ಇಬ್ಬರು ಭೋದಕೇತರ ಸಿಬ್ಬಂದಿ ಹಾಗೂ ಅವರಿಬ್ಬರ ಸಂಪರ್ಕಿತರಿಗೆ ಕೋವಿಡ್ ಸೋಂಕು ದೃಢ|ಚಾಮರಾಜನಗರ ಕೇಂದ್ರೀಯ ವಿದ್ಯಾಲಯದಲ್ಲಿ 2021-22 ನೇ ಸಾಲಿನ ಶೈಕ್ಷಣಿಕ ಶಾಲಾ ದಾಖಲಾತಿ ಆರಂಭ| ಮಕ್ಕಳನ್ನು ದಾಖಲಾತಿ ಮಾಡಿದ ಪೋಷಕರಲ್ಲಿ ಆವರಿಸಿದ ಭೀತಿ|
ಚಾಮರಾಜನಗರ(ಏ.14): ಕೇಂದ್ರಿಯ ವಿದ್ಯಾಲಯದ ಇಬ್ಬರು ಬೋಧಕೇತರ ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿದ ಪರಿಣಾಮ ಶಾಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾದ ಘಟನೆ ತಾಲೂಕಿನ ಮಾದಪುರದಲ್ಲಿ ಇಂದು(ಬುಧವಾರ) ನಡೆದಿದೆ.
Add Asianetnews Kannada as a Preferred Source

ಇಬ್ಬರು ಭೋದಕೇತರ ಸಿಬ್ಬಂದಿ ಹಾಗೂ ಅವರಿಬ್ಬರ ಸಂಪರ್ಕಿತರಿಗೆ ಇಂದು ಕೋವಿಡ್ ಸೋಂಕು ದೃಢಪಟ್ಟಿದೆ. SSLC ವಿದ್ಯಾರ್ಥಿಗಳಷ್ಟೇ ಶಾಲೆಗೆ ತೆರಳುತ್ತಿದ್ದರು ಹಾಗೂ ಶಾಲಾ ಪ್ರವೇಶಾತಿಗೆ ನಿತ್ಯ ಹತ್ತಾರು ಮಂದಿ ಪಾಲಕರು ಶಾಲೆಗೆ ಎಡತಾಕುತ್ತಿದ್ದರಿಂದ ಆತಂಕದ ವಾತಾವರಣ ನಿರ್ಮಾಣವಾಗಿದೆ.
CBSE: 10ನೇ ತರಗತಿ ಪರೀಕ್ಷೆ ರದ್ದು, 12ನೇ ತರಗತಿ ಪರೀಕ್ಷೆ ಮುಂದೂಡಿಕೆ!
ಚಾಮರಾಜನಗರ ಕೇಂದ್ರೀಯ ವಿದ್ಯಾಲಯದಲ್ಲಿ 2021-22 ನೇ ಸಾಲಿನ ಶೈಕ್ಷಣಿಕ ಶಾಲಾ ದಾಖಲಾತಿ ಆರಂಭವಾಗಿದ್ದು, ಮಕ್ಕಳನ್ನು ದಾಖಲಾತಿ ಮಾಡಿದ ಪೋಷಕರಲ್ಲಿ ಇದೀಗ ಭೀತಿ ಆವರಿಸಿದೆ. ಇನ್ನು, ಶಾಲೆಗೆ ತೆರಳುತ್ತಿದ್ದ 10 ನೇ ತರಗತಿ ವಿದ್ಯಾರ್ಥಿಗಳ ಗಂಟಲು ದ್ರವ ಪರೀಕ್ಷೆ ನಡೆಸಲು ಆರೋಗ್ಯ ಇಲಾಖೆ ಮುಂದಾಗಿದೆ.
