ಐಐಎಸ್‌ಸಿ ಕ್ಯಾಂಪಸ್‌ನ ಕಟ್ಟಡದ 6 ನೇ ಪ್ಲೋರ್‌ನಿಂದ ಜಿಗಿದು ಡೈಮಂಡ್ ಕುಶ್ವಾಹ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತ ಡೈಮಂಡ್ ಕುಶ್ವಾಹ ಐಐಎಸ್‌ಸಿ ಕ್ಯಾಂಪಸ್‌ನಲ್ಲಿ ಕೆಮಿಕಲ್ ಸೈನ್ಸ್ ವಿಭಾಗದ ವಿದ್ಯಾರ್ಥಿಯಾಗಿದ್ದನು. ಆತ್ಮಹತ್ಯೆಗೆ ಶರಣಾದ ಕುಶ್ವಾಹ ದೆಹಲಿ ಮೂಲದವರಾಗಿದ್ದಾನೆ. 

ಬೆಂಗಳೂರು(ಡಿ.01): ಕಟ್ಟಡದ 6 ನೇ ಪ್ಲೋರ್‌ನಿಂದ ಜಿಗಿದು ಪಿಹೆಚ್‌ಡಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಐಐಎಸ್‌ಸಿ ಕ್ಯಾಂಪಸ್‌ನಲ್ಲಿ ಇಂದು(ಶುಕ್ರವಾರ) ನಡೆದಿದೆ. ಡೈಮಂಡ್ ಕುಶ್ವಾಹ ಆತ್ಮಹತ್ಯೆಗೆ ಶರಣಾದ ಪಿಹೆಚ್‌ಡಿ ವಿದ್ಯಾರ್ಥಿಯಾಗಿದ್ದಾನೆ. 

ಐಐಎಸ್‌ಸಿ ಕ್ಯಾಂಪಸ್‌ನ ಕಟ್ಟಡದ 6 ನೇ ಪ್ಲೋರ್‌ನಿಂದ ಜಿಗಿದು ಡೈಮಂಡ್ ಕುಶ್ವಾಹ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತ ಡೈಮಂಡ್ ಕುಶ್ವಾಹ ಐಐಎಸ್‌ಸಿ ಕ್ಯಾಂಪಸ್‌ನಲ್ಲಿ ಕೆಮಿಕಲ್ ಸೈನ್ಸ್ ವಿಭಾಗದ ವಿದ್ಯಾರ್ಥಿಯಾಗಿದ್ದನು. ಆತ್ಮಹತ್ಯೆಗೆ ಶರಣಾದ ಕುಶ್ವಾಹ ದೆಹಲಿ ಮೂಲದವರಾಗಿದ್ದಾನೆ ಎಂದು ತಿಳಿದು ಬಂದಿದೆ. 

ರಾಯಚೂರು: ಪರೀಕ್ಷೆಯಲ್ಲಿ ನಕಲು ಮಾಡಿ ಡಿಬಾರ್‌ ಆದ ವಿದ್ಯಾರ್ಥಿನಿ ಆತ್ಮಹತ್ಯೆ ಯತ್ನ

ಇಂದು ಬೆಳಗಿನ ಜಾವ 7:10ರ ಸುಮಾರಿಗೆ ಘಟನೆ ನಡೆದಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಮೃತದೇಹವನ್ನ ಎಂಎಸ್ ರಾಮಯ್ಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.