Asianet Suvarna News Asianet Suvarna News

ಯುವತಿ ಜೊತೆ ಪತಿಯ ಫೋಟೋ ನೋಡಿ ಪತ್ನಿ ಆತ್ಮಹತ್ಯೆ

  • .ಯುವತಿ ಜೊತೆ ಪತಿಯ ಫೋಟೋ ನೋಡಿ ಪತ್ನಿ ಆತ್ಮಹತ್ಯೆ
  • ತವರು ಮನೆಗೆ ಪತ್ನಿಯನ್ನ ಕಳುಹಿಸಿ ಪ್ರೇಯಸಿ ಜೊತೆ ಗಂಡನ ಸುತ್ತಾಟ
Wife commits suicide after seeing photo of husband with young woman kolar rav
Author
First Published Oct 13, 2022, 11:56 AM IST

ಚಿಕ್ಕಬಳ್ಳಾಪುರ (ಅ.13) : 8 ತಿಂಗಳ ಹಿಂದೆಯಷ್ಟೇ ಸಪ್ತಪದಿ ತುಳಿದಿದ್ದ ಮಹಿಳೆ ತನ್ನ ಗಂಡ ಪರ ಸ್ತ್ರೀ ಜೊತೆ ಮೋಜು, ಮಸ್ತಿಯಲ್ಲಿ ಸುತ್ತಾಡಿದ್ದ ಪೋಟೋಗಳನ್ನು ನೋಡಿ ತೀವ್ರ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯ ಹೆಣ್ಣೂರು ಕದಿರೇನಹಳ್ಳಿಯಲ್ಲಿ ನಡೆದಿದೆ.ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು ಚಿಕ್ಕಬಳ್ಳಾಪುರ ತಾಲೂಕಿನ ಹೆಣ್ಣೂರು ಕದಿರೇನಹಳ್ಳಿ ಗ್ರಾಮದ 20 ವರ್ಷದ ಮೌನಿಕಾ ಎಂದು ಗುರುತಿಸಲಾಗಿದೆ.

ಗಂಡನ ಮಾನಸಿಕ ಹಿಂಸೆ ತಾಳದೇ ಪತ್ನಿ ಆತ್ಮಹತ್ಯೆ

ಏನಿದು ಪ್ರಕರಣ?

ವಿಜಯದಶಮಿ ಹಿನ್ನೆಲೆಯಲ್ಲಿ ಮೌನಿಕಳನ್ನು ಪತಿ ಭಾರ್ಗವ ತವರು ಮನೆಗೆ ಕಳುಹಿಸಿದ್ದ. ಈ ವೇಳೆ ಭಾರ್ಗವ್‌ ತನ್ನ ಪ್ರೇಯಸಿ ಜೊತೆ ಪ್ರವಾಸ ಹೋಗಿದ್ದಾನೆ. ಸಾಲದಿದ್ದಕ್ಕೆ ಪ್ರೇಯಸಿ ಜೊತೆ ಮೋಜು, ಮಸ್ತಿಯಲ್ಲಿ ಸುತ್ತಾಡಿರುವ ಪೋಟೋ, ವಿಡಿಯೋಗಳನ್ನು ತವರು ಮನೆಯಲ್ಲಿದ್ದ ಪತ್ನಿ ಮೋನಿಕಾ ಮೊಬೈಲ್‌ಗೆ ರವಾನಿಸಿದ್ದಾನೆ. ಇದನ್ನು ನೋಡಿದ ಮೋನಿಕಾ ತವರು ಮನೆಯಲ್ಲಿಯೆ ಕೊಠಡಿಯೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ತನ್ನ ಸಾವಿಗೆ ತನ್ನ ಗಂಡನೆ ಕಾರಣ ಅಂತ ಡೆತ್‌ ನೋಟ್‌ ಸಹ ಬರೆದಿಟ್ಟಿದ್ದಾಳೆ.

8 ತಿಂಗಳ ಹಿಂದೆ ಮದುವೆ:

ಮೋನಿಕಾ ತಂದೆ ತಾಯಿ ಬಡವರಾದರು ಕಷ್ಟಪಟ್ಟು ಆಕೆಯನ್ನು ಪದವಿವರೆಗೂ ಓದಿಸಿದ್ದರು. ಚಿಕ್ಕಬಳ್ಳಾಪುರ ನಗರ ಪ್ರಶಾಂತ್‌ ನಗರ ನಿವಾಸಿ 25 ವರ್ಷದ ಭಾರ್ಗವ್‌ ಕೊಟ್ಟು ಕಳೆದ 8 ತಿಂಗಳ ಹಿಂದೆಯಷ್ಟೇ ಅದ್ದೂರಿಯಾಗಿ ವಿವಾಹ ಮಾಡಿದ್ದರು. ಆದರೆ ಆತ ಮತ್ತೊಬ್ಬ ಯುವತಿಯನ್ನು ಪ್ರೇಮಿಸುತ್ತಿರು ಪೋಟೋಗಳನ್ನು ನೋಡಿ ಮನನೊಂದು ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ವಿಷಯ ಸುದ್ದಿ ತಿಳಿಯುತ್ತಿದ್ದಂತೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಕೌಟುಂಬಿಕ ಕಲಹಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ:

ಕೌಟುಂಬಿಕ ಕಲಹ ಹಿನ್ನೆಲೆ ಗೃಹಿಣಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಮನಗರದ ಕೆಂಪೇಗೌಡ ವೃತ್ತದ ಬಳಿ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಹಿಳೆ ನೇಣಿಗೆ ಶರಣಾಗಿದ್ದಾಳೆ.  ಶಶಿಕಲಾ(29) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ

ಕಳೆದ 8 ವರ್ಷಗಳ ಹಿಂದೆ ಸಂತೋಷ್ ಎಂಬಾತನೊಂದಿಗೆ ವಿವಾಹವಾಗಿತ್ತು ಶಶಿಕಲಾ. ಮೊದಲು ಎಲ್ಲವೂ ಚೆನ್ನಾಗಿದ್ದ ದಾಂಪತ್ಯ ದಿನಕಳೆದಂತೆ ಕೌಟುಂಬಿಕ ಕಲಹ ಶುರುವಾಗಿದೆ. ಕಲಹದಿಂದ ಬೇಸತ್ತಿದ್ದ ಶಶಿಕಲಾ. ಈ ಹಿಂದೆಯೂ ಆತ್ಮಹತ್ಯೆಗೆ ಯತ್ನಿಸಿದ್ದ ಶಶಿಕಲಾ. ಕೊನೆಗೆ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾಳೆ.

ಪತಿಯ ಮನೆಯವರ ಧನದಾಹಕ್ಕೆ ಮಗಳ ಬಲಿಯಾಗಿದ್ದಾಳೆಂದು ಶಶಿಕಲಾ ಕುಟುಂಬದವರು ಆರೋಪಿಸಿದ್ದಾರೆ. ಈ ಹಿನ್ನೆಲೆ ಪೊಲೀಸರು ದೂರು ದಾಖಲಿಸಿಕೊಂಡು ಪತಿ ಸಂತೋಷ್ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಟವರ್‌ನಿಂದ ಬಿದ್ದು ವ್ಯಕ್ತಿ ಸಾವು

ಬೆಳಗಾವಿ: ಸಾಲಭಾದೆ ತಾಳಲಾರದೇ ಟವರ್‌ ಏರಿಟ9k ವ್ಯಕ್ತಿಯೊರ್ವ ಆತ್ಮಹತ್ಯೆಗೆ ಯತ್ನಿಸಿದ್ದ. ನಂತರ ಈತನ ಮನ ಪರಿವರ್ತನೆ ಮಾಡಿ ಕೆಳಗೆ ಇಳಿಸಲು ಯತ್ನಿಸಿದ್ದಾರೆ. ಆದರೆ, ಇಳಿಯುವಾಗ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಈ ವೇಳೆ ಗಾಯಗೊಂಡ ಆತನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಆತ ಕೊನೆಯುಸಿರು ಎಳೆದ ಘಟನೆ ಜಿಲ್ಲೆಯ ಕಾಗವಾಡ ತಾಲೂಕಿನ ಮಂಗಾವತಿ ಗ್ರಾಮದಲ್ಲಿ ಬುಧವಾರ ನಡೆದಿದೆ.

ಸಂಜಯ ಕಲಗೌಡ ಪಾಟೀಲ…(35) ಮೃತಪಟ್ಟವ್ಯಕ್ತಿ. ಸಂಜಯ ಖಾಸಗಿ ಹಾಗೂ ಬ್ಯಾಂಕ್‌ಗಳಲ್ಲಿ ಸಾಲ ಮಾಡಿಕೊಂಡಿದ್ದ. ಇದನ್ನು ತೀರಿಸಲಾಗದೆ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ತಿಳಿದು ಬಂದಿದೆ. ಈ ಘಟನೆ ಕಾಗವಾಡ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸಂಜಯ ಟವರ್‌ನಿಂದ ಕಾಲು ಜಾರಿ ಕೆಳಗೆ ಬೀಳುವ ವಿಡಿಯೋವೊಂದು ಇದೀಗ ವೈರಲ್‌ ಆಗಿದೆ.

ಪ್ರೀತಿಸಿ ಕೈಕೊಟ್ಟ ಹುಡುಗಿ, ಪ್ರೇಯಸಿಗೆ ಖರ್ಚು ಮಾಡಿದ ಲೆಕ್ಕ ಬರೆದಿಟ್ಟು ಪ್ರಿಯಕರ ಆತ್ಮಹತ್ಯೆ

ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

ಕುಂದಾಪುರ: ಇಲ್ಲಿನ ವಡೇರಹೋಬಳಿ ಗ್ರಾಮದ ವಿಠಲ್ವಾಡಿ ಎಂಬಲ್ಲಿನ ನಿವಾಸಿ ನರಸಿಂಹ (53) ಎಂಬವರು ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ. ಸೋರಿಯಾಸಿಸ್‌ ಕಾಯಿಲೆಯಿಂದ ಬಳಲುತ್ತಿದ್ದು, 4 ತಿಂಗಳಿಂದ ಪಕ್ಷವಾತಕ್ಕೊಳಗಾಗಿದ್ದರು. ಕೆಲಸಕ್ಕೆ ಹೋಗಲಾಗದೆ ಹಣದ ಅಡಚಣೆಯಾಗಿ ಮನನೊಂದು ಅ.10ರಂದು ಮನೆಯಿಂದ ಕಾಣೆಯಾಗಿದ್ದರು. ಬುಧವಾರ ಅವರ ಶವ ಕಾಳಾವಾರದ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗುವ ದಾರಿಯ ಹಾಡಿಯಲ್ಲಿ ಪತ್ತೆಯಾಗಿದ್ದು, ಅವರು ಮರಕ್ಕೆ ಶಾಲಿನಿಂದ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ. ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios