Asianet Suvarna News Asianet Suvarna News

ಐಐಟಿ ವಿದ್ಯಾರ್ಥಿಗೆ ಪ್ರತಿಷ್ಠಿತ ಕಾರ್ಗಿಲ್ ಗ್ಲೋಬಲ್ ಸ್ಕಾಲರ್‌ಶಿಪ್

* ಐಐಟಿ-ಗಾಂಧಿನಗರ ವಿದ್ಯಾರ್ಥಿ ಪ್ರಜ್ಞಾನ್ ದಾಸ್ ಅವರಿಂದ ವಿಶಿಷ್ಟ ಸಾಧನೆ
* ವಿದ್ಯಾರ್ಥಿ ದಾಸ್ 2 ವರ್ಷಗಳ ಕಾಲ ಈ ಸ್ಕಾಲರ್ ಶಿಪ್ ಲಾಭವನ್ನು ಪಡೆಯಲಿದ್ದಾರೆ
* ಈ ಸ್ಕಾಲರ್‌ಶಿಪ್ ವಿದ್ಯಾರ್ಥಿಗಳಲ್ಲಿನ ನಾಯಕತ್ವವನ್ನು ಹೊರತರಲು ಹೆಲ್ಪ್ ಮಾಡಲಿದೆ

A student from IIT-Gandhinagar has got Cargill Global Scholarship
Author
Bengaluru, First Published Jul 20, 2022, 5:19 PM IST

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಗಾಂಧಿನಗರದ ವಿದ್ಯಾರ್ಥಿ ಪ್ರಜ್ಞಾನ್ ದಾಸ್ ಅವರಿಗೆ 2021-22 ನೇ ಸಾಲಿಗೆ ಕಾರ್ಗಿಲ್ ಗ್ಲೋಬಲ್ ಸ್ಕಾಲರ್‌ಶಿಪ್ ನೀಡಲಾಗಿದೆ.  ಗುಜರಾತ್ನ ಗಾಂಧಿನಗರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಯಲ್ಲಿ ಬ್ಯಾಚುಲರ್ ಆಫ್ ಟೆಕ್ನಾಲಜಿ (ಬಿಟೆಕ್) ವಿದ್ಯಾರ್ಥಿಯಾಗಿರುವ ಪ್ರಜ್ಞಾನ್ ಅವರು 2021-22 ನೇ ಸಾಲಿನ ಕಾರ್ಗಿಲ್ ಗ್ಲೋಬಲ್ ಸ್ಕಾಲರ್‌ಶಿಪ್ ಅನ್ನು ಪಡೆದಿದ್ದಾರೆ.  ದಾಸ್ ಅವರು ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ (CSE) ನಲ್ಲಿ B Tech ವಿದ್ಯಾರ್ಥಿಯಾಗಿದ್ದಾರೆ. ಕಾರ್ಯಕ್ರಮದ ಭಾಗವಾಗಿ, ದಾಸ್ ಎರಡು ವರ್ಷಗಳ ಕಾಲ ಮಹತ್ವದ ಸ್ಕಾಲರ್‌ಶಿಪ್ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ಪ್ರಜ್ಞಾನ್ ಅವರು, ಇನ್ಮುಂದೆ ಭಾರತ ಮತ್ತು ವಿದೇಶಗಳಲ್ಲಿ ಕಾರ್ಗಿಲ್ ಆಯೋಜಿಸಿದ ನಾಯಕತ್ವ ಅಭಿವೃದ್ಧಿ ಸಮ್ಮೇಳನಗಳು / ಸೆಮಿನಾರ್‌ಗಳು, ನೆಟ್‌ವರ್ಕಿಂಗ್ ಈವೆಂಟ್‌ಗಳು, ಕೇಸ್ ಸ್ಟಡಿ ಪ್ರಸ್ತುತಿಗಳು ಮತ್ತು ಒನ್-ಒನ್ ಮಾರ್ಗದರ್ಶನ ಕಾರ್ಯಕ್ರಮಗಳಿಗೆ ಹಾಜರಾಗಬಹುದು. ಭಾರತದಾದ್ಯಂತ ಕೇವಲ ಹತ್ತು ಪದವಿ ವಿದ್ಯಾರ್ಥಿಗಳು ಮಾತ್ರ ಪ್ರತಿ ವರ್ಷ ಕಾರ್ಗಿಲ್ ಗ್ಲೋಬಲ್ ಸ್ಕಾಲರ್ಸ್ ಕಾರ್ಯಕ್ರಮದ ಭಾಗವಾಗಲು ಅವಕಾಶವನ್ನು ಪಡೆಯುತ್ತಾರೆ. ಇದು ಒಂದು ವಿಶಿಷ್ಟವಾದ, ಎರಡು ವರ್ಷಗಳ ನಾಯಕತ್ವ ಅಭಿವೃದ್ಧಿ ಕಾರ್ಯಕ್ರಮವಾಗಿದೆ. ಇದು ನಾಯಕತ್ವದ ಬೆಳವಣಿಗೆಗಾಗಿ ವಿದ್ಯಾರ್ಥಿಗಳಿಗೆ ಆರ್ಥಿಕ ಬೆಂಬಲ ಮತ್ತು ಒಬ್ಬರಿಂದ ಒಬ್ಬರಿಗೆ ಮಾರ್ಗದರ್ಶನ ನೀಡುತ್ತದೆ.

ಮಾಧ್ಯಮಗಳಿಗೆ ಈ ಸಾಧನೆಯ ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಂಡ ಪ್ರಜ್ಞಾನ್  ದಾಸ್ (Progyan Das), ಈ ವರ್ಷದ ಕಾರ್ಗಿಲ್ ಗ್ಲೋಬಲ್ ಸ್ಕಾಲರ್‌ (Cargill Global Star) ಗಳಲ್ಲಿ ಒಬ್ಬರಾಗಲು ನಾನು ಸಂತೋಷಪಡುತ್ತೇನೆ. ದೇಶದಾದ್ಯಂತ ನನ್ನ ಸಹ ಪ್ರಶಸ್ತಿ ಪುರಸ್ಕೃತರ ಛಾಯಾಚಿತ್ರಗಳ ಪಕ್ಕದಲ್ಲಿರುವ ಇಮೇಲ್ ಡಾಕ್ಯುಮೆಂಟ್‌ನಲ್ಲಿ ನನ್ನ ಛಾಯಾಚಿತ್ರವನ್ನು ನೋಡಿದೆ. ಅವರು ಕೆಲವು ವಿಸ್ಮಯಕಾರಿಯಾಗಿ ಅದ್ಭುತವಾದ ಕೆಲಸಗಳನ್ನು ಮಾಡಿದ್ದಾರೆ. ಇದು ನನಗೆ ಬಹಳ ವಿನೀತ ಅನುಭವವಾಗಿದೆ.  ಕಾರ್ಗಿಲ್ ಕುರಿತ ಅಮೂಲ್ಯವಾದ ಮಾರ್ಗದರ್ಶನ ಕಾರ್ಯಕ್ರಮವನ್ನು ನಾನು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ. 

ತಮಿಳನಾಡು ಸರ್ಕಾರಿ ಶಾಲೆಗಳಲ್ಲಿ ಪ್ರತಿ ತಿಂಗಳು ಸಿನಿಮಾ ಪ್ರದರ್ಶನ
 

ಇತ್ತೀಚೆಗೆ, ಐಐಟಿ ಗಾಂಧಿನಗರ (IIT-Gandhinagar) ದ ಪಿಎಚ್‌ಡಿ ವಿದ್ವಾಂಸರಾದ ರಿಷಿರಾಜ್ ಅಧಿಕಾರಿ (RishiRaj Adhikari) ಅವರಿಗೆ ಫುಲ್‌ಬ್ರೈಟ್-ನೆಹರು ಡಾಕ್ಟರಲ್ ರಿಸರ್ಚ್ ಫೆಲೋಶಿಪ್ 2022-23 ನೀಡಲಾಗಿದೆ. ಅವರು ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರೊಫೆಸರ್ ನಿಪುನ್ ಬಾತ್ರಾ ಅವರ ಮೇಲ್ವಿಚಾರಣೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರತಿ ವರ್ಷ ಕಾರ್ಗಿಲ್ ಗ್ಲೋಬಲ್ ಸ್ಕಾಲರ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಭಾರತದಾದ್ಯಂತ 10 ಪದವಿ ವಿದ್ಯಾರ್ಥಿಗಳಿಗೆ ಮಾತ್ರ ಈ ವಿದ್ಯಾರ್ಥಿವೇತನ ಪಡೆಯುವ ಅವಕಾಶ ಇರುತ್ತೆ.  ಜೊತೆಗೆ ಎರಡು ವರ್ಷಗಳ ನಾಯಕತ್ವ ಅಭಿವೃದ್ಧಿ ಕಾರ್ಯಕ್ರಮ ಇದಾಗಿದ್ದು, ವಿದ್ಯಾರ್ಥಿಗಳಿಗೆ ಹಣಕಾಸಿನ ಬೆಂಬಲ ಮತ್ತು ಒಬ್ಬರಿಗೊಬ್ಬರು ಮಾರ್ಗದರ್ಶನ ನೀಡುತ್ತದೆ.

58ನೇ ವಯಸ್ಸಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಪಾಸಾದ ಒಡಿಶಾ ಶಾಸಕ

ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಸಾಕಷ್ಟು ಪ್ರತಿಭಾವಂತರು ಜಾಗತಿಕ ಮಟ್ಟದ ವಿದ್ಯಾರ್ಥಿ ವೇತನಗಳನ್ನು ಪಡೆಯಲು ಯಶಸ್ವಿಯಾಗುತ್ತಿದ್ದಾರೆ. ಪದವಿ ಪೂರ್ವ ಹಂತದಿಂದ ಉನ್ನತ ಶಿಕ್ಷಣ ಸಂಸ್ಥೆಗಳು ಎನಿಸಿಕೊಂಡಿರುವ ಐಐಟಿ ವಿದ್ಯಾರ್ಥಿಗಳವರೆಗೂ ಇಂಥ ಸಾಧನೆಯನ್ನು ಮಾಡಿದವರನ್ನು ನಾವು ಕಾಣಬಹುದು. ಜತೆಗೆ, ಪ್ರತಿಭಾವಂತರಿಗೆ ಇಂಥ ಅವಕಾಶಗಳು ಅರಸಿಕೊಂಡು ಬರುತ್ತವೆ ಎಂಬುದೂ ಇದರಿಂದ ಸಾಬೀತಾಗುತ್ತದೆ. ಜಾಗತಿಕ ಮಟ್ಟದ ಅಥವಾ ರಾಷ್ಟ್ರೀಯ ಮಟ್ಟದ ವಿದ್ಯಾರ್ಥಿವೇತನಗಳಿಂದ ವಿದ್ಯಾರ್ಥಿಯ ಒಟ್ಟು ಶೈಕ್ಷಣಿಕ ಜೀವನ ಉನ್ನತಿಗೆ ಕಾರಣವಾಗುತ್ತಿದೆ. ಇದರಿಂದ ಪ್ರತಿಭಾವಂತರಿಗೆ ಹೆಚ್ಚಿನ ಉನ್ನತ ಮಟ್ಟದ ಅಧ್ಯಯನ ಮಾಡಲು ಅವಕಾಶ ಕಲ್ಪಿಸುವುದು ಮಾತ್ರವಲ್ಲದೇ, ಅವರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡಲು ಇದರಿಂದ ಸಾಧ್ಯವಾಗಲಿದೆ. ಯಾವುದೇ ವಿದ್ಯಾರ್ಥಿ ವೇತನಗಳಿರಲಿ ಅದರಿಂದ ಪ್ರತಿಭಾವಂತರಿಗೆ ಉಪಯೋಗವಾಗುತ್ತಿರುವುದು ಖಚಿತವಾಗಿದೆ.

Follow Us:
Download App:
  • android
  • ios