ಇಲ್ಲಿನ ಕಾರ್ಮಿಕ ಇಲಾಖೆ ಇನ್ಸ್​ಪೆಕ್ಟರ್ ಬಸಯ್ಯ ಲಂಚ ತೆಗೆದುಕೊಳ್ಳುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.  

ಕೊಪ್ಪಳ (ಅ.20): ಇಲ್ಲಿನ ಕಾರ್ಮಿಕ ಇಲಾಖೆ ಇನ್ಸ್​ಪೆಕ್ಟರ್ ಬಸಯ್ಯ ಲಂಚ ತೆಗೆದುಕೊಳ್ಳುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಕೊಪ್ಪಳ ನಗರದ ದಿಡ್ಡಿಕೇರಿ ನಿವಾಸಿ ನಾಸಿರ್​ ಹುಸೇನ್ 2 ತಿಂಗಳ ಹಿಂದೆ ಮೃತಪಟ್ಟಿದ್ದರು. ಅವರ ಪತ್ನಿ ಅಮ್ಮಜಾನ್​ ಪತಿಯ ಅಂತ್ಯಕ್ರಿಯೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದರು.

ಅಂತ್ಯಕ್ರಿಯೆ ಪರಿಹಾರ ಕೊಡಬೇಕಾದರೆ 2 ಸಾವಿರ ಲಂಚ ಕೊಡಿ ಎಂದು ಕೇಳುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.