Asianet Suvarna News Asianet Suvarna News

ಜಾತಿ ಕೇಳಿ ದಲಿತ ವ್ಯಕ್ತಿಗೆ ಥಳಿತ, ಗುಪ್ತಾಂಗಕ್ಕೆ ಗಾಯ!

* ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂತು ಹೀನಾಯ ಘಟನೆ

* ವ್ಯಕ್ತಿಯ ಜಾತಿ ಕೇಳಿ ಥಳಿಸಿದ ಗುಂಪು

* ವೈರಲ್ ಆಯ್ತು ಘಟನೆಯ ವಿಡಿಯೋ

On Camera, Dalit Man Beaten Up Hit On Privates In Uttar Pradesh pod
Author
Bangalore, First Published Jul 10, 2021, 1:53 PM IST

ಲಕ್ನೋ(ಜು.10): ಉತ್ತರ ಪ್ರದೇಶದ ಕಾನ್ಪುರದಲ್ಲಿ ದಲಿತ ವ್ಯಕ್ತಿ ಮೇಲೆ ದಾಳಿ ನಡೆದ ಪ್ರಕರಣ ಬೆಳಕಿಗೆ ಬಂದಿದೆ. ಕಾನ್ಪುರದಲ್ಲಿ ನಡೆದ ಈ ಅಮಾನವೀಯ ಘಟನೆಯ ವಿಡಿಯೋ ಸದ್ಯ ಭಾರೀ ವೈರಲ್ ಆಗಿದೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಮತ್ತೊಬ್ಬನ ಬಳಿ ಜಾತಿ ಯಾವುದೆಂದು ಪ್ರಶ್ನಿಸಿದ್ದು, ಆ ವ್ಯಕ್ತಿ ತಾನು ದಲಿತ ಎನ್ನುತ್ತಿದ್ದಂತೆಯೇ ಆತನನ್ನು ಥಳಿಸುವ ದೃಶ್ಯಗಳಿವೆ. ದಲಿತನೆಂಬ ಕಾರಣಕ್ಕೆ ಗುಂಪೊಂದು ವ್ಯಕ್ತಿಯನ್ನು ಹಿಗ್ಗಮುಗ್ಗಾ ಥಳಿಸಿದ್ದು, ಆತನ ಗುಪ್ತಾಂಗಕ್ಕೂ ದೊಣ್ಣೆಯಿಂದ ಹೊಡೆದಿದ್ದಾರೆ. ಬಳಿಕ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಹಿತಿ ಪಡೆದ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಕಾನ್ಪುರದ ದೇಹಾತ್‌ನಲ್ಲಿ ಈ ಘಟನೆ ನಡೆದಿದ್ದು, ಸಂತ್ರಸ್ತ ವ್ಯಕ್ತಿ ಓರ್ವ ದಿನಗೂಲಿ ಕಾರ್ಮಿಕ ಎನ್ನಲಾಗಿದೆ. ಆರೋಪಿಗಳು ವ್ಯಕ್ತಿಯನ್ನು ಚಪ್ಪಲಿ, ದೊಣ್ಣೆ ಹೀಗೆ ಕೈಗೆ ಸಿಕ್ಕ ವಸ್ತುಗಳಲ್ಲಿ ಹೊಡೆದಿದ್ದಾರೆ. ಈ ನಡುವೆ ಆರೋಪಿಗಳಲ್ಲೊಬ್ಬಾತ ಸಂಸತ್ರಸ್ತನ ಗುಪ್ತಾಂಗಕ್ಕೆ ದೊಣ್ಣೆ ಹಾಕಲು ಯತ್ನಿಸಿದ್ದಾನೆ. ಹೀಗಿರುವಾಗ ಸಂತ್ರಸ್ತ ನೋವಿನಿಂದ ಅಳುತ್ತಿರುವ ಧ್ವನಿಯೂ ವಿಡಿಯೋದಲ್ಲಿದೆ. ಈ ಘಟನೆ ಎರಡು ದಿನ ಹಿಂದಿನದ್ದೆನ್ನಲಾಗಿದೆ.

ಇನ್ನು ಪ್ರೇಮ ಪ್ರಸಂಗಕ್ಕೆ ಸಂಬಂಧಿಸಿದಂತೆ ಈ ಜಗಳ ನಡೆದಿದೆ ಎಂದೂ ಹೇಳಲಾಗಿದೆ. ಯುವಕ ಮೇಲ್ಜಾತಿ ಯುವತಿಯನ್ನು ಪ್ರೀತಿಸುತ್ತಿದ್ದು, ಇದೇ ಕಾರಣಕ್ಕೆ ಆತನಿಗೆ ಥಳಿಸಲಾಗಿದೆ ಎನ್ನಲಾಗಿದೆ. 

Follow Us:
Download App:
  • android
  • ios