ನಾಯಕನಹಟ್ಟಿ (ಅ.12): ತನ್ನ ಸಹಚರನೊಂದಿಗೆ ತೆರಳಿ ಮನೆಗೆ ವಾಪಸ್ಸು ಬಾರದೇ ನಿಗೂಢವಾಗಿ ಕಾಣೆಯಾಗಿದ್ದ ವ್ಯಕ್ತಿ ಬುಧವಾರ ಮರಳಿ ಗ್ರಾಮಕ್ಕೆ ಬಂದಿರುವ ಘಟನೆ ಪಟ್ಟಣದ ಅಂಬೇಡ್ಕರ್‌ ಕಾಲೋನಿಯಲ್ಲಿ ನಡೆದಿದೆ.

ನಾಯಕನಹಟ್ಟಿ (ಅ.12): ತನ್ನ ಸಹಚರನೊಂದಿಗೆ ತೆರಳಿ ಮನೆಗೆ ವಾಪಸ್ಸು ಬಾರದೇ ನಿಗೂಢವಾಗಿ ಕಾಣೆಯಾಗಿದ್ದ ವ್ಯಕ್ತಿ ಬುಧವಾರ ಮರಳಿ ಗ್ರಾಮಕ್ಕೆ ಬಂದಿರುವ ಘಟನೆ ಪಟ್ಟಣದ ಅಂಬೇಡ್ಕರ್‌ ಕಾಲೋನಿಯಲ್ಲಿ ನಡೆದಿದೆ.

ಪಟ್ಟಣದ ತಿಪ್ಪೇಸ್ವಾಮಿ ಕಾಣೆಯಾಗಿದ್ದ ವ್ಯಕ್ತಿ. ಮನುಮೈನಹಟ್ಟಿಗ್ರಾಮದ ವಸಂತಕುಮಾರ್‌ ಅ.4ರಂದು ಖಾಸಗಿ ಕೆಲಸದ ನಿಮಿತ್ತ ತಿಪ್ಪೇಸ್ವಾಮಿ ಅವರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಕೆಲಸ ಮುಗಿದ ಮೇಲೆ ವಾಪಸ್ಸು ಬರುವಾಗ ಸ್ನೇಹಿತ ತಿಪ್ಪೇಸ್ವಾಮಿ ಬಸ್‌ ನಿಲ್ದಾಣದ ಬಳಿ ಮೂರ್ಛೆ​ ಹೋ​ಗಿ​ದ್ದರು. ಸ್ನೇಹಿತ ವಸಂತಕುಮಾರ್‌ ಇದನ್ನು ಗಮನಿಸಿದ್ದ​ರಾ​ದ​ರೂ, ತಿಪ್ಪೇ​ಸ್ವಾ​ಮಿ ಅ​ವ​ರನ್ನು ಅಲ್ಲಿಯೇ ಬಿಟ್ಟು ಬಂದಿದ್ದರು. 6 ದಿನಗಳಾದರೂ ತಿಪ್ಪೇಸ್ವಾಮಿ ಕಂಡುಬಾರದ ಹಿನ್ನೆಲೆಯಲ್ಲಿ ಅವ​ರ ಕುಟುಂದವರು ಅ.9ರಂದು ವಸಂತಕುಮಾರ ಅವ​ರು ತಿಪ್ಪೇಸ್ವಾಮಿಯನ್ನು ಕರೆದುಕೊಂಡು ಹೋಗಿದ್ದರೆಂದು ಆರೋ​ಪಿ​ಸಿ, ನಾಯಕನಹಟ್ಟಿಪೊಲೀಸ್‌ ಠಾಣೆಗೆ ದೂರು ನೀಡಿದ್ದ​ರು.

ದೂರಿನ ಮೇರೆಗೆ ಪ್ರಕ​ರಣ ದಾಖ​ಲಿ​ಸಿದ ಪೊಲೀಸರು ವಸಂತಕುಮಾರನನ್ನು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದರು. ಬಳಿಕ ವಸಂತಕುಮಾರನೊಂದಿಗೆ ಬೆಂಗಳೂರಿಗೆ ತೆರಳಿದ ಪೊಲೀ​ಸರು ಪರಿಶೀಲನೆ ನಡೆಸಿದರು. ಅಲ್ಲಿಯೂ ಸುಳಿವು ಪತ್ತೆಯಾಗಲಿಲ್ಲ. ಮಂಗಳವಾರ ಮರಳಿ ಚಳ್ಳಕೆರೆಗೆ ಬಂದರು. ವಸಂತಕುಮಾರನ ಸ್ನೇಹಿತ, ಆಟೋ ಚಾಲಕ ನಾಗರಾಜ ಹಾಗೂ ಕಾಣೆಯಾದ ತಿಪ್ಪೇಸ್ವಾಮಿ ಸ್ನೇಹಿತ ಮಲ್ಲೇಶನನ್ನು ಪೊಲೀಸರು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದರು. ಈ ಸಮಯದಲ್ಲಿ ಕಾಣೆಯಾಗಿದ್ದ ತಿಪ್ಪೇಸ್ವಾಮಿ ಬುಧವಾರ ಬೆಳಗ್ಗೆ ನಾಯಕನಹಟ್ಟಿಗೆ ಆಗಮಿಸಿದ್ದಾರೆ.

ತಿಪ್ಪೇಸ್ವಾಮಿ ಅವ​ರನ್ನು ಚಳ್ಳಕೆರೆ ಪೊಲೀಸ್‌ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದು, ಆಸ್ಪತ್ರೆಗೆ ದಾಖಲಿಸಲಾ​ಗಿದೆ. ಪೊಲೀ​ಸರು ಸ್ನೇಹಿತ ವಸಂತಕುಮಾರ್‌, ಮಲ್ಲೇಶ ಹಾಗೂ ನಾಗರಾಜನನ್ನು ಠಾಣೆಗೆ ಕರೆಯಿಸಿ ಹೇಳಿಕೆ ಪತ್ರಕ್ಕೆ ಸಹಿ ಪಡೆದು ಮನೆಗೆ ಕಳುಹಿಸಿದ್ದಾರೆ. ಕಾಣೆಯಾಗಿದ್ದ ತಿಪ್ಪೇ​ಸ್ವಾಮಿ ಮರಳಿ ಮನೆ ಸೇರಿ​ದ್ದ​ರಿಂದ ಕುಟುಂಬ​ದ​ವ​ರಲ್ಲಿ ಸಂತಸ ಮನೆ ಮಾಡಿ​ದೆ.