Asianet Suvarna News Asianet Suvarna News

ಆಸ್ತಿ ಮತ್ತು ಪ್ರೇಮಿಗಾಗಿ ಗಂಡನಿಗೆ ಸ್ಲೋ ಪಾಯಿಸನ್ ಹಾಕಿ ಕೊಂದ ಪತ್ನಿ ಅರೆಸ್ಟ್!

ಮುಂಬೈನಲ್ಲಿ ಜವಳಿ ಉದ್ಯಮಿಯಾಗಿದ್ದ ಪತಿಯನ್ನು ಕೊಂದ ಆರೋಪದ ಮೇಲೆ 46 ವರ್ಷದ ಮಹಿಳೆಯನ್ನು ತನ್ನ ಪ್ರೇಮಿಯೊಂದಿಗೆ ಗುರುವಾರ ಬಂಧಿಸಲಾಗಿದೆ. ಪ್ರಿಯಕರನ ಜೊತೆ ಸೇರಿ  2 ತಿಂಗಳಿಂದ ಸ್ಲೋ ಪಾಯಿಸನ್ ನೀಡಿ ಗಂಡನನ್ನು  ಕೊಂದಿದ್ದಳು.

Woman poisons husband to death arrested with lover in mumbai gow
Author
First Published Dec 3, 2022, 5:27 PM IST

ಮುಂಬೈ (ಡಿ.3): ಮುಂಬೈನಲ್ಲಿ ಜವಳಿ ಉದ್ಯಮಿಯಾಗಿದ್ದ ಪತಿಯನ್ನು ಕೊಂದ ಆರೋಪದ ಮೇಲೆ 46 ವರ್ಷದ ಮಹಿಳೆಯನ್ನು ತನ್ನ ಪ್ರೇಮಿಯೊಂದಿಗೆ ಗುರುವಾರ ಬಂಧಿಸಲಾಗಿದೆ. ಪೊಲೀಸರ ಪ್ರಕಾರ, ಎರಡು ತಿಂಗಳ ಕಾಲ ಕವಿತಾ ಶಾ ತನ್ನ ಪತಿ ಕಮಲಕಾಂತ್ ಅವರಿಗೆ ಆಹಾರದಲ್ಲಿ ಆರ್ಸೆನಿಕ್ ಮತ್ತು ಥಾಲಿಯಮ್ ಅನ್ನು ಬೆರೆಸಿದ್ದು, ಅಂತಿಮವಾಗಿ ಕಮಲಕಾಂತ್ ಅವರು ಸೆಪ್ಟೆಂಬರ್ 20 ರಂದು ಬಹು ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿದ್ದಾರೆ. ಇದೇ ರೀತಿಯ ಆರೋಗ್ಯ ಸಮಸ್ಯೆಗಳಿಂದ ಒಂದು ತಿಂಗಳ ಹಿಂದೆ ನಿಧನರಾದ ಕಮಲಕಾಂತ್ ಅವರ ತಾಯಿಯ ಸಾವಿನಲ್ಲಿ ಕವಿತಾ ಮತ್ತು ಅವರ ಪ್ರೇಮಿ ಹಿತೇಶ್ ಜೈನ್ (46) ಪಾತ್ರದ ಬಗ್ಗೆಯೂ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. 

ಕವಿತಾ ಮತ್ತು ಜೈನ್ ವಿರುದ್ಧ ಭಾರತೀಯರ ಅಪರಾಧ ಎಸಗುವ ಉದ್ದೇಶದಿಂದ IPC ಸೆಕ್ಷನ್ 302 (ಕೊಲೆ), 328, 120 (ಬಿ) (ಪಿತೂರಿ) ಮತ್ತು 328 (ವಿಷದ ಮೂಲಕ ಗಾಯಗೊಳಿಸುವುದು) ಇತ್ಯಾದಿಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಕೃಷ್ಣಕಾಂತ್ ಉಪಾಧ್ಯಾಯ ತಿಳಿಸಿದ್ದಾರೆ. 

ಕವಿತಾ ಮತ್ತು ಕಮಲಕಾಂತ್ 2000 ರಲ್ಲಿ ವಿವಾಹವಾದರು ಮತ್ತು ಇಬ್ಬರು ಮಕ್ಕಳಿದ್ದಾರೆ. 20 ವರ್ಷದ ಮಗಳು ಮತ್ತು 17 ವರ್ಷದ ಮಗ. 45 ವರ್ಷದ ಹಿತೇಶ್ ಜೈನ್ ಅವರು ಶಾ ಅವರ ಸ್ನೇಹಿತರಾಗಿದ್ದರು, ಏಕೆಂದರೆ ಅವರು ಗಾರ್ಮೆಂಟ್ ವ್ಯವಹಾರದಲ್ಲಿಯೂ ಇದ್ದರು ಮತ್ತು ವಿಲೇ ಪಾರ್ಲೆಯಲ್ಲಿ ಉಳಿದುಕೊಂಡಿದ್ದರು  ಎಂದು ಪೊಲೀಸರು ತಿಳಿಸಿದ್ದಾರೆ. ಕಮಲಕಾಂತ್ ಅವರ ಸಹೋದರಿ ಕವಿತಾ ಲಾಲ್ವಾನಿ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ದಂಪತಿಗಳು ಸೌಹಾರ್ದದಿಂದ ಸಂಬಂಧವನ್ನು ಹಂಚಿಕೊಳ್ಳಲಿಲ್ಲ ಹೀಗಾಗಿ ಆಗಾಗ ಜಗಳವಾಡುತ್ತಿದ್ದರು ಎಂದು ಆರೋಪಿಸಿದ್ದಾರೆ.

ಮುಂಬೈ ಪೊಲೀಸ್ ಕ್ರೈಂ ಬ್ರಾಂಚ್‌ಗೆ ಪ್ರಕರಣವನ್ನು ಹಸ್ತಾಂತರಿಸಲಾಗಿದ್ದು, ಅವರ ತನಿಖೆಯು ಕವಿತಾ ಮತ್ತು ಜೈನ್ ಕಮಲಕಾಂತ್ ಅವರ ಆಹಾರದಲ್ಲಿ ವಿಷಪೂರಿತವಾಗಿ ಕೊಲ್ಲುವ ಯೋಜನೆಯನ್ನು ರೂಪಿಸಿದರು. ಕಮಲಕಾಂತ್ ಸ್ವಾಭಾವಿಕವಾಗಿ ಸಾವನ್ನಪ್ಪಿದ್ದಾರೆ ಎಂದು ತೋರಿಸಲು ಇಬ್ಬರು ಈ ರೀತಿ ಅಪರಾಧ ಮಾಡಲು ನಿರ್ಧರಿಸಿದ್ದಾರೆಂದು ನಾವು ಅನುಮಾನಿಸುತ್ತೇವೆ.  ಜೈನ್ ಮತ್ತು ಕವಿತಾ ಒಂದು ದಶಕದಿಂದ ವಿವಾಹೇತರ ಸಂಬಂಧ ಹೊಂದಿದ್ದರು. ಇದರಿಂದಾಗಿ ಕವಿತಾ ಮತ್ತು ಶಾ ಜಗಳವಾಡುತ್ತಿದ್ದರು.  ಇಬ್ಬರೂ ಕಮಲಕಾಂತ್ ಆಸ್ತಿಯ ಮೇಲೆ ಕಣ್ಣಿಟ್ಟಿದ್ದರು ಎಂದು ಅಧಿಕಾರಿ ಹೇಳಿದ್ದಾರೆ. 

ಹಾಸನ: ಸೊಸೆಗೆ ಲೈಂಗಿಕ ಕಿರುಕುಳ, ಸುಪಾರಿ ಕೊಟ್ಟು ಮಾವನ ಕಥೆ ಫಿನಿಷ್‌ ಮಾಡಿದ

ಶಾ ದಾಖಲಾದ ಬಾಂಬೆ ಆಸ್ಪತ್ರೆಯ ವೈದ್ಯಕೀಯ ವರದಿಯು ಅವರ ದೇಹದಲ್ಲಿ ಥಾಲಿಯಮ್ ಮತ್ತು ಆರ್ಸೆನಿಕ್ ಕುರುಹುಗಳನ್ನು ಸೂಚಿಸಿದೆ ಎಂದು ಅಪರಾಧ ವಿಭಾಗದ 9 ನೇ ಘಟಕದ ಅಧಿಕಾರಿಗಳು ತಿಳಿಸಿದ್ದಾರೆ. ಇದು ತಿಳಿದ ನಂತರ, ಅವರೇ ನನ್ನ ಅತ್ತೆಯನ್ನೂ ಕೊಂದಿರುವ ಶಂಕೆ ಇದೆ ಎಂದು  ಕವಿತಾ ಲಾಲ್ವಾನಿ ಅವರ ಪತಿ ಅರುಣ್‌ಕುಮಾರ್ ಹೇಳಿದ್ದಾರೆ.

5 ಮದುವೆ, ಐವರಿಗೂ ಪಂಗನಾಮ, 6ನೇ ಮ್ಯಾರೇಜ್ ಸಿದ್ಧತೆಯಲ್ಲಿ ಚಾಲಾಕಿ ಸುಂದರಿ ಅರೆಸ್ಟ್!

ಜೂನ್‌ನಲ್ಲಿ ಷಾ ಅವರ ತಾಯಿ ನಿಧನರಾದಾಗ, ಜೈನ್ ಮತ್ತು ಕವಿತಾ ಷಾನನ್ನು ಕೊಲ್ಲಲು ಯೋಜಿಸಿದ್ದರು. ಹೀಗಾಗಿ  ಕಮಲಕಾಂತ್  ಗೆ ಆಹಾರದಲ್ಲಿ ಆರ್ಸೆನಿಕ್ ಅನ್ನು ಬೆರೆಸಲು ಪ್ರಾರಂಭಿಸಿದರು. ಅವರು ಅವರಿಗೆ ಹಲವಾರು ಬಾರಿ ವಿಷವನ್ನು ನೀಡಿದರು, ಇದರಿಂದಾಗಿ ಅವರ ಆರೋಗ್ಯ ಹದಗೆಟ್ಟಿತು. ಮತ್ತು  ಕಮಲಕಾಂತ್ ಅವರನ್ನು ಆರಂಭದಲ್ಲಿ ಆಗಸ್ಟ್ 27 ರಂದು ಅಂಧೇರಿಯ ಕ್ರಿಟಿಕೇರ್ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ನಂತರ ಅವರನ್ನು ಸೆಪ್ಟೆಂಬರ್ 3 ರಂದು ಬಾಂಬೆ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಅಲ್ಲಿ ಅವರು ಸೆಪ್ಟೆಂಬರ್ 19 ರಂದು ನಿಧನರಾದರು ಎಂದು ಅಧಿಕಾರಿಗಳೂ ತಿಳಿಸಿದ್ದಾರೆ. ಸಾಕ್ಷ್ಯಾಧಾರಗಳ ಆಧಾರದ ಮೇಲೆ ಕೊಲೆ ಪ್ರಕರಣ ದಾಖಲಿಸಿಕೊಂಡು ಕವಿತಾ ಮತ್ತು ಜೈನ್ ಅವರನ್ನು ಬಂಧಿಸಲಾಗಿದೆ. ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಡಿಸೆಂಬರ್ 8ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow Us:
Download App:
  • android
  • ios