Asianet Suvarna News Asianet Suvarna News

ಅ.11 ರಿಂದ ಧಾರವಾಡದಲ್ಲಿ ರಾಜ್ಯ ಮಟ್ಟದ ಹೊನಲು-ಬೆಳಕಿನ ಕಬಡ್ಡಿ

ರಾಜ್ಯ ಮಟ್ಟದ ಹೊನಲು-ಬೆಳಕು ಕಬಡ್ಡಿ|  ಮೊದಲ ಬಾರಿಗೆ ಅಂತಾ​ರಾಷ್ಟ್ರೀಯ ಮಟ್ಟದ ಮೈದಾ​ನ​ದಲ್ಲಿ ಪಂದ್ಯ​ಗ​ಳು| ರಾಜ್ಯದ 30 ಜಿಲ್ಲೆ​ಗ​ಳಿಂದ 800 ಕ್ರೀಡಾ​ಪ​ಟು​ಗಳು ಭಾಗಿ| ಬಾಲಕ- ಬಾಲಕಿಯರಿಗೆ ವಿವಿಧ ಕಾಲೇಜುಗಳಲ್ಲಿ ಪ್ರತ್ಯೇಕ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ|

State Level Kabaddi Tournament Will be Held at Dharwad on Tomorrow
Author
Bengaluru, First Published Oct 10, 2019, 7:30 AM IST

ಧಾರ​ವಾಡ(ಅ.10): ಮೊಟ್ಟಮೊದಲ ಬಾರಿಗೆ ರಾಜ್ಯ ಮಟ್ಟದ ಪದವಿಪೂರ್ವ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಹೊನಲು- ಬೆಳಕಿನ ಕಬಡ್ಡಿ ಪಂದ್ಯಾ​ವ​ಳಿ​ಯ​ನ್ನು ಅ. 11 ರಿಂದ 3 ದಿನ​ಗಳ ಕಾಲ ನಗರದ ಆರ್‌.ಎನ್‌. ಶೆಟ್ಟಿ ಒಳಾಂಗಣ ಕ್ರೀಡಾಂಗಣದ ಮ್ಯಾಟ್‌ (ಅಂತಾರಾಷ್ಟ್ರೀಯ ಗುಣಮಟ್ಟದ ಮೈದಾನ) ಮೇಲೆ ನಡೆ​ಸ​ಲಾ​ಗು​ತ್ತಿದೆ ಎಂದು ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ ಪ್ರಭಾರಿ ಉಪ ನಿರ್ದೇ​ಶ​ಕಿ ಶಾರದಾ ಕಿರೇ​ಸೂರ ಹೇಳಿದ್ದಾರೆ.

ನಗರದಲ್ಲಿ ಬುಧ​ವಾರ ಸುದ್ದಿ​ಗೋ​ಷ್ಠಿ​ಯಲ್ಲಿ ಮಾತ​ನಾ​ಡಿದ ಅವರು, ರಾಷ್ಟ್ರೀಯ ಮಟ್ಟದ ಪಂದ್ಯಾ​ವ​ಳಿಯು ಕಡ್ಡಾ​ಯ​ವಾಗಿ ಮ್ಯಾಟ್‌ ಮೇಲೆಯೇ ಆಡಿ​ಸ​ಲಾ​ಗ​ತ್ತಿದೆ. ಆದರೆ, ರಾಜ್ಯ ಮಟ್ಟದ ಕ್ರೀಡೆಗಳು ಮಾತ್ರ ಬಯಲು ಮೈದಾ​ನ​ದಲ್ಲಿ ನಡೆ​ಸ​ಲಾ​ಗು​ತ್ತಿತ್ತು. ಇದೇ ಮೊದಲ ಬಾರಿಗೆ ಧಾರ​ವಾ​ಡ​ದಲ್ಲಿ ನಡೆ​ಯ​ಲಿ​ರುವ ಕಬಡ್ಡಿ ಪಂದ್ಯ​ಗಳು ಅಂತಾ​ರಾ​ಷ್ಟ್ರೀಯ ಗುಣ​ಮ​ಟ್ಟದ ಮೈದಾ​ನ​ದಲ್ಲಿ ನಡೆ​ಸ​ಲಾ​ಗು​ತ್ತಿದೆ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಜ. ತೋಂಟದಾರ್ಯ ವಿದ್ಯಾಪೀಠದ ಹಿರೇಮಲ್ಲೂರ ಈಶ್ವರನ್‌ ಪದವಿಪೂರ್ವ ಕಾಲೇಜು ಸಹ​ಯೋ​ಗ​ದಲ್ಲಿ ಈ ಕ್ರೀಡಾ​ಕೂಟವು ನಾಕೌಟ್‌ ಪದ್ಧತಿಯಲ್ಲಿ ನಡೆಯ​ಲಿದೆ. ರಾಜ್ಯದ 30 ಜಿಲ್ಲೆಗಳ 800 ಬಾಲಕ- ಬಾಲಕಿಯರು ಭಾಗವಹಿಸಿದ್ದಾರೆ. ಒಳಾಂಗಣದ ಕ್ರೀಡಾಂಗಣದಲ್ಲಿ ನೆಲಹಾಸಿನ ನಾಲ್ಕು ಅಂಕಣಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಬಾಲಕ- ಬಾಲಕಿಯರಿಗೆ ವಿವಿಧ ಕಾಲೇಜುಗಳಲ್ಲಿ ಪ್ರತ್ಯೇಕ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. 

ಆಟಗಾರರಿಗೆ ವಸತಿ ನಿಲಯದಿಂದ ಕ್ರೀಡಾಂಗಣದ ವರೆಗೆ ಬಸ್‌ ಸೌಕರ್ಯ ಒಗಿಸಲಾಗುವುದು. ಕ್ರೀಡಾಕೂಟದಲ್ಲಿ 70 ಜನ ಪರಿಣಿತ ನಿರ್ಣಾಯಕರು ಕಾರ್ಯನಿರ್ವಹಿಸಲಿದ್ದು, ನಿಯಮಾವಳಿಯಂತೆ ಕ್ರೀಡಾಕೂಟದಲ್ಲಿ ವಿಜೇತ ತಂಡಗಳು ನವೆಂಬರ್‌ ತಿಂಗ​ಳಲ್ಲಿ ದೆಹಲಿಯಲ್ಲಿ ನಡೆ​ಯ​ಲಿ​ರುವ ರಾಷ್ಟ್ರ​ಮ​ಟ್ಟದ ಪಂದ್ಯಾ​ವ​ಳಿ​ಯಲ್ಲಿ ಭಾಗ​ವ​ಹಿ​ಸ​ಲಿ​ದ್ದಾರೆ.
 

Follow Us:
Download App:
  • android
  • ios