Asianet Suvarna News Asianet Suvarna News

ಅಮ್ಮನ ಹುಟ್ಟುಹಬ್ಬದಂದು ಸೂಸೈಡ್‌ ಮಾಡಿಕೊಂಡ ಮಗ, ವಿಶ್ವದ ಬೆಸ್ಟ್‌ ಗಿಫ್ಟ್‌ ಎಂದು ಡೆತ್‌ನೋಟ್‌!

ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಬೆಹ್ರೋಡ್ ನಲ್ಲಿ 15 ವರ್ಷದ ವಿದ್ಯಾರ್ಥಿಯೊಬ್ಬ ಸಣ್ಣ ಕಾರಣಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. 
 

Rajasthan 15 Year Boy Commits Suicide on Mothers Birthday Says Best Gift in the world pod
Author
Bangalore, First Published Jul 16, 2022, 9:51 AM IST

ಅಲ್ವಾರ್(ಜು.16): ಜಿಲ್ಲೆಯ ಬೆಹ್ರೋಡ್‌ನಲ್ಲಿ 15 ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವುದು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ತಾಯಿಯ ಹುಟ್ಟುಹಬ್ಬದ ದಿನ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಾವು ನನ್ನ ತಾಯಿಗೆ ಹುಟ್ಟುಹಬ್ಬದ ಉಡುಗೊರೆ ಎಂದು ಬಣ್ಣಿಸಿದ್ದಾನೆ. ಕಾರಣ ಸಂಪೂರ್ಣವಾಗಿ ಸ್ಪಷ್ಟವಾಗಿಲ್ಲ, ಆದರೆ ವಿದ್ಯಾರ್ಥಿ ಬರೆದಿರುವ ಸೂಸೈಡ್ ನೋಟ್ ಪ್ರಕಾರ, ಅವನ ಶಾಲಾ ಉಡುಗೆ ಬಂದಿಲ್ಲ ಎನ್ನಲಾಗಿದೆ. ಮಗು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದೆ.

ತಂದೆ ಈಗಾಗಲೇ ತೀರಿಕೊಂಡಿದ್ದಾರೆ

ಮೃತ ವಿದ್ಯಾರ್ಥಿ ರೋಹಿತ್ ಖಾಸಗಿ ಶಾಲೆಯೊಂದರಲ್ಲಿ 10ನೇ ತರಗತಿ ಓದುತ್ತಿದ್ದ. ಅವರ ತಂದೆ ತೀರಿಕೊಂಡಿದ್ದಾರೆ. ತಾಯಿ ಕಾಂಚನ್ ತನ್ನ ಗಂಡನ ಮರಣದ ನಂತರ ಕೋಟಾದ ಹರಿಯಾಣ ಗಡಿಯ ಸಮೀಪವಿರುವ ಭಗವಾದಿ ಖುರ್ದ್ ಗ್ರಾಮದ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಹರಾವ್‌ನ 2ನೇ ವಾರ್ಡ್‌ನಲ್ಲಿರುವ ಓಂ ಆಸ್ಪತ್ರೆ ಬಳಿ ಇರುವ ಕಾಲೋನಿಯಲ್ಲಿ ಅವರ ಮನೆ ಇದೆ. ಇದು ಬಾಡಿಗೆ ಮನೆಯಾಗಿದೆ. ರೋಹಿತ್‌ಗೆ ಒಬ್ಬ ಸಹೋದರಿ ಇದ್ದಾರೆ, ಅಕೆ ಮಾವನ ಮನೆಯಲ್ಲಿದ್ದು, ಪ್ರಸ್ತುತ 12 ನೇ ತರಗತಿಯಲ್ಲಿ ಓದುತ್ತಿದ್ದಾರೆ.

ಪ್ರಕರಣದ ತನಿಖೆ ನಡೆಸುತ್ತಿರುವ ಎಎಸ್‌ಐ ರಾಜಕಮಲ್ ಜಾಬ್ಟೆ ಅವರ ಪ್ರಕಾರ, ಪೊಲೀಸರಿಗೆ ಸ್ಥಳದಲ್ಲಿ ಆತ್ಮಹತ್ಯೆ ಪತ್ರ ಸಿಕ್ಕಿದೆ. ಇದರಲ್ಲಿ ರೋಹಿತ್ ಸಾಯುವ ಮುನ್ನ ತನ್ನ ತಾಯಿಗಾಗಿ ಏನನ್ನೋ ಬರೆದಿದ್ದಾನೆ. ಅಮ್ಮ ನೀನು ಇನ್ಮುಂದೆ ಯಾವತ್ತೂ ಶಾಲೆಗೆ ತಡವಾಗಿ ತಲುಪುವುದಿಲ್ಲ. ನಾನು ನಿಮಗೆ ಪ್ರಪಂಚದಲ್ಲೇ ದೊಡ್ಡ ಉಡುಗೊರೆಯನ್ನು ನೀಡಲಿದ್ದೇನೆ. ಜನ್ಮದಿನದ ಉಡುಗೊರೆ- ಜನ್ಮದಿನದ ಶುಭಾಶಯಗಳು ಮಮ್ಮಿ ಎಂದು ಬರೆದಿದ್ದಾನೆ. ತಾಯಿ ಆಗಾಗ್ಗೆ ಶಾಲೆಗೆ ತಡವಾಗಿ ಬರುತ್ತಿದ್ದರು ಎಂದು ಹೇಳಲಾಗಿದೆ. ಇದಕ್ಕೆ ತಾನೇ ಕಾರಣ ಎಂಬುವುದು ರೋಹಿತ್ ಅನಿಸಿಕೆಯಾಗಿತ್ತು. ಆದರೆ, ಈ ಆತ್ಮಹತ್ಯೆಗೆ ಪ್ರಮುಖ ಕಾರಣವೆಂದರೆ ಮಗುವಿನ ಶಾಲಾ ಉಡುಗೆ ವಿಳಂಬವಾಗಿದೆ. ಕಾರಣಾಂತರಗಳಿಂದ ಮಗುವಿನ ಸ್ಕೂಲ್ ಸಮವಸ್ತ್ರ ಬಂದಿರಲಿಲ್ಲ. ಈ ಕುರಿತು ಗ್ರಾಮ ಪಂಚಾಯಿತಿ ಗುಂಟಿ ಸರಪಂಚ್ ಅನಿಲ್ ಕುಮಾರ್ ಮೀನಾ ಪೊಲೀಸರಿಗೆ ದೂರು ನೀಡಿದ್ದಾರೆ.

ಕಾರಣ ಇನ್ನೂ ಸ್ಪಷ್ಟವಾಗಿಲ್ಲ

ಘಟನೆ ನಡೆದಾಗ ತಾಯಿ ಮನೆಯಲ್ಲಿ ಇರಲಿಲ್ಲ. ಮನೆಗೆ ಹಿಂದಿರುಗಿದಾಗ ಅದು ಪತ್ತೆಯಾಗಿದೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಶವವನ್ನು ಆಸ್ಪತ್ರೆಯ ಶವಾಗಾರದಲ್ಲಿರಿಸಿ ತನಿಖೆ ಆರಂಭಿಸಿದ್ದಾರೆ. ವಿದ್ಯಾರ್ಥಿ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಪತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆತ್ಮಹತ್ಯೆಯ ಹಿಂದಿನ ನಿಜವಾದ ಕಾರಣವನ್ನು ತಿಳಿಯಲು ಮೃತರ ಸಂಬಂಧಿಕರನ್ನು ವಿಚಾರಣೆ ನಡೆಸಲಾಗುತ್ತಿದೆ. ವಿದ್ಯಾರ್ಥಿ ಹಲವು ದಿನಗಳಿಂದ ಮಾನಸಿಕ ತೊಂದರೆಯಿಂದ ಬಳಲುತ್ತಿದ್ದ. ಆದರೆ ಅವನ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎಂದು ಯಾರಿಗೂ ತಿಳಿದಿರಲಿಲ್ಲ. ಘಟನೆ ಶುಕ್ರವಾರ ನಡೆದಿದೆ.

Follow Us:
Download App:
  • android
  • ios