ಪಿಎಎಸ್‌ಸಿ ಪರೀಕ್ಷೆ ಪಾಸಾದರೂ ಉದ್ಯೋಗವಿಲ್ಲ ಖಿನ್ನತೆಯಿಂದ ಬಳಲಿ ಆತ್ಮಹತ್ಯೆಗೆ ಶರಣಾದ ಯುವಕ

ಮುಂಬೈ(ಜು.3): ಮಹಾರಾಷ್ಟ್ರ ಸಾರ್ವಜನಿಕ ಸೇವಾ ಆಯೋಗ (ಎಂಪಿಎಸ್ಸಿ) ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರವೂ ನೇಮಕಾತಿ ಇಲ್ಲದ ಕಾರಣ 24 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಿರುದ್ಯೋಗದಿಂದಾಗಿ ಆತ ಒತ್ತಡದಲ್ಲಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Add Asianetnews Kannada as a Preferred SourcegooglePreferred

ಮೃತನನ್ನು ಫರ್ಸುಂಗಿಯ ಗಂಗನಗರ ಪ್ರದೇಶದ ನಿವಾಸಿ ಸ್ವಾಪ್ನಿಲ್ ಸುನಿಲ್ ಲೋನಾಕರ್ ಎಂದು ಗುರುತಿಸಲಾಗಿದೆ. ಸ್ವಾಪ್ನಿಲ್ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.

ಅವರ ನಿವಾಸದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ವಾಪ್ನಿಲ್ ಅವರ ತಂದೆ ಸುನಿಲ್ ಲೋನಾಕರ್ ಅವರು ಶನಿವಾರ್ ಪೆತ್‌ನಲ್ಲಿ ಬಿಲ್ ಪುಸ್ತಕಗಳನ್ನು ತಯಾರಿಸುವ ಸಣ್ಣ ಮುದ್ರಣಾಲಯ ವ್ಯವಹಾರವನ್ನು ಹೊಂದಿದ್ದಾರೆ.

ಬಾಗೇಪಲ್ಲಿಯಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ ಅಕ್ರಮ ಗಣಿಗಾರಿಕೆ, ಪ್ರಶ್ನಿಸೋ ಹಾಗಿಲ್ವಂತೆ!

ಸ್ವಾಪ್ನಿಲ್ ಅವರ ಪೋಷಕರು ಎಂದಿನಂತೆ ಕೆಲಸಕ್ಕೆ ಹೋಗಿದ್ದರು. ಸಂಜೆ 4.30 ಕ್ಕೆ ಅವನ ಸಹೋದರಿ ಮನೆಗೆ ಬಂದಾಗ, ಅವನು ಅವನ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಕಂಡುಬಂದಿದ್ದಾನೆ. ನಂತರ ಸ್ವಪ್ನಿಲ್ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಅಲ್ಲಿ ವೈದ್ಯರು ಯುವಕ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಸ್ವಾಪ್ನಿಲ್ ಶಿಕ್ಷಣ ಮುಗಿದಾಗಿನಿಂದ ಎಂಪಿಎಸ್ಸಿ ಪರೀಕ್ಷೆಗಳಿಗೆ ತಯಾರಿ ನಡೆಸಿದ್ದರು. ಅವರು ಎಂಪಿಎಸ್ಸಿಯ 2019 ರ ಪೂರ್ವ ಮತ್ತು ಮುಖ್ಯ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದರು. ಆದರೆ, ಅವರನ್ನು ಒಂದೂವರೆ ವರ್ಷದಿಂದ ಸಂದರ್ಶಿಸಿರಲಿಲ್ಲ. ಅವರು 2020 ರಲ್ಲಿ ಎಂಪಿಎಸ್ಸಿ ಪರೀಕ್ಷೆಗೆ ಹಾಜರಾಗಿದ್ದರು.

[ಸಮಸ್ಯೆಗಳು ಜೀವನದ ಅವಿಭಾಜ್ಯ ಅಂಗ. ಸಮಸ್ಯೆಯಿಲ್ಲದ ಮನುಷ್ಯನಿಲ್ಲ. ಯಾವುದೇ ಸಮಸ್ಯೆ ಜೀವನದ ಅಂತ್ಯವಲ್ಲ. ಆತ್ಮಹತ್ಯೆ ಆಲೋಚನೆ ಹೊಳೆದರೆ ಸರ್ಕಾರದ ಸಹಾಯವಾಣಿಗೆ ಕರೆ ಮಾಡಿ: 080 25497777 ಅಥವಾ ಆರೋಗ್ಯ ಸಹಾಯವಾಣಿ 104 ಗೆ ಕರೆ ಮಾಡಿ]