Asianet Suvarna News Asianet Suvarna News

ಓದು ಬೇಡ ಎಂದವ ವಿಜಯಪುರಕ್ಕೇ ಫಸ್ಟ್!

ಓದು ಬಿಡ​ಲು ಹೋಗಿದ್ದ ವಿದ್ಯಾರ್ಥಿ ತಾಲೂಕಿಗೆ ಫಸ್ಟ್‌| ಸಿಂದ​ಗಿಯ ಮಾಳಪ್ಪ ಸಾಧ​ನೆ

PUC Results Malappa Who Did Not Wanted To Go To School Now  First In Vijayapura
Author
Bangalore, First Published Jul 15, 2020, 8:30 AM IST

ಸಿಂದಗಿ(ಜು.15): ಮಕ್ಕಳ ಮದುವೆ, ಕೃಷಿಗೆ, ವಿದ್ಯಾಭ್ಯಾಸಕ್ಕೆ ಲಕ್ಷಾಂತರ ರು. ಸಾಲ ಮಾಡಿ ಸೋತು ಹೋಗಿದ್ದ ತಂದೆಗೆ ನೆರವಾಗುವ ಉದ್ದೇಶದಿಂದ ತನ್ನ ವಿದ್ಯಾಭ್ಯಾಸವನ್ನೇ ಅರ್ಧಕ್ಕೆ ನಿಲ್ಲಿಸಬೇಕೆಂದಿದ್ದ ಮಾಳಪ್ಪ ನಿಂಗಪ್ಪ ಹೊಸಮನಿ ಇದೀಗ ಪಿಯುಸಿ ಪರೀಕ್ಷೆಯಲ್ಲಿ ಹುಬ್ಬೇರಿಸುವಂಥ ಸಾಧನೆ ಮೆರೆದಿದ್ದಾರೆ.

ವಿಜ​ಯ​ಪುರದ ಸಿಂದಗಿ ಪಟ್ಟಣದ ಜ್ಞಾನ ಭಾರತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಯಾಗಿರುವ ಈತ ಪಿಯುಸಿ ಫಲಿತಾಂಶದ ಕಲಾ ವಿಭಾಗದಲ್ಲಿ 600 ಅಂಕಗಳಿಗೆ 586 ಅಂಕಗಳನ್ನು ತೆಗೆದುಕೊಳ್ಳುವ ಮೂಲಕ ಶೇ.97.66 ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ.

ದ್ವಿತೀಯ ಪಿಯುಸಿ ರಿಸಲ್ಟ್: ಡಿಸ್ಟಿಂಕ್ಷನ್‌ನಲ್ಲಿ ಪಾಸಾದ್ರೂ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ

ತನ್ನ ಸಾಧನೆ ಬಗ್ಗೆ ಕನ್ನಡಪ್ರಭದೊಂದಿಗೆ ಮಾತನಾಡಿರುವ ಮಾಳಪ್ಪ, ಸಿಂದಗಿಯಲ್ಲಿಯೇ ಬಾಡಿಗೆ ರೂಮ್‌ ಮಾಡಿ ಪ್ರತಿ ತಿಂಗಳಿಗೆ .600 ಸಂದಾಯ ಮಾಡುತ್ತಿದ್ದೆ. ನನ್ನ ತಂದೆ ತಿಂಗಳಿಗೆ ಕೇವಲ .1000 ಮಾತ್ರ ನೀಡುತ್ತಿದ್ದರು. ಅದರಲ್ಲಿಯೇ 2 ವರ್ಷ ಕಷ್ಟಪಟ್ಟು ಕಲಿತೆ. ರಜೆ ಇದ್ದಾಗ ಊರಿಗೆ ಹೋದಾಗ ನಮ್ಮ ಹೊಲದಲ್ಲಿ ದುಡಿಯುತ್ತಿದ್ದೆ ಎಂದು ತಿಳಿಸಿದ್ದಾರೆ.

Follow Us:
Download App:
  • android
  • ios