ರಾತ್ರಿ 10ರಿಂದ 11.30ರ ಸಮಯದಲ್ಲಿ ಮಡ್ಡಿ ಲಕ್ಷ್ಮಿದೇವಿ ಗುಡಿ ಹತ್ತಿರದ ಬಾವಿಯಲ್ಲಿ ತಮ್ಮೆರಡೂ ಕೈಗಳನ್ನು ಕಟ್ಟಿಕೊಂಡು ಜಿಗಿದು ಆತ್ಮಹತ್ಯೆ ಮಾಡಿಕೊಂಡ ವೃದ್ಧ ದಂಪತಿ 

ಮಹಾಲಿಂಗಪುರ(ಸೆ.09): ತಮಗಿರುವ ಕಾಯಿಲೆಯಿಂದ ಜಿಗುಪ್ಸೆಗೊಂಡು ವೃದ್ಧ ದಂಪತಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೀರಾಜಿ ಕಲಾಲ (72) ಮತ್ತು ಈತನ ಪತ್ನಿ ಸರಸ್ವತಿ ಕಲಾಲ (65) ತಮ್ಮ ಕೈಗಳಿಗೆ ಹಗ್ಗ ಕಟ್ಟಿಕೊಂಡು ಬಾವಿ ಹಾರಿ ಆತ್ಮಹತ್ಯೆ ಮಾಡಿಕೊಂಡವರು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಕುರಿತ ಪಟ್ಟಣ ಠಾಣೆಯಲ್ಲಿ ಇವರ ಪುತ್ರ ವಿನೋದ ಕಲಾಲ ದೂರು ನೀಡಿದ್ದಾರೆ. 

ಕಲಬುರಗಿ: ಕೆಲಸದಿಂದ ತೆಗೆದು ಹಾಕಲು ಯತ್ನ, ಆತ್ಮಹತ್ಯೆಗೆ ದಿವ್ಯಾಂಗ ವ್ಯಕ್ತಿ ಪ್ರಯತ್ನ

ಬುಧವಾರ ರಾತ್ರಿ 10ರಿಂದ 11.30ರ ಸಮಯದಲ್ಲಿ ಮಡ್ಡಿ ಲಕ್ಷ್ಮಿದೇವಿ ಗುಡಿ ಹತ್ತಿರದ ಬಾವಿಯಲ್ಲಿ ತಮ್ಮೆರಡೂ ಕೈಗಳನ್ನು ಕಟ್ಟಿಕೊಂಡು ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಮಹಾಲಿಂಗಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.