ಜೋಮ್ಯಾಟೋ ಪ್ರಕರಣಕ್ಕೆ ಟ್ವಿಸ್ಟ್: ಬೆಂಗಳೂರಿನಿಂದ ಕಾಲ್ಕಿತ್ತ ಚಂದ್ರಾಣಿ !
ಜೋಮ್ಯಾಟೋ ಡೆಲಿವರಿ ಬಾಯ್ ಕೇಸ್ ಪ್ರಕರಣಕ್ಕೆ ಟ್ವಿಸ್ಟ್ ಸಿಗುತ್ತಿದ್ದಂತೆ ಇದೀಗ ಡೆಲಿವರಿ ಬಾಯ್ ಮೇಲೆ ಆರೋಪ ಮಾಡಿದ ಹಿತೇಶಾ ಚಂದ್ರಾಣಿ ಬೆಂಗಳೂರು ಖಾಲಿ ಮಾಡಿದ್ದಾರೆ.
ಬೆಂಗಳೂರು(ಮಾ.17): ಜೋಮ್ಯಾಟೋ ಡೆಲಿವರಿ ಬಾಯ್ ಹಲ್ಲೆ ಮಾಡಿದ್ದಾನೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಭಾರಿ ಅನುಕಂಪ ಗಿಟ್ಟಿಸಿದ ಹಿತೇಶಾ ಚಂದ್ರಾಣಿಗೆ ಸಂಕಷ್ಟದ ದಿನ ಸನಿಹವಾಗಿದೆ. ಡೆಲಿವರಿ ಬಾಯ್ ಕಾಮರಾಜ್ ಪ್ರತಿ ದೂರು ದಾಖಲಿಸುತ್ತಿದ್ದಂತೆ ಇದೀಗ ಹಿತೇಶಾ ಚಂದ್ರಾಣಿ ಬೆಂಗಳೂರಿನಿಂದ ಜಾಗ ಖಾಲಿ ಮಾಡಿದ್ದಾರೆ.
ಮಹಿಳೆಗೆ ಶಾಕ್, ಜೋಮ್ಯಾಟೋ ಕೇಸ್ಗೆ ಮತ್ತೊಂದು ಟ್ವಿಸ್ಟ್
ಕಾಮಾರಾಜ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ವಿಚಾರಣೆಗಾಗಿ ಚಂದ್ರಾಣಿ ಕರೆಸಲು ಪೊಲೀಸರು ನಿರ್ಧರಿಸಿದ್ದಾರೆ. ಅಷ್ಟರೊಳಗೆ ಹಿತೇಶಾ ಚಂದ್ರಾಣಿ ಬೆಂಗಳೂರು ಖಾಲಿ ಮಾಡಿದ್ದಾರೆ. ಇದೀಗ ಚಂದ್ರಾಣಿ ಯಾರ ಕೈಗೂ ಸಿಗದೆ ನಾಪತ್ತೆಯಾಗಿದ್ದಾರೆ.
ಚಂದ್ರಾಣಿ ವಿಡಿಯೋ ಮೂಲಕ ತನ್ನ ಮೇಲಿನ ಹಲ್ಲೆ ಹಾಗೂ ಸಮರ್ಥನೆ ನೀಡಿದ್ದರು. ಆದರೆ ಈ ವೇಳೆ ತಮ್ಮ ವಿಳಾಸ ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾಗಿತ್ತು. ಇತ್ತ ಫುಡ್ ಡೆಲಿವರಿ ಬಾಯ್ ಕಾಮರಾಜ್ಗೆ ಭಾರಿ ಬೆಂಬಲ ವ್ಯಕ್ತವಾಗುತ್ತಿದ್ದಂತೆ, ಚಂದ್ರಾಣಿಗೆ ನಡುಕು ಶುರುವಾಗಿದೆ. ಬೆಂಗಳೂರು ಖಾಲಿ ಮಾಡಿ ನಾಪತ್ತೆಯಾಗಿದ್ದಾರೆ.