ಕಾಮುಕ ವೈದ್ಯನೊಬ್ಬ ವೃದ್ದೆ ಜೊತೆ ಅಸಭ್ಯವಾಗಿ ವ್ರರ್ತಿಸಿದ್ದಲ್ಲದೇ ಆಕೆಗೆ ಲೈಂಗಿಕ ಕಿರುಕುಳ ಸಹ ನೀಡಿರುವ ಆರೋಪ ಕೇಳಿಬಂದಿದೆ. ಮೂಳೆ ಮುರಿತಕ್ಕೊಳಗಾದ 60 ವರ್ಷದ ವೃದ್ದೆ ಜೊತೆ ವೈದ್ಯನೊಬ್ಬ ಅಶ್ಲೀಲ ಪದ ಬಳಸಿ ಅಸಭ್ಯವಾಗಿ ವರ್ತಿಸಿದ್ದಾನೆ.

ತುಮಕೂರು(ಎ.08): ಕಾಮುಕ ವೈದ್ಯನೊಬ್ಬ ವೃದ್ದೆ ಜೊತೆ ಅಸಭ್ಯವಾಗಿ ವ್ರರ್ತಿಸಿದ್ದಲ್ಲದೇ ಆಕೆಗೆ ಲೈಂಗಿಕ ಕಿರುಕುಳ ಸಹ ನೀಡಿರುವ ಆರೋಪ ಕೇಳಿಬಂದಿದೆ. ಮೂಳೆ ಮುರಿತಕ್ಕೊಳಗಾದ 60 ವರ್ಷದ ವೃದ್ದೆ ಜೊತೆ ವೈದ್ಯನೊಬ್ಬ ಅಶ್ಲೀಲ ಪದ ಬಳಸಿ ಅಸಭ್ಯವಾಗಿ ವರ್ತಿಸಿದ್ದಾನೆ.

ತುಮಕೂರು ಜಿಲ್ಲೆ ಪಾವಗಡ ಪಟ್ಟಣದ ಮೂಳೆ ವೈದ್ಯ ಶ್ರೀಕಾಂತ್ ಎಂಬ ವೈದ್ಯ ಕೆಂಚಮ್ಮ ಎಂಬ ವೃದ್ದೆಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಪಾವಗಡ ತಾಲ್ಲೂಕಿನ ಶೈಲಾಪುರ ಗ್ರಾಮದವರಾದ ಕೆಂಚಮ್ಮ ನಿನ್ನೆ ಆಸ್ಪತ್ರೆಗೆ ಹೋದಾಗ, ಕುಡಿದ ಮತ್ತಿನಲ್ಲಿದ್ದ ಶ್ರೀಕಾಂತ್ ಮುತ್ತು ಕೇಳಿದನಂತೆ. ಆಗ ಕೆಂಚಮ್ಮ ನಾನು ನಿನ್ನ ತಾಯಿಯ ಸಮಾನ ಎಂದಾಗ, ಕೆಂಚಮ್ಮನ ಮೇಲೆ ಎರಗಿ ಬಲವಂತವಾಗಿ ಕಚ್ಚಿ ಕಿರುಕುಳ ನೀಡಿದ್ದಾನಂತೆ.

ಕೆಂಚಮ್ಮ ಆಸ್ಪತ್ರೆಯಿಂದ ಓಡಿ ಹೊರ ಬಂದಿದ್ದಾರೆ. ಆದರೆ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ. ಮರ್ಯಾದೆಗೆ ಅಂಜಿದ ಕೆಂಚಮ್ಮ ಕುಟುಂಬ ಯಾವುದೇ ದೂರು ದಾಖಲಿಸಲು ಮುಂದಾಗಿಲ್ಲ ಎಂದು ತಿಳಿದುಬಂದಿದೆ.