Asianet Suvarna News Asianet Suvarna News

ಬಸವನಬಾಗೇವಾಡಿ: ತಾಯಿ- ಮಗಳು ನದಿಗೆ ಹಾರಿ ಆತ್ಮಹತ್ಯೆ

ಮೃತ ಶಕುಂತಲಾಳ ಪತಿ ವರ್ಷದ ಹಿಂದೆ ಮೃತಪಟ್ಟಿದ್ದರು, ಇದರಿಂದಾಗಿ ಅವರು ತೀವ್ರ ನೊಂದಿ​ದ್ದರು| ವಿವಾ​ಹಿತ ಮಗಳು ಗಂಗಾ ಸಹ ಮಾನಸಿಕ ಅಸ್ವಸ್ಥಳಾಗಿದ್ದಳು| ಮನನೊಂದು ಇಬ್ಬರೂ ಕೊರ್ತಿ-ಕೊಲ್ಹಾರ ಸೇತುವೆ ಬಳಿಯ ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆ| 

Mother Daughter Committs Suicide in Kolhar in Vijayapura District
Author
Bengaluru, First Published Jul 13, 2020, 2:16 PM IST

ಬಸವನಬಾಗೇವಾಡಿ(ಜು.13): ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಬಳೂತಿ ಸಮೀಪದ ಕೃಷ್ಣಾ ನದಿ ದಂಡೆಯಲ್ಲಿ ಭಾನುವಾರ ತಾಯಿ-ಮಗಳ ಶವ ಪತ್ತೆಯಾಗಿವೆ.  ವಿಜಯಪುರದ ಶಕುಂತಲಾ ಸಿದ್ದಣ್ಣ ಖೇಡ (50), ಇವರ ಮಗಳಾದ ಗಂಗಾ ಉದಯ ಹುಣಶ್ಯಾಳ (22) ಮೃತ ದುರ್ದೈ​ವಿ​ಗಳು.

ಶಕುಂತಲಾಳ ಪತಿ ವರ್ಷದ ಹಿಂದೆ ಮೃತಪಟ್ಟಿದ್ದರು. ಇದರಿಂದಾಗಿ ಅವರು ತೀವ್ರ ನೊಂದಿ​ದ್ದರು. ವಿವಾ​ಹಿತ ಮಗಳು ಗಂಗಾ ಸಹ ಮಾನಸಿಕ ಅಸ್ವಸ್ಥಳಾಗಿದ್ದಳು. ಮನನೊಂದು ಇಬ್ಬರೂ ಶನಿವಾರ ಯುಕೆಪಿ ಕ್ರಾಸ್‌ ಸಮೀಪದ ಕೊರ್ತಿ-ಕೊಲ್ಹಾರ ಸೇತುವೆ ಬಳಿಯ ಕೃಷ್ಣಾ ನದಿಗೆ ಹಾರಿದ್ದರು ಎನ್ನಲಾಗಿದೆ. 

ಪ್ರಿಯಕರನ ತೋಳ ತೆಕ್ಕೆಗೆ ಬರಲೊಪ್ಪದ ತಾಯಿ, ಬಲಿಯಾಗಿದ್ದು ಮಾತ್ರ ಪುಟ್ಟ ಮಗು!

ಭಾನುವಾರ ಬಳೂತಿ ಜಾಕ್‌ವೆಲ್‌ ಸಮೀಪ ನದಿ ತೀರದಲ್ಲಿ ಇಬ್ಬರ ಶವಗಳು ಪತ್ತೆಯಾಗಿವೆ. ಈ ಕುರಿತು ಕೊಲ್ಹಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Follow Us:
Download App:
  • android
  • ios