ಆಂಜನೇಯ ವಿಗ್ರಹಕ್ಕೆ ಬೆಂಕಿ ಹಚ್ಚಿ ಹುಂಡಿ ಕದ್ದ ಖದೀಮರು
ಆಂಜನೇಯ ಸ್ವಾಮಿ ದೇವಾಲಯ ಹಾಗೂ ವಿಗ್ರಹಕ್ಕೆ ಬೆಂಕಿ ಹಚ್ಚಿ, ದೇವರ ಪೋಟೋಗಳನ್ನು ಧ್ವಂಸ ಮಾಡಿದ ಕಿಡಿಗೇಡಿಗಳು| ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ನಡೆದ ಘಟನೆ| ಹುಂಡಿ 500 ಮೀ. ದೂರ ತೆಗೆದುಕೊಂಡು ಹೋಗಿ ಅದರಲ್ಲಿದ್ದ ಹಣ ದೋಚಿದ ಕಿಡಿಗೇಡಿಗಳು|
![Miscreants Fire on Anjaneya Temple in Nelamangala grg Miscreants Fire on Anjaneya Temple in Nelamangala grg](https://static-ai.asianetnews.com/images/01excaxvzk2dj7vryg3x7vywkk/pjimage--11--jpg_363x203xt.jpg)
ನೆಲಮಂಗಲ(ಫೆ.12): ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ಕಲ್ ಆಂಜನೇಯ ಸ್ವಾಮಿ ದೇವಾಲಯ ಹಾಗೂ ವಿಗ್ರಹಕ್ಕೆ ಬೆಂಕಿ ಹಚ್ಚಿ, ದೇವರ ಪೋಟೋಗಳನ್ನು ಧ್ವಂಸ ಮಾಡಿರುವ ಕೃತ್ಯ ಬುಧವಾರ ತಡರಾತ್ರಿ ನಡೆದಿದೆ.
ಮೊದಲಿಗೆ ದೇವಾಲಯದ ಪಕ್ಕದಲ್ಲಿರುವ ಮಂಗಳಮುಖಿಯರ ಮನೆಯ ಬಾಗಿಲ ಚಿಲಕವನ್ನು ಲಾಕ್ ಮಾಡಿದ್ದು, ಬಳಿಕ ದೇವಾಲಯದ ಬಾಗಿಲ ಬೀಗ ಒಡೆದು ಕೃತ್ಯ ಎಸಗಿದ್ದಾರೆ.
ದನ ಕದಿಯಲು ಬಂದ ವ್ಯಕ್ತಿ ಅನುಮಾನಾಸ್ಪದ ಸಾವು: ಕಾರಣ..?
ಹುಂಡಿಯನ್ನು 500 ಮೀ. ದೂರ ತೆಗೆದುಕೊಂಡು ಹೋಗಿ ಅದರಲ್ಲಿದ್ದ ಹಣ ದೋಚಿದ್ದಾರೆ. ಹುಂಡಿ ಹಣವನ್ನು ಕಳ್ಳತನ ಮಾಡುವ ಜೊತೆಗೆ ದೇವರ ನಾಮಫಲಕ ಹಿತ್ತಾಳೆ, ಆಂಜನೇಯನ ವಿಗ್ರಹ ಪುಡಿಪುಡಿ ಮಾಡಿದ್ದಾರೆ.