Asianet Suvarna News Asianet Suvarna News

ಡ್ರಗ್ಸ್‌ ಕೇಸ್‌: ನಿರ್ಮಾಪಕನ ಪಾರ್ಟಿಯಲ್ಲಿ ನಾನು ಡ್ರಗ್ಸ್‌ ಸೇವಿಸಿಲ್ಲ, ಟಾಲಿವುಡ್‌ ನಟ ತಾನೀಶ್‌

ಡ್ರಗ್ಸ್‌ ಪ್ರಕ​ರ​ಣಕ್ಕೆ ಸಂಬಂಧಿ​ಸಿ​ದಂತೆ ಸ್ಯಾಂಡ​ಲ್‌​ವು​ಡ್‌ ನಿರ್ಮಾ​ಪಕ ಶಂಕರ್‌ ಗೌಡ ಅವ​ರನ್ನು ವಿಚಾ​ರಣೆ ನಡೆ​ಸ​ಲಾ​ಗಿತ್ತು| ಈ ವೇಳೆ ಸ್ಯಾಂಡ​ಲ್‌​ವು​ಡ್‌, ಟಾಲಿ​ವುಡ್‌, ಬಾಲಿ​ವುಡ್‌ ನಂಟಿನ ಬಗ್ಗೆ ಬಾಯಿ​ಬಿ​ಟ್ಟಿದ್ದ ಶಂಕರ್‌ ಗೌಡ| ಈ ಹಿನ್ನೆ​ಲೆ​ಯಲ್ಲಿ ತಾನೀ​ಶ್‌ಗೆ ನೋಟಿಸ್‌| 

Tollywood Actor Tanish Talks Over Drug Mafia Case grg
Author
Bengaluru, First Published Mar 18, 2021, 8:14 AM IST

ಬೆಂಗಳೂರು(ಮಾ.18): ಡ್ರಗ್ಸ್‌ ಪ್ರಕ​ರಣ ಸಂಬಂಧ ತೆಲುಗು ಸಿನಿಮಾ ನಟ ತಾನೀಶ್‌ ಎಂಬು​ವ​ವ​ರನ್ನು ಗೋವಿಂದ​ಪುರ ಪೊಲೀ​ಸರು ಬುಧ​ವಾರ ವಿಚಾ​ರಣೆ ನಡೆ​ಸಿ​ದ್ದಾ​ರೆ.

ಈ ಹಿಂದೆ ಇದೇ ಪ್ರಕ​ರ​ಣಕ್ಕೆ ಸಂಬಂಧಿ​ಸಿ​ದಂತೆ ಸ್ಯಾಂಡ​ಲ್‌​ವು​ಡ್‌ ನಿರ್ಮಾ​ಪಕ ಶಂಕರ್‌ ಗೌಡ ಅವ​ರನ್ನು ವಿಚಾ​ರಣೆ ನಡೆ​ಸ​ಲಾ​ಗಿತ್ತು. ಈ ವೇಳೆ ಸ್ಯಾಂಡ​ಲ್‌​ವು​ಡ್‌, ಟಾಲಿ​ವುಡ್‌, ಬಾಲಿ​ವುಡ್‌ ನಂಟಿನ ಬಗ್ಗೆ ಬಾಯಿ​ಬಿ​ಟ್ಟಿದ್ದರು. ಈ ಹಿನ್ನೆ​ಲೆ​ಯಲ್ಲಿ ತಾನೀ​ಶ್‌ಗೆ ನೋಟಿಸ್‌ ಕೊಡ​ಲಾ​ಗಿ​ತ್ತು.

ಸಿಕ್ಕಿಬಿದ್ದ ಡ್ರಗ್ಸ್‌ಕೇಸ್ ಕಿಂಗ್‌ಪಿನ್, ಟಾಲಿವುಡ್ ನಟ ತನುಷ್‌ಗೂ ಸಂಕಷ್ಟ

ಈ ಸಂಬಂಧ ಬುಧ​ವಾರ ಮಧ್ಯಾಹ್ನ ತಾನೀಶ್‌ ವಿಚಾ​ರ​ಣೆಗೆ ಹಾಜ​ರಾ​ಗಿದ್ದು, ತಡರಾತ್ರಿ ವರೆಗೆ ವಿಚಾ​ರಣೆ ನಡೆ​ಸ​ಲಾ​ಗಿದೆ. ಬಳಿಕ ಅವರ ರಕ್ತದ ಮಾದರಿ ಮತ್ತು ಮೂತ್ರ​ದ ಸ್ಯಾಂಪಲ್‌ ಪಡೆದು ವೈದ್ಯ​ಕೀಯ ಪರೀ​ಕ್ಷೆಗೆ ಕಳು​ಹಿ​ಸ​ಲಾ​ಗಿ​ದೆ.

ವಿಚಾ​ರಣೆ ಸಂದ​ರ್ಭ​ದಲ್ಲಿ ಬೆಂಗ​ಳೂ​ರಿನ ಸಂಜ​ಯ್‌​ನ​ಗ​ರ​ದಲ್ಲಿ ನಿರ್ಮಾ​ಪಕ ಶಂಕರ್‌ ಗೌಡ ಅವರ ಕಚೇ​ರಿ​ಯಲ್ಲಿ ನಡೆ​ಯು​ತ್ತಿದ್ದ ಪಾರ್ಟಿಗೆ ಹಾಜ​ರಾ​ಗು​ತ್ತಿದ್ದೆ. ಈ ವೇಳೆ ಕೆಲ​ವರು ಡ್ರಗ್ಸ್‌ ಸೇವಿ​ಸು​ತ್ತಿ​ದ್ದರು. ಆದರೆ, ತಾನೂ ಡ್ರಗ್ಸ್‌ ಸೇವನೆ ಮಾಡು​ತ್ತಿ​ರ​ಲಿಲ್ಲ ಎಂದು ಹೇಳಿ​ಕೆ ನೀಡಿ​ದ್ದಾರೆ. ಹೀಗಾಗಿ ಗುರು​ವಾರ ಮತ್ತೊಮ್ಮೆ ವಿಚಾ​ರ​ಣೆಗೆ ಹಾಜ​ರಾ​ಗ​ಬೇ​ಕೆಂದು ನೋಟಿಸ್‌ ಕೊಟ್ಟು ಕಳು​ಹಿ​ಸ​ಲಾ​ಗಿ​ದೆ ಎಂದು ಮೂಲ​ಗಳು ತಿಳಿ​ಸಿ​ವೆ.
 

Follow Us:
Download App:
  • android
  • ios