ಕಾರವಾರದಲ್ಲಿ ಮುಸ್ಲಿಂ ಕುಟುಂಬಗಳಿಗೆ ಬಹಿಷ್ಕಾರ, ದೂರು ನೀಡಿದರೂ ಜಿಲ್ಲಾಡಳಿತ ಮೌನ
ಶಾಂತಿಪ್ರಿಯ ಜಿಲ್ಲೆ, ಸೌಹಾರ್ದತೆಗೆ ಹೆಸರುವಾಸಿಯಾಗಿದ್ದ ಜಿಲ್ಲೆ ಈಗ ಬಹಿಷ್ಕಾರದ ಮೂಲಕ ಸುದ್ದಿಯಾಗಿದೆ. ಧರ್ಮದ ಹೆಸರನ್ನು ಬಳಸಿ ಕ್ಷುಲಕ್ಕ ಕಾರಣಕ್ಕೆ 25 ವರ್ಷಗಳಿಂದ ಬಹಿಷ್ಕಾರ ಹಾಕಲಾಗಿದೆ ಇದೆಲ್ಲಿ ಅಂತೀರಾ? ಈ ಸ್ಟೋರಿ ಓದಿ
ಕಾರವಾರ(ಎ.18): ಶಾಂತಿಪ್ರಿಯ ಜಿಲ್ಲೆ, ಸೌಹಾರ್ದತೆಗೆ ಹೆಸರುವಾಸಿಯಾಗಿದ್ದ ಜಿಲ್ಲೆ ಈಗ ಬಹಿಷ್ಕಾರದ ಮೂಲಕ ಸುದ್ದಿಯಾಗಿದೆ. ಧರ್ಮದ ಹೆಸರನ್ನು ಬಳಸಿ ಕ್ಷುಲಕ್ಕ ಕಾರಣಕ್ಕೆ 25 ವರ್ಷಗಳಿಂದ ಬಹಿಷ್ಕಾರ ಹಾಕಲಾಗಿದೆ ಇದೆಲ್ಲಿ ಅಂತೀರಾ? ಈ ಸ್ಟೋರಿ ಓದಿ
ಕಾರವಾರ ತಾಲೂಕಿನ ಚಿತ್ತಾಕುಲ ಗ್ರಾಮದ ಮುಸ್ಲಿಂ ಸಮುದಾಯದವರೆಲ್ಲ ಕಳೆದ 25 ವರ್ಷಗಳಿಂದ ನರಕಯಾತನೆ ಅನುಭವಿಸುತ್ತಿದ್ದಾರೆ. ಆಂಧ್ರ ಮೂಲದ ದಾವರ್ ಅಲಿ ಶಾ ಎಂಬ ಗುರುವಿನ ಶಿಷ್ಯರೆಂಬ ಒಂದು ಕಾರಣಕ್ಕೆ ಕಳೆದ 25 ವರ್ಷಗಳಿಂದ ಬಹಿಷ್ಕಾರಕ್ಕೊಳಗಾಗಿದ್ದಾರೆ. ಇದರಿಂದ ಬೇಸತ್ತ ಇವರೆಲ್ಲ ಈ ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾರೆ.
ಇನ್ನೂ ಈ 12 ಕುಟುಂಬದವರಿಗೆ ಅವರ ಸಮುದಾಯದಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳಿಗೂ ಪ್ರವೇಶವಿಲ್ಲ. ದೊಡ್ಡವರಿಗಷ್ಟೇ ಅಲ್ಲ, ಪುಟಾಣಿ ಮಕ್ಕಳು ಬಹಿಷ್ಕಾರದ ಸಂಕೋಲೆ ಸುತ್ತಿಕೊಂಡಿದೆ. ಅವರು ಶಾಲೆಗಳಲ್ಲಿ ಇತರ ಮಕ್ಕಳ ಜೊತೆ ಮಾತನಾಡುವಂತೆಯೂ ಇಲ್ಲ, ಆಟವನ್ನೂ ಆಡುವಂತಿಲ್ಲ.. ಇನ್ನೂ ಈ ಬಗ್ಗೆ ಜಿಲ್ಲಾಡಳಿತಕ್ಕೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲವಂತೆ ಇದರಿಂದ ಇವರು ಇನ್ನಷ್ಟು ಕಿನ್ನತೆಗೆ ಒಳಗಾಗಿದ್ದಾರೆ.
ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತು, ಇವರ 25 ವರ್ಷಗಳ ನರಕಯಾತನೆಗೆ ಇತಿಶ್ರೀ ಹೇಳುತ್ತಾ ಕಾದು ನೋಡಬೇಕಿದೆ.