ಚಳ್ಳಕೆರೆ (ಅ.13): ನಗರದ ಬೆಂಗಳೂರು ರಸ್ತೆಯ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‌ನ ಲಾಕರ್‌ ಒಡೆದು ಕಳವಿಗೆ ಯತ್ನಿ​ಸಿ​ರುವ ಘಟನೆ ನಡೆ​ದಿ​ದೆ.

ಚಳ್ಳಕೆರೆ (ಅ.13): ನಗರದ ಬೆಂಗಳೂರು ರಸ್ತೆಯ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‌ನ ಲಾಕರ್‌ ಒಡೆದು ಕಳವಿಗೆ ಯತ್ನಿ​ಸಿ​ರುವ ಘಟನೆ ನಡೆ​ದಿ​ದೆ.

ದಸರಾ ಹಬ್ಬದ ಹಿನ್ನೆ​ಲೆ​ಯಲ್ಲಿ ಕಳೆದ ಶನಿವಾರದಿಂದ ಬುಧವಾರದ ತನಕ ಒಟ್ಟು 5 ದಿನಗಳ ಕಾಲ ಬ್ಯಾಂಕ್‌ಗೆ ರಜೆ ಇತ್ತು. ಈ ಅವಧಿಯಲ್ಲೇ ಬ್ಯಾಂಕಿ​ನಲ್ಲಿ ಕಳ್ಳ​ರು ಕಳ​ವಿಗೆ ಯತ್ನಿ​ಸಿದ್ದಾರೆ. ಬ್ಯಾಂಕ್‌ನ ಕೆಳಭಾಗದ ರೋಲಿಂಗ್‌ ಶೆಟರ್‌ ಬೀಗವನ್ನು ಒಡೆದು ಒಳನುಗ್ಗಿರುವ ಕಳ್ಳರು ಹಿಂಬದಿಯಿಂದ ಮೇಲೆ ಹತ್ತಿ ಕಿಟಕಿಯ ಗ್ರೀಲ್‌ ಕತ್ತರಿಸಿದ್ದಾರೆ. ಬ್ಯಾಂಕ್‌ನ ಸುರಕ್ಷಿತ ಲಾಕರ್‌ ಇರುವ ಜಾಗವನ್ನು ತಲುಪಿದ್ದಾರೆ. ಆದರೆ, ಲಾಕರ್‌ ಒಡೆಯಲು ಇನ್ನಿಲ್ಲದ ಪ್ರಯತ್ನಗಳನ್ನು ನಡೆಸಿ ವಿಫಲರಾಗಿ ಬರಿ​ಗೈ​ಯಲ್ಲಿ ಹಿಂದಿ​ರು​ಗಿ​ದ್ದಾ​ರೆ.

ಗುರುವಾರ ಬೆಳಗ್ಗೆ ಬ್ಯಾಂಕ್‌ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದಾಗ ಕಳ್ಳರು ಬ್ಯಾಂಕಿ​ನಲ್ಲಿ ಕಳ​ವಿಗೆ ಯತ್ನಿ​ಸಿ​ರು​ವುದು ಗಮ​ನಕ್ಕೆ ಬಂದಿ​ದೆ. ಕೂಡಲೇ ಬ್ಯಾಂಕ್‌ ವ್ಯವಸ್ಥಾಪಕರು ಪೊಲೀ​ಸ​ರಿಗೆ ದೂರು ನೀಡಿ​ದ​ರು. ಸುದ್ದಿ ತಿಳಿದ ಕೂಡಲೇ ವೃತ್ತ ನಿರೀಕ್ಷಕ ಕೆ.ಸಮೀವುಲ್ಲಾ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ​ದರು. ಪಿಎಸ್‌ಐ ಎನ್‌.ವೆಂಕಟೇಶ್‌ ಪ್ರಕರಣ ಬಗ್ಗೆ ವಿಚಾ​ರಣೆ ಮುಂದು​ವ​ರಿ​ಸಿ​ದ್ದಾ​ರೆ.

ಬೇಜವಾಬ್ದಾರಿ: ಯಾವುದೇ ಬ್ಯಾಂಕ್‌ಗಳಲ್ಲಿ ಕಡ್ಡಾಯವಾಗಿ ಸಿ.ಸಿ. ಟಿ.ವಿ. ಕ್ಯಾಮೆರಾ ವ್ಯವಸ್ಥೆ ಹೊಂದಿ​ರ​ಬೇಕು ಎಂಬ ನಿಯಮವಿದೆ. ಸೈರನ್‌ ಸಹ ಅಳವಡಿಸಬೇಕಿದೆ. ಆದರೆ, ಬ್ಯಾಂಕ್‌ನಲ್ಲಿ ಇಂಥ ವ್ಯವ​ಸ್ಥೆ​ಗಳೇ ಇಲ್ಲ. ಇದೇ ಕಳ್ಳರು ಕಳ​ವಿಗೆ ಯತ್ನಿ​ಸಲು ಕಾರ​ಣ​ವಾ​ಗಿದೆ.