ನನ್ನ ಮೇಲಿನ ಭಯದಿಂದಾಗಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳು ಒಟ್ಟಾಗಿ ತೊಡೆ ತಟ್ಟುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಮೈಸೂರು (ಅ.31): ನನ್ನ ಮೇಲಿನ ಭಯದಿಂದಾಗಿ ಚಾಮುಂಡೇಶ್ವರಿಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳುಒಟ್ಟಾಗಿ ತೊಡೆ ತಟ್ಟುತ್ತಿದ್ದಾರೆ ಎಂದು ಮುಖ್ಯಮಂತ್ರಿಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಮೈಸೂರಿನಲ್ಲಿ ಸುದ್ದಿಗಾರರೊಡನೆಮಾತನಾಡಿದ ಸಿದ್ದರಾಮಯ್ಯ ಅವರು, ಎರಡೂಪಕ್ಷಗಳು ನನ್ನನ್ನೇ ಗುರಿಯಾಗಿಸಿಕೊಂಡು ತೊಡೆತಟ್ಟುತ್ತಿದ್ದಾರೆ. ನನ್ನ ಮೇಲಿನ ಭಯದಿಂದ ಹಾಗೇಹೇಳಿಕೆ ನೀಡುತ್ತಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿಎಲ್ಲರೂ ಒಂದಾಗಿ ನನ್ನ ವಿರುದ್ಧ ತೊಡೆ ತಟ್ಟಿದ್ದಾರೆ.ರಾಜ್ಯದ ಜನತೆ ನನ್ನ ಪರವಾಗಿದ್ದಾರೆ ಎಂಬಭಯದಿಂದ ಅವರೆಲ್ಲರಿಗೂ ನನ್ನ ಕಂಡರೆ ಭಯವಿದೆಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿನಡೆಸಿದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನನ್ನನ್ನು ಸೋಲಿಸಲುಶತಾಯಗತಾಯ ಯತ್ನಿಸುತ್ತಿದ್ದಾರೆ. ಯಾರೂ ನನ್ನನ್ನು
ಗುರಿ ಮಾಡಿಕೊಳ್ಳಲು ಸಾಧ್ಯವಿಲ್ಲ. ರಾಜ್ಯದಕಾಂಗ್ರೆಸ್ ಆಡಳಿತ ಸಹಿಸಿಕೊಳ್ಳದೆ ಸುಮ್ಮನೆ ಆರೋಪಮಾಡಲಾಗುತ್ತಿದೆ. ಬಿಜೆಪಿಯವರಿಗೆ ಸುಳ್ಳುಹೇಳೋದು ಬಿಟ್ಟರೆ ಬೇರೇನು ಗೊತ್ತಿಲ್ಲ. ಬಿಜೆಪಿರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನಿಗೆ ಏನೂಗೊತ್ತಿಲ್ಲ. ಬಿಜೆಪಿಯವರಷ್ಟು ಕೆಟ್ಟ ರಾಜಕೀಯಮಾಡುವವರು ದೇಶದಲ್ಲಿಯೇ ಇಲ್ಲ.ಪ್ರಧಾನಿ ನರೇಂದ್ರ ಮೋದಿಗೆ ಬರಿ ಆರೋಪಮಾಡುವುದೇ ಕೆಲಸ. ಯಡಿಯೂರಪ್ಪ ಮತ್ತು ಕೇಂದ್ರಸಚಿವರ ವಿರುದ್ಧ ಹಲವು ಪ್ರಕರಣಗಳಿವೆ.ಹೀಗಿರುವಾಗ ಸಚಿವ ಜಾಜರ್್ ರಾಜೀನಾಮೆ ಕೇಳುವನೈತಿಕತೆ ಬಿಜೆಪಿಗೆ ಇಲ್ಲಎಂದು ಸಿಎಂ ಹೇಳಿದ್ದಾರೆ.
ಬೆಂಗಳೂರಲ್ಲಿ ರಸ್ತೆ ಗುಂಡಿಮುಚ್ಚುವ ಕೆಲಸವನ್ನು ನ.6ರವರೆಗೆ ವಿಸ್ತರಿಸಲಾಗಿದೆ.ಗಡುವು ವಿಸ್ತರಿಸುವಂತೆ ಮೇಯರ್ ಮತ್ತುಆಯುಕ್ತರು ಕೋರಿದ್ದ ಹಿನ್ನೆಲೆಯಲ್ಲಿ ದಿನಾಂಕವಿಸ್ತರಿಸಲಾಗಿದೆಎಂದು ಅವರು ಹೇಳಿದರು.
