ಪೊಲೀಸರ ವೇಷ ಧರಿಸಿ ಬೈಕ್ ಕಳ್ಳತನ| ಯಾದಗಿರಿ ಜಿಲ್ಲೆಯ ಸುರಪುರ ನಗರದ ಜಲಾಲ್ ಮೋಹಲ್ಲಾ, ಮೇದಾಗಲ್ಲಿಯಲ್ಲಿ ನಡೆದ ಘಟನೆ| ಬೈಕ್ ಕದ್ದು ಪರಾರಿಯಾದ ಖದೀಮರು| 

ಯಾದಗಿರಿ(ಮಾ.17): ಪೊಲೀಸರ ವೇಷದಲ್ಲಿ ಬಂದ ಖದೀಮರ ತಂಡವೊಂದು ಬೈಕ್ ಕಳ್ಳತನ ಮಾಡಿ ಪರಾರಿಯಾದ ಘಟನೆ ಜಿಲ್ಲೆ ಸುರಪುರ ನಗರದ ಜಲಾಲ್ ಮೋಹಲ್ಲಾ, ಮೇದಾಗಲ್ಲಿಯಲ್ಲಿ ನಿನ್ನೆ ತಡರಾತ್ರಿ (ಬುಧವಾರ) ನಡೆದಿದೆ. KA 33 U 5051 ಬೈಕ್‌ಅನ್ನು ಖದೀಮರು ಕದ್ದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದಲ್ಲಿ ಕಳೆದ ಎರಡು ಮೂರು ತಿಂಗಳಿಂದ ಬೈಕ್‌ ಕಳ್ಳತನಗಳು ನಡೆಯುತ್ತಿವೆ. ಇದರಿಂದ ಸಾರ್ವಜನಿಕರು ಭಯದಲ್ಲೇ ಜೀವನ ಸಾಗಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ. 

ಹೆಂಡತಿ ಜೀವ ಹಿಂಡುತಿ...ಪತ್ನಿಯ ಐಷಾರಾಮಿ ಬದುಕಿಗೆ ಬೈಕ್ ಚೋರನಾದ!

ಪೊಲೀಸರ ಮಾರುವೇಷದಲ್ಲಿ ಬಂದು ಕಳ್ಳರು ಬೈಕ್ ಎಗರಿಸುತ್ತಿದ್ದಾರೆ. ಖದೀಮರು ಬೈಕ್ ತೆಗೆದುಕೊಂಡು ಹೋಗುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.