ಚಾಲಕರಿಂದ ಹಣ ವಸೂಲಿ ಮಾಡುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದ ಆರ್'ಟಿಓ ಇನ್ಸ್'ಪೆಕ್ಟರ್
ಮೈಸೂರು (ಅ.12): ಆರ್ಟಿಓ ಇನ್ಸ್ಪೆಕ್ಟರ್ ಒಬ್ಬರು ವಾಹನ ಚಾಲಕರಿಂದ ಹಣ ವಸೂಲಿ ಮಾಡುವ ವೇಳೆ ಎಸಿಬಿ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.
ಮೈಸೂರು (ಅ.12): ಆರ್ಟಿಓ ಇನ್ಸ್ಪೆಕ್ಟರ್ ಒಬ್ಬರು ವಾಹನ ಚಾಲಕರಿಂದ ಹಣ ವಸೂಲಿ ಮಾಡುವ ವೇಳೆ ಎಸಿಬಿ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.
ಪುಣಜನೂರು ಚೆಕ್ ಪೊಸ್ಟ್ನಲ್ಲಿ ದಾಳಿ ನಡೆಸಿದ ಎಸಿಬಿ ಪೋಲಿಸರು ಆರ್ಟಿಓ ಇನ್ಸ್ಪೆಕ್ಟರ್ ಗಿರೀಶ್ ಬಾಬುರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಆರ್ಟಿಓ ಇನ್ಸ್ಪೆಕ್ಟರ್ ಗಿರೀಶ್ ಬಾಬು ವಾಹನ ಚಾಲಕರಿಂದ ಹಣ ವಸೂಲಿ ಮಾಡುತ್ತಿದ್ದರು ಎನ್ನಲಾಗಿದೆ. ವಾಹನ ಚಾಲಕರಿಂದ 2 ಸಾವಿರ ವಸೂಲಿ ಮಾಡುವ ವೇಳೆ ಎಸಿಬಿ ಡಿವೈಎಸ್ ಪಿ ಪ್ರಭಾಕರ್ ರಾವ್ ಶಿಂಧೆ, ಇನ್ಸ್ಪೆಕ್ಟರ್ ಶ್ರೀಕಾಂತ್ ನೇತೃತ್ವದ ತಂಡ ದಾಳಿ ನಡೆಸಿದೆ.