ಕಡೂರು (ಅ.12): ಭ್ರಷ್ಟಾ​ಚಾ​ರ​ದಲ್ಲಿ ಮುಳು​ಗಿ​ರುವ ರಾಜ್ಯ ಕಾಂಗ್ರೆಸ್‌ ಸರ್ಕಾ​ರದ ಮುಖ್ಯ​ಮಂತ್ರಿ​ಗಳು ಮತ್ತು ಮಂತ್ರಿಗಳು ಭ್ರಷ್ಟಾ​ಚಾ​ರದಲ್ಲಿ ಸಿಕ್ಕಿ​ಕೊ​ಳ್ಳುವ ಭಯ​ದಿಂದ ಲೋಕಾ​ಯು​ಕ್ತ​ಸಂಸ್ಥೆ​ಯನ್ನು ನಾಶಗೊಳಿಸಿ​ದ್ದಾರೆ ಎಂದು ಬಿಜೆಪಿ ಹಿಂದು​ಳಿ​ದವ ವರ್ಗ​ಗಳ ರಾಜ್ಯಾ​ಧ್ಯಕ್ಷ ಬಿ.ಜೆ​. ಪುಟ್ಟಸ್ವಾಮಿ ಆರೋ​ಪಿ​ಸಿ​ದರು.

ಕಡೂರು (ಅ.12): ಭ್ರಷ್ಟಾ​ಚಾ​ರ​ದಲ್ಲಿ ಮುಳು​ಗಿ​ರುವ ರಾಜ್ಯ ಕಾಂಗ್ರೆಸ್‌ ಸರ್ಕಾ​ರದ ಮುಖ್ಯ​ಮಂತ್ರಿ​ಗಳು ಮತ್ತು ಮಂತ್ರಿಗಳು ಭ್ರಷ್ಟಾ​ಚಾ​ರದಲ್ಲಿ ಸಿಕ್ಕಿ​ಕೊ​ಳ್ಳುವ ಭಯ​ದಿಂದ ಲೋಕಾ​ಯು​ಕ್ತ​ಸಂಸ್ಥೆ​ಯನ್ನು ನಾಶಗೊಳಿಸಿ​ದ್ದಾರೆ ಎಂದು ಬಿಜೆಪಿ ಹಿಂದು​ಳಿ​ದವ ವರ್ಗ​ಗಳ ರಾಜ್ಯಾ​ಧ್ಯಕ್ಷ ಬಿ.ಜೆ​. ಪುಟ್ಟಸ್ವಾಮಿ ಆರೋ​ಪಿ​ಸಿ​ದರು.

ಚಿಕ್ಕ​ಮ​ಗ​ಳೂರಿಗೆ ತೆರ​ಳು​ವಾಗ ಕಡೂ​ರಿ​ನ​ಲ್ಲಿ ಮಾತ​ನಾ​ಡಿ​ದ​ ಅ​ವರು, ಆಡ​ಳಿತ ನಡೆ​ಸು​ತ್ತಿ​ರು​ವ ರಾಜ್ಯ ಸರ್ಕಾ​ರವು ​ಸಂಪೂರ್ಣ​ವಾಗಿ ಹಿಂದು​ಳಿ​ದ​ ವ​ರ್ಗ​ದ​ ವಿ​ರೋಧಿ ಸರ್ಕಾ​ರ​ವಾ​ಗಿ​ದ್ದು, ಆ ವರ್ಗ​ಗ​Ü​ಳಿಗೆ ​ಬಜೆಟ್‌ನಲ್ಲಿ ಇಟ್ಟಿದ್ದ ಅನು​ದಾ​ನ​ದಲ್ಲಿ ಶೇ.30 ರಷ್ಟುಮಾತ್ರ ಖರ್ಚು ​ಮಾಡಿ ಉಳಿದ ಶೇ.60 ರಷ್ಟನ್ನು ಖರ್ಚು ಮಾಡಿಲ್ಲ. ಬಿ.​ಎ​ಸ್‌. ಯಡಿ​ಯೂ​ರ​ಪ್ಪ ಅವರ ಕಾಲ​ದಲ್ಲಿ ಆ ವರ್ಗ​ಗ​ಳ ಅಭಿ​ವೃ​ದ್ಧಿಗೆ ಜಾರಿಗೆ ತಂದಿದ್ದ ಹ​ಲ​ವಾರು ಯೋಜ​ನೆಗ​ಳನ್ನು ಸಿದ್ದ​ರಾ​ಮ​ಯ್ಯ​ನ​ವರ ​ಸ​ರ್ಕಾರವು ರದ್ದುಪ​ಡಿಸಿದೆ ಎಂದರು.

ಈ ವ​ರ್ಷ ಗಂಗಾ ಕಲ್ಯಾ​ಣ, ಮೊ​ರಾರ್ಜಿ ದೇಸಾಯಿ ವಸತಿ ಶಾಲೆ ಶಾಲೆ ಕೈ ಬಿಟ್ಟಿ​ದ್ದು, ನರ್ಸಿಂಗ್‌ ವಿದ್ಯಾರ್ಥಿಗಳ ಸ್ಟೈಫಂಡ್‌ ನಿಲ್ಲಿ​ಸ​ಲಾಗಿದೆ. ವಿವಿಧ ಸಮು​ದಾ​ಯ​ಗ​ಳಿಗೆ ನೀಡು​ತ್ತಿದ್ದ .100 ಕೋಟಿ ಅನು​ದಾ​ನ​ವನ್ನು .50 ಕೋಟಿಗೆ ಇಳಿ​ಸ​ಲಾ​ಗಿ​ದೆ. ಪಾರಂಪ​ರಿ​ಕ​ವಾಗಿ ಉದ್ಯೋ​ಗ​ ಮಾ​ಡು​ತ್ತಿದ್ದ ಜನಾಂಗ​ದ ಉದ್ಯೋ​ಗ ಅ​ವ​ಕಾ​ಶ​ಕ್ಕಾಗಿ ಇಟ್ಟಿದ್ದ ಹಣ​ ತ​ಪ್ಪಿ​ಸ​ಲಾ​ಗಿ​ದೆ ಎಂದು ಪುಟ್ಟಸ್ವಾಮಿ ಆರೋ​ಪಿ​ಸಿ​ದ​ರು.