Asianet Suvarna News Asianet Suvarna News

Daily Horoscope| ದಿನ ಭವಿಷ್ಯ: ಈ ರಾಶಿಯವರು ಇಂದು ಹಣ ಕಳೆದುಕೊಳ್ಳುವ ಸಾಧ್ಯತೆ!

* 12 ಅಕ್ಟೋಬರ್ 2021 ಮಂಗಳವಾರದ ಭವಿಷ್ಯ

* ಈ ರಾಶಿಯವರು ಇಂದು ಹಣ ಕಳೆದುಕೊಳ್ಳುವ ಸಾಧ್ಯತೆ!

* ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ
 

Daily Horoscope 12 October 2021 astrological Predictions for Libra and other in Kannada pod
Author
Bangalore, First Published Oct 12, 2021, 7:20 AM IST

ಗ್ರಹಗತಿ: 

ವೃಷಭ ರಾಶಿಯಲ್ಲಿ ರಾಹು

ಕನ್ಯಾ ರಾಶಿಯಲ್ಲಿ ರವಿ, ಬುಧ ಹಾಗೂ ಕುಜರಿದ್ದಾರೆ. 

ವೃಶ್ಚಿಕ ರಾಶಿಯಲ್ಲಿ ಕೇತು ಹಾಗೂ ಶುಕ್ರ ಇದ್ದಾನೆ. 

ಚಂದ್ರ ಧನುಸ್ಸು ರಾಶಿಯಲ್ಲಿದ್ದಾನೆ

ಮಕರ ರಾಶಿಯಲ್ಲಿ ಗುರು, ಶನಿ, ಮಾಂದಿ

ಹೀಗಿರುವಾಗ ಹನ್ನೆರಡು ರಾಶಿಗಳ ಫಲಾಫಲ ಹೇಗಿರುತ್ತದೆ? ನಿಮ್ಮ ರಾಶಿಗೇನು ಫಲ? ಇಲ್ಲಿದೆ ವಿವರ
 
ಮೇಷ(Aries):ಚಂದ್ರ ಭಾಗ್ಯ ಸ್ಥಾನದಲ್ಲಿರುವುದು ಬಹಳ ಒಳ್ಳೆಯದು. ಹೀಗಾಗಿ ದೇವತಾ ಕಾರ್ಯದಲ್ಲಿ ಭಾಗಿಯಾಗುತ್ತೀರಿ. ಉದ್ಯೋಗಿಗಳಿಗೆ ಕೊಂಚ ಅಸಮಾಧಾನ. ಪೂಜೆ ನೆರವೇರಿಸಿ ಕೆಲಸಕ್ಕೆ ಹೋದರೆ ಸ್ವಲ್ಪ ಸಮಾಧಾನವಿರುತ್ತದೆ. ವಿಶೇಷವಾಗಿ ಸ್ತ್ರೀಯರು ಇಂದು ನಷ್ಟಫಲ ಹೊಂದುತ್ತಾರೆ. ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ ಎಚ್ಚರಿಕೆಯಿಂದಿರಿ. ಇಂದು ಮಹಾಲಕ್ಷ್ಮಿ ಪ್ರಾರ್ಥನೆ ಮಾಡಿ.

ವೃಷಭ(Taurus):ಈ ರಾಶಿಯಿಂದ ಅಷ್ಟಮದಲ್ಲಿ ಇರುವ ಚಂದ್ರನಿಂದ ಬಲವಿದೆ, ಹೀಗಾಗಿ ಆತಂಕ ಬೇಡ. ಆರೋಗ್ಯದಲ್ಲಿ ಕೊಂಚ ಚೇತರಿಕೆಯಾಗುತ್ತದೆ. ಆದರೆ ತಂದೆ-ಮಕ್ಕಳಲ್ಲಿ ಸ್ವಲ್ಪ ಅಸಮಾಧಾನ ಇರುತ್ತದೆ. ತಂದೆ-ಮಕ್ಕಳು ಸಮಾಧಾನದಿಂದ ಮಾತನಾಡಿ, ಎಚ್ಚರಿಕೆಯಿಂದ ವ್ಯವಹರಿಸಿ. ಆಹಾರ ಸೇವನೆ ವೇಳೆ ಎಚ್ಚರ. ದಾಂಪತ್ಯದಲ್ಲಿ, ವ್ಯಾಪಾರ ಸಂದರ್ಭದಲ್ಲಿ ಸ್ವಲ್ಪ ಏರುಪೇರು. ಅಮ್ಮನವರ ಸನ್ನಿಧಾನಕ್ಕೆ ಹೋಗಿ ಪುಷ್ಪಾರ್ಚನೆ ಮಾಡಿಸಿ. 

ಮಿಥುನ(Gemini):ಸಪ್ತಮದಲ್ಲಿರುವ ಚಂದ್ರ ವಿಶೇಷವಾಗಿ ಧನ ಸಮೃದ್ಧಿ ಉಂಟು ಮಾಡುತ್ತಾನೆ. ಅತ್ತ ಸಂಗಾತಿಯಿಂದಲೂ ವಿಶೇಷ ಸಹಕಾರ ಸಿಗಲಿದೆ. ವ್ಯಾಪಾರಿಗಳಿಗೆ ಹಣಕಾಸಿನ ಅನುಕೂಲ, ಹೆಚ್ಚಿನ ಲಾಭ ಸಿಗಲಿದೆ. ಕೊಂಚ ನಷ್ಟವೂ ಇರುತ್ತದೆ, ಮುಖ್ಯವಾದ ವಸ್ತುಗಳು ಕಳೆದುಹೋಗುವ ಸಾಧ್ಯತೆ ಇದೆ. ಬಂಧುಗಳಿಂದ ಉತ್ತಮ ಸಹಕಾರ ಸಿಗಲಿದೆ. ಪ್ರಯಾಣದಲ್ಲೂ ಅನುಕೂಲ. ಶುಭಾಶುಭ ಮಿಶ್ರವಾಗಿದೆ. ಕಾರ್ತವೀರ್ಯಾರ್ಜುನ ಸ್ಮರಣೆ ಮಾಡಿ.

ಅಮಾವಾಸ್ಯೆಯಂದು ನೀವು ಯಾಕೆ ಜಾಗರೂಕರಾಗಿರೇಕು ಗೊತ್ತಾ?

ಕಟಕ(Cancer):ನಿಮ್ಮ ರಾಶಿ ಅಧಿಪತಿ ಷಷ್ಠಿಯಲ್ಲಿದ್ದಾನೆ, ರೋಗ ನಿವಾರಣೆ ಮಾಡುತ್ತಾನೆ. ಹೆಣ್ಣು ಮಕ್ಕಳಿಗೆ ಬಲ ತಂದು ಕೊಡುತ್ತಾನೆ. ಸಪ್ತಮದಲ್ಲಿರುವ ಮಾಂದಿ ಶನಿಯಿಂದಾಗಿ ತೊಂದರೆ, ಇದರಿಂದ ಭಾವನೆಗಳಲ್ಲಿ ಸ್ವಲ್ಪ ವ್ಯತ್ಯಾಸ ಉಂಟಾಗಲಿದೆ. ಸ್ನೇಹಭಾವ ತೊಂದರೆಯಾಗುತ್ತದೆ. ನಂಬಿದವರೇ ಮೊಸ ಮಾಡಲಿದ್ದಾರೆ. ದಾಂಪತ್ಯ ಜೀವನ ಕೊಂಚ ಅಸ್ತವ್ಯಸ್ತವಾಗುವ ಸಾಧ್ಯತೆ. ಉದ್ಯೋಗಿಗಳಿಗೆ ಕೊಂಚ ಮಟ್ಟಿಗೆ ಅನುಕೂಲದ ವಾತಾವರಣವಿದ್ದು, ಸಹೋದರ ಸಹಕಾರ ಸಿಗಲಿದೆ. ಶಿವ- ಶಕ್ತಿಯರ ಪ್ರಾರ್ಥನೆ ಮಾಡಿ.  

ಸಿಂಹ(Leo):ನಿಮ್ಮ ರಾಶಿಯಿಂದ ಪಂಚಮದ ಚಂದ್ರ ಮನಸ್ಸಿಗೆ ಸಮಾಧಾನ ತಂದುಕೊಡುತ್ತಾನೆ. ಮಕ್ಕಳ ಸಲುವಾಗಿ ಸ್ವಲ್ಪ ನಷ್ಟ ಅನ್ನೋದನ್ನು ಬಿಟ್ರೆ, ಸಮಾಧಾನ ಇದ್ದೇ ಇದೆ. ಮನಸ್ಸಿಗೆ ಅನುಕೂಲದ ವಾತಾವರಣ ಸೂಚಿಸುತ್ತಿದೆ. ಮುಖ್ಯವಾದ ಕಡತಗಳಿಗೆ ಸಹಿ ಹಾಕುವಾಗ, ನಂಬಿಕೆಯ ಪತ್ರಕ್ಕೆ ಸಹಿ ಹಾಕಲು ಅನುಕೂಲದ ವಾತಾವರಣ.ಆದರೆ ಶತ್ರುಗಳ ಬಗ್ಗೆ ಎಚ್ಚರದಿಂದಿರಿ. ನಿಮ್ಮ ಮಿತ್ರರು ಯಾರು, ಶತ್ರುಗಳು ಯಾರೆಂದು ಅರಿತು ಸಹಾಯ, ಸಹಕಾರ ಮಾಡುವುದು ಉತ್ತಮ. ಶತ್ರು ನಿಗ್ರಹಕ್ಕೆ ಮಹಾ ಸರಸ್ವತಿ ಆರಾಧನೆ ಮಾಡಿ.
 
ಕನ್ಯಾ(Virgo):
ನಿಮ್ಮ ರಾಶಿಯಿಂದ ಚಂದ್ರ ಚತುರ್ಥದಲ್ಲಿರುವಾಗ ಸಮಾಧಾನ, ಸೌಖ್ಯ ಶಾಂತಿ ಎಲ್ಲವೂ ಇರುತ್ತದೆ. ನೀರಿನ ವ್ಯಾಪಾರಿಗೆ ವಿಶೇಷ ಅನುಕೂಲ ಆಗಲಿದೆ. ಕೃಷಿ ಚಟುವಟಿಕೆಯಲ್ಲಿರುವವರಿಗೆ ವಿಶೇಷ ಫಲ ಸಿಗಲಿದೆ. ಉದ್ಯೋಗಿಗಳಿಗೆ  ಬಲ ಚೆನ್ನಾಗಿದೆ. ಅನುಕೂಲದ ವಾತಾವರಣ ಸೂಚಿಸುತ್ತಿದೆ. ಆದರೆ ಮನಸ್ಸಿಗೆ ಸ್ವಲ್ಪ ಘಾಸಿಯಾಗಲಿದೆ. ಎಲ್ಲವೂ ಚೆನ್ನಾಗಿರುತ್ತದೆ ಆದರೆ ಮಕ್ಕಳ ವಿಚಾರದಲ್ಲಿ ಕೊಂಚ ನೋವಾಗುವ ಲಕ್ಷಣ. ಈಶ್ವರನ ಪ್ರಾರ್ಥನೆ ಮಾಡಿ ಅದು ಕೂಡಾ ನಿವಾರಣೆಯಾಗುತ್ತದೆ. 

ತುಲಾ(Libra):ಈ ರಾಶಿಯವರ ಅಧಿಪತಿ ದ್ವಿತೀಯದಲ್ಲಿ ಕೇತುಯುಕ್ತವಾಗಿದ್ದಾನೆ. ಹೀಗಾಗಿ ಗಣಪತಿ ಆರಾಧನೆ ಮಾಡಿದರೆ ಹಣಕಾಸಿನ ವಿಚಾರದಲ್ಲಿ ಕೆಟ್ಟ ಫಲ ಅನುಭವಿಸುವುದಿಲ್ಲ. ಸಹೋದರ ಸಹಕಾರ ಚೆನ್ನಾಗಿರುತ್ತದೆ. ಸೇವಕರಿಂದ ಉತ್ತಮ ನಿರೀಕ್ಷೆ ಇಟ್ಟುಕೊಳ್ಳಬಹುದು. ಪ್ರಯಾಣಿಕರು, ವಾಹನ ಚಾಲಕರು ಜಾಗೃತೆಯಿಂದಿರಿ. ಸಿಮೆಂಟ್, ಕಬ್ಬಿಣದಲ್ಲಿ ಕೆಲಸ ಮಾಡುವವರು ಎಚ್ಚರದಿಂದಿರಿ. ಸಾಗುವ ಹಾದಿಯಲ್ಲಿ ವಿಷ ಜಂತುಗಳ ಭಯ ಸೂಚಿಸುತ್ತಿದೆ. ಹೀಗಾಗಿ ಎಚ್ಚರವಾಗಿರಿ. ಇಂದು ಗಣಪತಿ ಆರಾಧನೆ ಹಾಗೂ ಈಶ್ವರನಿಗೆ ಬಿಲ್ವಾರ್ಚನೆ ಮಾಡಿಸಿ.   

ರುದ್ರಾಕ್ಷಿ ಧಾರಣೆಯಿಂದ ಏನೇನೆಲ್ಲ ಆಗತ್ತೆ ಅಂತ ಗೊತ್ತಾ!

ವೃಶ್ಚಿಕ(Scorpio): ಆಹಾರ ಸಮೃದ್ಧಿ ಇದೆ. ಕುಟುಂಬದಲ್ಲಿ ಸೌಖ್ಯ, ತಾಯೊಯ ಸಹಕಾರ ಹೀಗೆ ಎಲ್ಲವೂ ಚೆನ್ನಾಗಿರುತ್ತದೆ. ಉದ್ಯೋಗಿಗಳಿಗೂ ಲಾಭವಿದೆ. ವಿಶೇಷವಾಗಿ ರಾಜಕಾರಣ, ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಒಳ್ಳೆಯ ಬಲ ಸೂಚಿಸುತ್ತಿದೆ. ಭಯದ ವಾತಾವರಣ ಮೂಡಲಿದೆ. ನೀವು ಮಾಡುವ ಕೆಲಸ ಸರಿಯೋ, ತಪ್ಪೋ ಎಂಬ ಗೊಂದಲ ಹಾಗೂ ಭಯದ ವಾತಾವರಣ ಮುಡಲಿದೆ. ಆಂಜನೇಯ ಪ್ರಾರ್ಥನೆ ಮಾಡಿ. 

ಧನುಸ್ಸು(Sagittarius): ನಿಮ್ಮ ರಾಶಿಯಲ್ಲಿರುವ ಚಂದ್ರ, ಅಷ್ಟಾಧಿಪತಿ ಸ್ವಲ್ಪ ಜಾಗೃತೆ ವಹಿಸಿ. ಆರೋಗ್ಯದ ಬಗ್ಗೆ ಗಮನವಿರಲಿ. ಶೀತ, ಕೆಮ್ಮು, ನೆಗಡಿ ಇಂತಹ ಆರೋಗ್ಯ ಸಮಸ್ಯೆ. ಆಹಾರದಲ್ಲಿ ವ್ಯತ್ಯಾಸವಾಗಲಿದೆ. ಹೊರಗಿನ ಆಹಾರ ಅಷ್ಟೊಂದು ಒಳ್ಳೆಯದಲ್ಲ. ಜಂಕ್‌ ಫುಡ್‌ನಿಂದ ತೊಂದರೆಯಾಗಲಿದೆ. ಕರ್ಮ ಸ್ಥಾನವನ್ನು ಗಮನಿಸಿದರೆ ಬಲವಿದೆ. ಅನುಕೂಲದ ವಾತಾವರಣ ಸೂಚಿಸುತ್ತದೆ. ಉದ್ಯೋಗಿಗಳಿಗೆ ಬಲವಿದೆ, ಬಂಧುಗಳಿಂದ ಉತ್ತಮ ಸಹಕಾರ. ಇಂದು ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ. 

ಮಕರ(Capricorn): ಆರೋಗ್ಯದಲ್ಲಿ ಸ್ವಲ್ಪ ತೊಡಕು. ಹೆಚ್ಚಿನ ವ್ಯಯ ಸೂಚಿಸುತ್ತಿದೆ. ಸಂಗಾತಿಯ, ಮಿತ್ರರ ಸಲುವಾಗಿ ಹಣ ಖರ್ಚು ಆಗಲಿದೆ. ಹೊಸ ಹೂಡಿಕೆ ಮಾಡುವ ಸಾಧ್ಯತೆಯೂ ಇದೆ. ಹೊಸ ಪ್ರಯತ್ನಕ್ಕೆ ಅವಕಾಶ. ಅನುಕೂಲವಿದೆ ಆದರೆ ಆರೋಗ್ಯದ ಬಗ್ಗೆ ಎಚ್ಚರವಿರಲಿ. ದುರ್ಗಾ ಕವಚ ಅಥವಾ ಶಿವ ಕವಚ ಪಠಿಸಿ. 

ಕುಂಭ(Aquarius): ನಿಮ್ಮ ರಾಶಿಯಿಂದ ಲಾಭದ ಚಂದ್ರ ವಿಸೇಷವಾಗಿ ಅನುಕೂಲ ಮಾಡುತ್ತಾನೆ. ಶತ್ರುಗಳಿಂದಲೂ ಲಾಭ. ಉದ್ಯೋಗಿಗಳಿಗೆ ಅನುಕೂಲದ ವಾತಾವರಣ. ಸ್ತ್ರೀಯರಿಗೆ ಲಾಭವಿದೆ ಆದರೆ ಗಣಪತಿ ಆರಾಧನೆಯಿಂದ ಇನ್ನೂ ಹೆಚ್ಚಿನ ಅನುಕೂಲ ಸಾಧ್ಯತೆ ಇದೆ. ಇಂದು ವೇದ ಮಾಂದಿ ಹೆಚ್ಚು ಖರ್ಚು ಮಾಡಿಸುತ್ತಾನೆ. ಲಾಭ ಇದೆ, ಜೊತೆಗೆ ಖರ್ಚು ಆಗುವ ಸಾಧ್ಯತೆ ಇದೆ. ಹೀಗಾಗಿ ಎಚ್ಚರದಿಂದಿರಿ. ಅಮ್ಮನವರ ಪ್ರಾರ್ಥನೆ ಮಾಡಿ. 

ಮೀನ(Pisces): ನಿಮ್ಮ ರಾಶಿಯಿಂದ ಕರ್ಮ ಸ್ಥಾನದ ಚಂದ್ರ ವಿಶೇಷವಾದ ಬಲ ತಂದು ಕೊಡುತ್ತಾನೆ. ಕಾರ್ಯ ಸಿದ್ಧಿಯಾಗುತ್ತದೆ. ಅಲ್ಲದೇ ಪ್ರತಿಭಾಶಕ್ತಿಯಿಂದ ಕಾರ್ಯ ಸಾಧನೆಯಾಗಿ ಒಂದು ಗೌರವ ಸಮರ್ಪಣೆ. ಹೊಸ ಅವಕಾಶ ಸಿಗುವ ಸಾಧ್ಯತೆ. ಸನ್ಮಾನಗಳು ದೊರೆಯಲಿವೆ. ಬುಧ ಸಪ್ತಮದಲ್ಲಿ ಇರುವುದರಿಂದ ಪ್ರತಿಭಾ ಶಕ್ತಿ ತಂದು ಕೊಡುತ್ತಾನೆ, ವ್ಯಾಪಾರದಲ್ಲೂ ವಿಸೇಷ ಹಾಗೂ ಹೆಚ್ಚಿನ ಅನುಕೂಲ. ಇಂದು ಗುರು ಪ್ರಾರ್ಥನೆ ಮಾಡಿ ಒಳ್ಳೆಯದಾಗುತ್ತದೆ. 

Follow Us:
Download App:
  • android
  • ios