Asianet Suvarna News Asianet Suvarna News

Daily Horoscope: ಮಿಥುನಕ್ಕೆ ಧನಲಾಭ, ಕನ್ಯಾ ರಾಶಿಗೆ ಹೆಚ್ಚುವ ಒತ್ತಡ

14 ಮಾರ್ಚ್ 2022, ಸೋಮವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಕಟಕಕ್ಕೆ ಮಹತ್ವದ ದಿನ

Daily horoscope of March 14th 2022 in Kannada SKR
Author
Bangalore, First Published Mar 14, 2022, 5:00 AM IST | Last Updated Mar 14, 2022, 5:00 AM IST

ಮೇಷ(Aries): ಪಾಲುದಾರಿಕೆ ವ್ಯಾಪಾರ, ವ್ಯವಹಾರಗಳಿಂದ ಹೆಚ್ಚಿನ ಲಾಭ. ಉದ್ಯೋಗದಲ್ಲಿ ನಾಯಕರಂತೆ ವರ್ತಿಸಿ ಆತ್ಮವಿಶ್ವಾಸದಿಂದ ಕಾರ್ಯ ಸಾಧಿಸುವಿರಿ. ಸಂಗಾತಿಯ ಆರೋಗ್ಯ ಸಮಸ್ಯೆ ಕಂಗೆಡಿಸಬಹುದು. ಮತ್ತೊಬ್ಬರ ಚುಚ್ಚುಮಾತುಗಳಿಗೆ ನಿರ್ಲಕ್ಷ್ಯವೇ ಮದ್ದು. ಶಿವ ಶತನಾಮಾವಳಿ ಹೇಳಿಕೊಳ್ಳಿ. 

ವೃಷಭ(Taurus): ಉದ್ಯೋಗದಲ್ಲಿ ದೇಹಾಯಾಸ. ಆದಾಯ ಸಾಲುತ್ತಿಲ್ಲ ಎಂದರೆ ಮೊದಲು ಹೊಸ ಹೊಸ ಕಲಿಕೆಯಲ್ಲಿ ತೊಡಗಿಸಿಕೊಳ್ಳಿ. ಕೌಶಲ್ಯಾಭಿವೃದ್ಧಿ ಕಡೆ ಗಮನ ಹರಿಸಿ. ವ್ಯಾಪಾರ, ವ್ಯವಹಾರಗಳಲ್ಲಿ ನಿಮ್ಮದೇ ಎಡವಟ್ಟು ನಿರ್ಧಾರಗಳು ನಿಮ್ಮನ್ನು ಸೋಲಿಸುತ್ತಿರಬಹುದು. ಪರಾಂಬರಿಸಿ. ಶಿವ ಧ್ಯಾನ ಮಾಡಿ. 

ಮಿಥುನ(Gemini): ಹಳೆಯ ಸಾಲ ಮರುಪಾವತಿ ಮಾಡಿ ನಿರಾಳರಾಗುವಿರಿ. ಷೇರು ವ್ಯವಹಾರಗಳಲ್ಲಿ ಲಾಭವಿರಲಿದೆ. ಹೂಡಿಕೆಗಳು ಫಲ ಕೊಡುತ್ತವೆ. ವಿದ್ಯಾರ್ಥಿಗಳಿಗೆ ಏಕಾಗ್ರತೆ, ಶ್ರದ್ಧೆ ಸಿದ್ಧಿಸುತ್ತದೆ. ಹೊಸ ವಿಷಯಗಳ ಕಲಿಕೆಯಲ್ಲಿ ತೊಡಗುತ್ತಾರೆ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ. 

ಕಟಕ(Cancer): ಪ್ರೇಮದ ವಿಚಾರದಲ್ಲಿ ಮಹತ್ತರ ನಿರ್ಧಾರ ತೆಗೆದುಕೊಳ್ಳಲಿರುವಿರಿ. ವೈವಾಹಿಕ ಜೀವನದಲ್ಲೂ ಕೆಲ ನಿರ್ಧಾರಗಳನ್ನು ತೆಗೆದುಕೊಳ್ಳಲೇಬೇಕಾಗಿ ಬರುವುದು. ಉದ್ಯೋಗ ಸ್ಥಳದಲ್ಲಿ ನೀವು ಬಯಸಿದ ಕೆಲಸವೇನೋ ಸಿಗಬಹುದು, ಆದರೆ ಅದಕ್ಕಾಗಿ ನೀವು ಕೆಲವೊಂದಿಷ್ಟು ತ್ಯಾಗ ಮಾಡಬೇಕಾಗುತ್ತದೆ. ಗೋ ಗ್ರಾಸ ನೀಡಿ. 

ಸಿಂಹ(Leo): ಅತಿಯಾದ ಒಳ್ಳೆಯತನದಿಂದಲೇ ಮತ್ತೊಬ್ಬರಿಗೆ ಹಿಂಸೆ ಮಾಡುವಿರಿ. ಮಕ್ಕಳ ಕಡೆಗಣನೆ ಮಾಡಬೇಡಿ. ಅವರಿಗೆ ಅಗತ್ಯವಿರುವ ಗಮನ ನೀಡಿ. ಉದ್ಯೋಗದಲ್ಲಿ ಉತ್ತಮ ಫಲಿತಾಂಶವಿದೆ. ಭಡ್ತಿ ಹಾಗೂ ಆದಾಯ ಹೆಚ್ಚಳ ಸಾಧ್ಯತೆ. ಸಂಗಾತಿಯ ಆರೋಗ್ಯದಲ್ಲಿ ಏರುಪೇರು. ಲಿಂಗಾಸ್ಟಕ ಹೇಳಿಕೊಳ್ಳಿ. 

Vastu Tips: ಶಬ್ಧ ಹಾಗೂ ಸುಗಂಧದಿಂದ ನಕಾರಾತ್ಮಕ ಶಕ್ತಿಯನ್ನು ಹೊಡೆದೋಡಿಸಿ

ಕನ್ಯಾ(Virgo): ಪ್ರಯಾಸದ ದಿನ. ತಿರುಗಾಟದಲ್ಲಿ ವಸ್ತು ಕಳುವಾಗಬಹುದು. ಕಚೇರಿಯಲ್ಲಿ ಕೆಲಸದಲ್ಲಿ ಎಡವಟ್ಟುಗಳಾಗಬಹುದು, ಸಂವಹನ ಕೊರತೆಯಿಂದ ಸಮಸ್ಯೆಗಳಾಗಬಹುದು. ತಲೆನೋವು, ಆತಂಕ ಹೆಚ್ಚುವುದು. ಒತ್ತಡ ನಿಭಾಯಿಸಲು ಪ್ರಾಣಾಯಾಮದ ಮೊರೆ ಹೋಗಿ. ಶಿವ ಶಕ್ತಿಯರ ಸ್ಮರಣೆ ಮಾಡಿ. 

ತುಲಾ(Libra): ಔದ್ಯೋಗಿಕವಾಗಿ ನಕಾರಾತ್ಮಕ ಪರಿಣಾಮ ಬೀರುವ ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಾಗಿ. ನಿಮ್ಮ ಹಿಡಿತದಲ್ಲಿ ಏನೂ ಇಲ್ಲ ಎನಿಸಲಿದೆ. ನಿಮ್ಮ ಅಸಹಾಯಕತೆ ಕಂಗೆಡಿಸಲಿದೆ. ಕೆಲವೊಂದು ನಷ್ಟಗಳಿಂದಾಗಿ ಕುಟುಂಬ ಸದಸ್ಯರ ಕಡೆಗಣನೆಗೆ ಒಳಗಾಗುವಿರಿ. ಸುಬ್ರಹ್ಮಣ್ಯ ಶ್ಲೋಕ ಹೇಳಿಕೊಳ್ಳಿ. 

ವೃಶ್ಚಿಕ(Scorpio): ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡಲು ಇದು ಉತ್ತಮ ದಿನ. ಲೇವಾದೇವಿ ವ್ಯವಹಾರಗಳಲ್ಲಿ ಲಾಭ. ಕೌಟುಂಬಿಕ ಸೌಖ್ಯವಿಲ್ಲದೆ ಸಂಕಟವಾಗುವುದು. ಉದ್ಯೋಗದಲ್ಲಿ ಮತ್ತೊಬ್ಬರ ತಪ್ಪನ್ನು ಸರಿ ಪಡಿಸುತ್ತಾ ಸಮಯ ವ್ಯರ್ಥವಾಗಬಹುದು. ಶಿವನಿಗೆ ಬಿಲ್ವಾರ್ಚನೆ ಮಾಡಿಸಿ. 

Vastu Remedies: ಕೆಂಪುಚಂದನದ ಈ ಪರಿಹಾರಗಳು ಎಷ್ಟೆಲ್ಲ ಸಮಸ್ಯೆ ನೀಗಿಸುತ್ತವೆ ಗೊತ್ತಾ?

ಧನುಸ್ಸು(Sagittarius): ಅನಿರೀಕ್ಷಿತ ಧನಲಾಭಗಳಿಂದ ಸಂತೋಷ. ಔದ್ಯೋಗಿಕವಾಗಿ ಪ್ರಸಿದ್ಧಿ ಪಡೆಯುವ ಯೋಗವಿದೆ. ನೀವು ಹಾಕುತ್ತಿರುವ ಪರಿಶ್ರಮ ಗಣನೆಗೆ ಬರಲಿದೆ. ಮಕ್ಕಳ ಏಳ್ಗೆ ನೆಮ್ಮದಿ ತರಲಿದೆ. ಅವಿವಾಹಿತರಿಗೆ ಅವಕಾಶಗಳು ಬರಲಿವೆ. ಬಳಸಿಕೊಳ್ಳುವುದೇ ಜಾಣತನ. ಶಿವನಿಗೆ ಜಲಾಭಿಷೇಕ ಮಾಡಿ. 

ಮಕರ(Capricorn): ಕೋಪ ಮತ್ತು ಹಠಮಾರಿ ವರ್ತನೆಯಿಂದ ಯಾರಿಗೂ ನೆಮ್ಮದಿ ಇರದು. ಅವನ್ನು ಬದಿಗಿಟ್ಟು ತಾಳ್ಮೆ ವಹಿಸಿ. ಧೀರ್ಘ ಕಾಲಿಕ ಆರೋಗ್ಯ ಸಮಸ್ಯೆಗಳಲ್ಲಿ ಚೇತರಿಕೆ ಕಂಡು ಬಂದು ಸಮಾಧಾನ ಎನಿಸುವುದು. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಹತ್ತಿರದ ದೇವಾಲಯಕ್ಕೆ ಭೇಟಿ ನೀಡಿ. 

ಕುಂಭ(Aquarius): ಔದ್ಯೋಗಿಕ ಜೀವನಕ್ಕೆ ಸಂಬಂಧಿಸಿದಂತೆ ಮಹತ್ತರ ಮಾತುಕತೆಗಳಲ್ಲಿ ಪಾಲ್ಗೊಳ್ಳುವಿರಿ. ಆತ್ಮವಿಶ್ವಾಸವೇ ಬಲ ಎಂಬುದು ನೆನಪಿರಲಿ. ಕುಟುಂಬದ ವಾತಾವರಣವು ಮಂಗಳಕರವಾಗಿರುತ್ತದೆ ಮತ್ತು ಕುಟುಂಬ ಸದಸ್ಯರಲ್ಲಿ ಪ್ರೀತಿ ಮತ್ತು ವಾತ್ಸಲ್ಯ ಹೆಚ್ಚುತ್ತದೆ. ಹಸಿರು ಪದಾರ್ಥಗಳನ್ನು ದಾನ ಮಾಡಿ. 

ಮೀನ(Pisces): ಆಸ್ತಿ ಸಂಬಂಧಿತ ವಹಿವಾಟುಗಳಲ್ಲಿ ತೊಡಗಿಸಿಕೊಳ್ಳುವಿರಿ. ಕುಟುಂಬ ಜೀವನದಲ್ಲಿ ಸಂತೋಷ ಇರುತ್ತದೆ. ಮೇಲಧಿಕಾರಿಗಳೊಂದಿಗೆ ಉತ್ತಮ ಸಂಬಂಧ ಕಾಯ್ದುಕೊಂಡು ಔದ್ಯೋಗಿಕ ಬೆಳವಣಿಗೆಯನ್ನು ಖಚಿತ ಪಡಿಸಿಕೊಳ್ಳಿ. ಹಸುವಿಗೆ ಹಸಿರು ತಿನ್ನಿಸಿ.

Latest Videos
Follow Us:
Download App:
  • android
  • ios