'ಬಿಜೆಪಿ ಆಡಳಿತದಲ್ಲಿ ಶೇ.6ರಷ್ಟು ಅಪರಾಧ ಪ್ರಕರಣ ನಡೆದಿತ್ತು. ನಮ್ಮ ಆಡಳಿತದಲ್ಲಿ ಶೇ. 5ರಷ್ಟು ಅಪರಾಧ ಪ್ರಕರಣ ನಡೆದಿವೆ,' ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ತಮ್ಮ ಆಡಳಿತಕ್ಕೆ ತಾವೇ ಬೆನ್ನು ತಟ್ಟಿಕೊಂಡಿದ್ದಾರೆ.


ಕಲಬುರಗಿ: 'ಬಿಜೆಪಿ ಆಡಳಿತದಲ್ಲಿ ಶೇ.6ರಷ್ಟು ಅಪರಾಧ ಪ್ರಕರಣ ನಡೆದಿತ್ತು. ನಮ್ಮ ಆಡಳಿತದಲ್ಲಿ ಶೇ. 5ರಷ್ಟು ಅಪರಾಧ ಪ್ರಕರಣ ನಡೆದಿವೆ,' ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ತಮ್ಮ ಆಡಳಿತಕ್ಕೆ ತಾವೇ ಬೆನ್ನು ತಟ್ಟಿಕೊಂಡಿದ್ದಾರೆ.

Add Asianetnews Kannada as a Preferred SourcegooglePreferred

'ಅಮಿತ್ ಶಾ ಬಂದು ಹೋದ ಮೇಲೆ ಬಿಜೆಪಿಯವರು ಕಾನೂನು ಸುವ್ಯವಸ್ಥೆ ಬಗ್ಗೆ ಮಾತನಾಡುತ್ತಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ. ಹತಾಶೆಯಿಂದ ಬಿಜೆಪಿಯವರು ಈ ಆರೋಪ ಮಾಡುತ್ತಿದ್ದಾರೆ. 
ಲೋಕಾಯುಕ್ತರ ಮೇಲೆ ಹಲ್ಲೆ ಪ್ರಕರಣದ ತನಿಖೆ ಹೊಣೆ ಕ್ರೈಂ ಜಂಟಿ ಆಯುಕ್ತ ಸತೀಶ್‌ಕುಮಾರ್‌ಗೆ ವಹಿಸಲಾಗಿದೆ. ಇಂದು ಸಂಜೆಯೊಳಗೆ ವರದಿ ನೀಡಲಿದ್ದಾರೆ. ಭದ್ರತೆ ಲೋಪಕ್ಕೆ ಸಂಬಂಧಿಸಿದಂತೆ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ,' ಎಂದು ಭರವಸೆ ನೀಡಿದರು.