Asianet Suvarna News Asianet Suvarna News

ಪ್ರೇಮಿಗಳಿಗೆ ವಿಲನ್ ಆದ ಸಬ್ ಇನ್ಸ್'ಪೆಕ್ಟರ್: ಮದುವೆ ಮಾಡಿಸುವುದಾಗಿ ಜೈಲಿಗೆ ಕಳುಹಿಸಿದ

ಇದು ಸಬ್'ಇನ್ಸೆ ಪೆಕ್ಟರ್ ಒಬ್ಬ ಅಂತರ್ ಧರ್ಮೀ ಜೋಡಿಗಳನ್ನು ಬೇರೆ ಮಾಡಿ ಪ್ರಿಯಕರನನ್ನು ಜೈಲಿಗೆ ಕಳುಹಿಸಲು ಪ್ಲಾನ್ ಮಾಡಿದ ಕಥೆ. ಆದರೆ ಅದೃಷ್ಟವಶಾತ್ ಆ ಜೋಡಿಹಕ್ಕಿಗಳು ಪಿಎಸ್ಐ ಕುತಂತ್ರದಿಂದ ಪಾರಾಗಿದ್ದಾರೆ. ಇದು ಶಿವಮೊಗ್ಗದ ಮುಸ್ಲಿ ಯುವಕ ಮತ್ತು ಕ್ರಿಶ್ಚಿಯನ್ ಯುವತಿಯ ಪ್ರೇಮ್ ಕಹಾನಿ. ಈ ಕುರಿತಾದ ಒಂದು ಏಕ್ಸ್ ಕ್ಲೂಸಿವ್ ವರದಿ ಇಲ್ಲಿದೆ.

Police Sub Inspector Became Villain In Lovers Life

ಶಿವಮೊಗ್ಗ(ಎ.20): ಇದು ಸಬ್'ಇನ್ಸೆ ಪೆಕ್ಟರ್ ಒಬ್ಬ ಅಂತರ್ ಧರ್ಮೀ ಜೋಡಿಗಳನ್ನು ಬೇರೆ ಮಾಡಿ ಪ್ರಿಯಕರನನ್ನು ಜೈಲಿಗೆ ಕಳುಹಿಸಲು ಪ್ಲಾನ್ ಮಾಡಿದ ಕಥೆ. ಆದರೆ ಅದೃಷ್ಟವಶಾತ್ ಆ ಜೋಡಿಹಕ್ಕಿಗಳು ಪಿಎಸ್ಐ ಕುತಂತ್ರದಿಂದ ಪಾರಾಗಿದ್ದಾರೆ. ಇದು ಶಿವಮೊಗ್ಗದ ಮುಸ್ಲಿ ಯುವಕ ಮತ್ತು ಕ್ರಿಶ್ಚಿಯನ್ ಯುವತಿಯ ಪ್ರೇಮ್ ಕಹಾನಿ. ಈ ಕುರಿತಾದ ಒಂದು ಏಕ್ಸ್ ಕ್ಲೂಸಿವ್ ವರದಿ ಇಲ್ಲಿದೆ.

ಸುನೀಲ್ ಕುಮಾರ್ ಶಿವಮೊಗ್ಗದ ಕೋಟೆಯ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸೆ ಪೆಕ್ಟರ್. ಬಾಳಿ ಬದುಕಬೇಕಿದ್ದ ಅಂತರ್ ಧರ್ಮೀಯ ಜೋಡಿಯೊಂದನ್ನು ಬೇರೆ ಮಾಡಿದ ಕುಖ್ಯಾತಿಗೆ ಒಳಗಾಗಿದ್ದಾನೆ. ಈ ಪೊಲೀಸಪ್ಪನ ಕೆಂಗಣ್ಣಿಗೆ ಗುರಿಯಾಗಿದ್ದು  ಸೈಯದ್ ಅಹ್ಮದ್ ಹಾಗೂ ರಿಷಲ್ ಮಚಾಡೋ.  ಯುವಕ ಮುಸ್ಲಿಮನಾದರೆ, ಯುವತಿ ಕ್ರಿಶ್ಚಿಯನ್. ಪೋಷಕರನ್ನು ಒಪ್ಪಿಸಿ ಮದುವೆಗೆ ಸಿದ್ಧವಾಗಿದ್ದ ಈ ಜೋಡಿಗೆ ಸಬ್ ಇನ್ಸೆ ಪೆಕ್ಟರ್ ಸುನೀಲ್ ವಿಲನ್ ಆಗಿದ್ದ. ಪ್ರಿಯತಮೆಯಿಂದ ಅಪಹರಣದ ಹೇಳಿಕೆ ಕೊಡಿಸಿ ಜೈಲಿಗಟ್ಟಲು ಪ್ಲಾನ್ ಹಾಕಿದ್ದ.

ಇದೇ ತಿಂಗಳ 5 ರಂದು ಮನೆ ತೊರೆದ ಈ ಪ್ರೇಮಿಗಳು ಮಂಗಳೂರು, ಉಡುಪಿ ಸುತ್ತಾಡಿ ಅಲ್ಲಿಯೇ ಬಾಡಿಗೆ ಮನೆಯೊಂದನ್ನು ಮಾಡಿಕೊಂಡು ಜೀವನ ನಡೆಸಲು ಮುಂದಾಗಿದ್ದರು. ಆಗ ಯುವತಿಯ ತಂದೆ ಶಿವಮೊಗ್ಗದ ಕೋಟೆ ಪೋಲಿಸರಿಗೆ ಮಗಳು ಕಾಣೆಯಾಗಿರುವ ಬಗ್ಗೆ ದೂರೊಂದನ್ನು ನೀಡಿದ್ದಾರೆ. ಆಗ ಈ ಜೋಡಿ ಶಿವಮೊಗ್ಗ ಎಸ್ಪಿ ಅಭಿನವ್ ಖರೆಯವರಿಗೆ ವಾಟ್ಸ್ ಆಪ್ ಮೂಲಕ ತಮ್ಮನ್ನು ಪೋಲಿಸರಿಂದ ರಕ್ಷಿಸುವಂತೆ , ತಾವಿಬ್ಬರೂ ಚೆನ್ನಾಗಿ ಬದುಕಿ ಜೀವನ ಮಾಡುವ ಅಕಾಂಕ್ಷೆ ಹೊಂದಿರುವುದಾಗಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಇಷ್ಟಾದ ಬಳಿಕ ಯುವತಿ ತಂದೆ ರಿಚರ್ಡ ಮಚಾಡೋ ಇಬ್ಬರಿಗೂ ತಾವೇ ಮದುವೆ ಮಾಡಿಸುವುದಾಗಿ ಮನೆಗೆ ಬರುವಂತೆ ಕರೆ ಮಾಡಿದ್ದಾರೆ. ಕೊನೆಗೆ ಎಪ್ರಿಲ್ 11 ಕ್ಕೆ ಕೋಟೆ ಪೋಲಿಸ್ ಠಾಣೆಗೆ ಬಂದ ಜೋಡಿಯನ್ನು ಬೇರೆ ಮಾಡುವ ಸ್ಕೆಚ್ ಹಾಕಿದ್ದ ಸಬ್ ಇನ್ಸ್ ಪೆಕ್ಟರ್ ಸುನೀಲ್ ಕುಮಾರ್.  ಹುಡುಗಿಯ ಪೋಷಕರ ಜೊತೆಗೂಡಿ  ಸೈಯದ್ ಅಹ್ಮದ್ ಯುವತಿಯನ್ನು ಅಪಹರಣ ಮಾಡಿದ್ದಾನೆಂದು ಹೇಳಿಕೆ ಪಡೆದು ಜೈಲಿಗೆ ಕಳುಹಿಸುವ ತಂತ್ರ ಹೂಡಿದ್ದ.

ಈ ಮಧ್ಯೆ ಎಸ್ಪಿಗೆ ಈ ವಿಷಯ ತಿಳಿದು ಜೋಡಿಯನ್ನು ಕಚೇರಿಗೆ ಕರೆಸಿಕೊಂಡು ವಿಚಾರಣೆ ನಡೆಸಿದ್ದಾರೆ.  ಆಗ ಈ ಅಪಹರಣದ ಹೇಳಿಕೆ ಬಗ್ಗೆ ಎಸ್ಪಿ ಅಭಿನವ್ ಕರೆಗೆ ಅನುಮಾನ ಮೂಡಿದೆ. ಜೊತೆಗೆ ಲಾಡ್ಜ್ ನ ಸಿಸಿ ಕ್ಯಾಮರಾ ಅಪಹರಣದ ಸುಳ್ಳು ಹೇಳಿಕೆಯ ಬಣ್ಣ ಬಯಲು ಮಾಡಿತ್ತು.

ಸದ್ಯ ಪಿಎಸ್ಐ ಕುಮ್ಮಕ್ಕಿನಿಂದ ಜೈಲು ಶಿಕ್ಷೆಯಿಂದ ಪಾರಾದ ಯುವಕ ಪ್ರೇಮಿಯನ್ನು ಕಳೆದುಕೊಂಡಿದ್ದಾನೆ. ಆದ್ರೆ ಪಿಎಸ್ಐ ಸುನೀಲ್ ಕುಮಾರ್ ಮಾತ್ರ ಪೀಡಿಸುತ್ತಿದ್ದು ಯುವಕ ಕಂಗಾಲಾಗಿದ್ದಾನೆ.

Follow Us:
Download App:
  • android
  • ios