಿ ಜಾರಿಯಿಂದ ಬಿಜೆಪಿಗೆ ನಡುಕ: ಸಚಿವ ಈಶ್ವರ ಖಂಡ್ರೆ

Follow Us:
Download App:
  • android
  • ios