ಗೀತಾ ಎಂಬುವರೇ ಅಳಿಯನಿಂದಲೇ ಚಾಕು ಇರಿತಕ್ಕೊಳಾಗದವರಾಗಿದ್ದಾರೆ. ಮನೋಜ್ ಎಂಬಾತನೇ ಗೀತಾ ಅವರಿಗೆ ಚಾಕುವಿನಿಂದ ಆರೋಪಿಯಾಗಿದ್ದಾನೆ. 

ಬೆಂಗಳೂರು(ಜೂ.14): ಹೆಂಡತಿಯನ್ನ ಮನೆಗೆ ಕಳಿಸದ ಹಿನ್ನೆಲೆಯಲ್ಲಿ ಅಳಿಯನೊಬ್ಬ ಅತ್ತೆಗೆ ಚಾಕು ಇರಿದ ಘಟನೆ ಬೆಂಗಳೂರಿನ ಬೆಳ್ಳಂದೂರು ಬಳಿಯ ಇಬ್ಬಲೂರಿನಲ್ಲಿ ಇಂದು(ಬುಧವಾರ) ನಡೆದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗೀತಾ ಎಂಬುವರೇ ಅಳಿಯನಿಂದಲೇ ಚಾಕು ಇರಿತಕ್ಕೊಳಾಗದವರಾಗಿದ್ದಾರೆ. ಮನೋಜ್ ಎಂಬಾತನೇ ಗೀತಾ ಅವರಿಗೆ ಚಾಕುವಿನಿಂದ ಆರೋಪಿಯಾಗಿದ್ದಾನೆ. 

Karnataka crime : ದೇವರಮನೆಗುಡ್ಡದಲ್ಲಿ ಬಂಟ್ವಾಳ ಮೂಲದ ಯುವಕನ ಶವ ಪತ್ತೆ

ಆರೋಪಿ ಮನೋಜ್ ಮೂರು ವರ್ಷಗಳ ಹಿಂದೆ ವರ್ಷಿತಾ ಎಂಬಾಕೆಯನ್ನ ಪ್ರೀತಿಸಿ ಮದ್ವೆಯಾಗಿದ್ದನು. ಬಳಿಕ ಗಂಡ ಕೆಲಸ ಮಾಡ್ತಿಲ್ಲ ಅಂತ ವರ್ಷಿತಾ ತವರು ಮನೆ ಸೇರಿದ್ದಳಂತೆ. 

ಈ ಹಿನ್ನೆಲೆಯಲ್ಲಿ ಪತ್ನಿಯನ್ನು ಮನೋಜ್ ಕರೆತರಲು ಹೋಗಿದ್ದ. ಈ ವೇಳೆ ಅತ್ತೆ ಮತ್ತು ಅಳಿಯನ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಅತ್ತೆ ಗೀತಾಗೆ ಅಳಿಯ ಮನೋಜ್ ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಬೆಳ್ಳಂದೂರು ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.