ಕಾಂಗ್ರೆಸ್ಸಿನಿಂದ ನಾಮಪತ್ರ ಸಲ್ಲಿಸಲು ಸಹಸ್ರಾರು ಸಂಖ್ಯೆಯಲ್ಲಿ ಹೊರಟ ಮೆರವಣಿಗೆ ಸಂದರ್ಭದಲ್ಲಿ ರೈತರೊಬ್ಬರ ಬೈಕ್‌ನ ಬ್ಯಾಗನಲ್ಲಿದ್ದ .₹2.30 ಲಕ್ಷ ನಗದನ್ನು ಕಳ್ಳತನ ಮಾಡಿದ ಘಟನೆ ಬುಧವಾರ ಜರುಗಿದೆ.

ಹರಪನಹಳ್ಳಿ (ಏ.20) : ಕಾಂಗ್ರೆಸ್ಸಿನಿಂದ ನಾಮಪತ್ರ ಸಲ್ಲಿಸಲು ಸಹಸ್ರಾರು ಸಂಖ್ಯೆಯಲ್ಲಿ ಹೊರಟ ಮೆರವಣಿಗೆ ಸಂದರ್ಭದಲ್ಲಿ ರೈತರೊಬ್ಬರ ಬೈಕ್‌ನ ಬ್ಯಾಗನಲ್ಲಿದ್ದ .₹2.30 ಲಕ್ಷ ನಗದನ್ನು ಕಳ್ಳತನ ಮಾಡಿದ ಘಟನೆ ಬುಧವಾರ ಜರುಗಿದೆ.

Add Asianetnews Kannada as a Preferred SourcegooglePreferred

ತಾಲೂಕಿನ ಚೆನ್ನಹಳ್ಳಿ ತಾಂಡಾದ ತಾವರೆನಾಯ್ಕ ಎಂಬವರೇ ಹಣ ಕಳೆದುಕೊಂಡ ರೈತ. ಸಾಲದ ಬಾಕಿ ಹಾಗೂ ಬಡ್ಡಿ ಸೇರಿ ಒಟ್ಟು .2.30 ಲಕ್ಷ ಹಣವನ್ನು ಬಟ್ಟೆಚೀಲದಲ್ಲಿ ಇಟ್ಟುಕೊಂಡು ಪಟ್ಟಣದ ಕೆನರಾ ಬ್ಯಾಂಕ್‌ಗೆ ಪಾವತಿಸಲು ತೆರಳಿದ್ದರು. ಆಗ ವ್ಯವಸ್ಥಾಪಕರು ಈ ದಿನ ಆಗುವುದಿಲ್ಲ, ನಾಳೆ ಬರಲು ತಿಳಿಸಿದ್ದಾರೆ.

ಸೂಕ್ತ ಬೆಲೆ ಸಿಗದೆ ಎಲೆಕೋಸು ಬೆಳೆ ನಾಶ ಮಾಡಿದ ಬಳ್ಳಾರಿ ರೈತ !

ಆದ್ದರಿಂದ ಆ ಹಣವನ್ನು ಬೈಕ್‌ನ ಬ್ಯಾಗಿನಲ್ಲಿ ಇಟ್ಟುಕೊಂಡು ಬಟ್ಟೆತೆಗೆದುಕೊಂಡು ಹೋಗಲು ಗೌಳೇರಪೇಟೆಯ ಅಶೋಕ ಗಾರ್ಮೆಂಟ್ಸ್‌ ಬಳಿ ಹೋಗಿ ಬೈಕ್‌ ನಿಲ್ಲಿಸಿ ಬ್ಯಾಗನಲ್ಲಿದ್ದ ಹಣ ನೋಡಿದಾಗ ಹಣ ಇರಲಿಲ್ಲ.

ಕೋಟೆ ಆಂಜನೇಯ ದೇವಸ್ಥಾನದಿಂದ ಈ ಸಂದರ್ಭದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ನಾಮಪತ್ರ ಸಲ್ಲಿಸಲು ಸಹಸ್ರಾರು ಸಂಖ್ಯೆಯಲ್ಲಿ ಮೆರವಣಿಗೆ ಹೊರಟಿದ್ದರು. ಆಗ ಪುರಸಭಾ ಮುಂದಿನ ವೃತ್ತದಲ್ಲಿ ಮೆರವಣಿಗೆ ದಾಟಿ ಹೋಗುವಾಗ ಬೈಕ್‌ನ ಬ್ಯಾಗನಲ್ಲಿದ್ದ ಹಣವನ್ನು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಈ ಕುರಿತು ದೂರನ್ನು ಹರಪನಹಳ್ಳಿ ಪಟ್ಟಣದ ಠಾಣೆಯಲ್ಲಿ ಪಿಎಸ್‌ಐ ಶಾಂತಮೂರ್ತಿ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಅನ್ನ ಕೊಟ್ಟ ಮನೆಗೆ ಕನ್ನ ಹಾಕಿ, ಸಹಚರರ ಜೊತೆ ಸಿಕ್ಕಿಬಿದ್ದ ಚಾಲಾಕಿ ಕಳ್ಳಿ!