ನಾಪತ್ತೆಯಾಗಿದ್ದ ಸ್ವಾಮೀಜಿ ಪತ್ತೆಗೆ ಪೊಲೀಸರು ಸಮಾಧಿಯೊಂದನ್ನು ಅಗೆದಿದ್ದಾರೆ. ಈ ವೇಳೆ ಸ್ವಾಮಿಜಿ ಮೃತದೇಹ ಕುಳಿತ ರೀತಿಯಲ್ಲಿ ಸಮಾಧಿಯೊಳಗೆ ಪತ್ತೆಯಾಗಿದೆ. ಇದೀಗ ಪ್ರಕರಣ ರೋಚಕ ತಿರುವು ಪಡೆದುಕೊಂಡಿದೆ.

ತಿರುವನಂತಪುರಂ(ಜ.16) ಕೇರಳದ ನೆಯ್ಯಾಟಿಂಕರ ಗೋಪನ್ ಸ್ವಾಮಿಜಿ ನಾಪತ್ತೆ ಪ್ರಕರಣ ಇದೀಗ ಹಲವು ತಿರುವು ಪಡೆಯುವ ಸಾಧ್ಯತೆ ಇದೆ. ಸ್ವಾಮೀಜಿ ನಾಪತ್ತೆ ಪ್ರಕರಣದಿಂದ ಆರಂಭಗೊಂಡ ಪೊಲೀಸರ ತನಿಖೆ ಇದೀಗ ಸಮಾಧಿ ಅಗೆದು ಸ್ವಾಮೀಜಿಗಳ ಮೃತದೇಹ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಕುಟುಂಬಸ್ಥ ವಿರೋಧದ ನಡುವೆ ಹೈಕೋರ್ಟ್ ಆದೇಶದಿಂದ ಪೊಲೀಸರು ಸಮಾಧಿ ಅಗೆದಿದ್ದಾರೆ. ಈ ವೇಳೆ ಕುಳಿತ ರೀತಿಯಲ್ಲಿ ಸ್ವಾಮೀಜಿ ಮೃತದೇಹ ಪತ್ತೆಯಾಗಿದೆ. ಕುಳಿತಿರುವ ಭಂಗಿಯಲ್ಲಿದೆ ಶವ ಪತ್ತೆಯಾಗಿದೆ. ಆದರೆ, ಶವ ಗೋಪನ್ ಸ್ವಾಮಿಯವರದ್ದೇ ಎಂಬುದನ್ನು ವೈಜ್ಞಾನಿಕ ಪರೀಕ್ಷೆಯಿಂದ ಮಾತ್ರ ಖಚಿತಪಡಿಸಬಹುದು. ಭಸ್ಮ, ಪೂಜಾ ಸಾಮಗ್ರಿಗಳು ಮತ್ತು ಬಟ್ಟೆಗಳನ್ನು ಸಮಾಧಿಯಿಂದ ಪತ್ತೆ ಹಚ್ಚಲಾಗಿದೆ.

Add Asianetnews Kannada as a Preferred SourcegooglePreferred

ಸಮಾಧಿಯ ಮೇಲ್ಭಾಗದ ಸ್ಲ್ಯಾಬ್ ಅನ್ನು ಮಾತ್ರ ತೆಗೆಯಲಾಗಿದೆ. ಎದೆಯವರೆಗೆ ಪೂಜಾ ಸಾಮಗ್ರಿಗಳಿಂದ ತುಂಬಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತದೇಹದ ಮರಣೋತ್ತರ ಪರೀಕ್ಷೆಯಲ್ಲಿ ಮೂರು ಹಂತದ ಪರೀಕ್ಷೆ ನಡೆಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ. ವಿಷ ಸೇವಿಸಿ ಮರಣ ಹೊಂದಿದ್ದಾರೆಯೇ, ಗಾಯಗಳಿಂದ ಮರಣ ಹೊಂದಿದ್ದಾರೆಯೇ ಅಥವಾ ಸ್ವಾಭಾವಿಕ ಮರಣವೇ ಎಂದು ಪರಿಶೀಲಿಸಲಾಗುವುದು. ವಿಷ ಪತ್ತೆ ಹಚ್ಚಲು ಆಂತರಿಕ ಅಂಗಗಳ ಮಾದರಿಗಳನ್ನು ಸಂಗ್ರಹಿಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ. 

ಆ್ಯಂಬುಲೆನ್ಸ್‌ಗೆ ದಾರಿ ಬಿಡದೇ ಸಾಗಿದ ಕಾರು ಮಾಲೀಕ, ಮನೆ ಸೇರುವಷ್ಟರಲ್ಲೇ ಕಾದಿತ್ತು ಆಘಾತ!

ಆಂತರಿಕ ಅಂಗಗಳ ಮಾದರಿ ಪರೀಕ್ಷೆಯ ಫಲಿತಾಂಶ ಬರಲು ಒಂದು ವಾರವಾದರೂ ತಡವಾಗಬಹುದು. ಗಾಯಗಳಿವೆಯೇ ಎಂದು ಕಂಡುಹಿಡಿಯಲು ರೇಡಿಯಾಲಜಿ, ಎಕ್ಸ್‌ರೇ ಪರೀಕ್ಷೆ ನಡೆಸಲಾಗುವುದು. ಇದರ ಫಲಿತಾಂಶ ಇಂದು ಲಭ್ಯವಾಗಲಿದೆ. ಮೂರನೇ ಪರೀಕ್ಷೆಯು ಸ್ವಾಭಾವಿಕ ಮರಣವೇ ಎಂದು ಖಚಿತಪಡಿಸಿಕೊಳ್ಳಲು. ರೋಗ ಸ್ಥಿತಿ ಸೇರಿದಂತೆ ಹಲವು ಸನ್ನಿವೇಶಗಳನ್ನು ಪರಿಗಣಿಸಿ ಇದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು. ಮೃತಪಟ್ಟವರು ಗೋಪನ್ ಸ್ವಾಮಿಯವರೇ ಎಂದು ಖಚಿತಪಡಿಸಿಕೊಳ್ಳಲು ಡಿಎನ್‌ಎ ಪರೀಕ್ಷೆಯನ್ನೂ ನಡೆಸಲಾಗುವುದು. ಇದೇ ವೇಳೆ, ಮರಣೋತ್ತರ ಪರೀಕ್ಷೆ ನಡೆಯುವ ಸ್ಥಳಕ್ಕೆ ಮೂರನೇ ಮಗ ಸನಂದನ್‌ರನ್ನು ಕರೆದೊಯ್ಯಲಾಯಿತು. ಮೊದಲು ನಿರಾಕರಿಸಿದರೂ ನಂತರ ಮಗ ಹೋಗಲು ಒಪ್ಪಿಕೊಂಡರು. ಮರಣೋತ್ತರ ಪರೀಕ್ಷೆಯ ನಂತರ ಕುಟುಂಬಸ್ಥರು ಮೃತದೇಹವನ್ನು ಸ್ವೀಕರಿಸಬೇಕಾಗುತ್ತದೆ. 

ಮೃತದೇಹ ಕೊಳೆತಿದ್ದರೆ ಮರಣೋತ್ತರ ಪರೀಕ್ಷೆಯನ್ನು ಸ್ಥಳದಲ್ಲೇ ನಡೆಸಬಹುದೆಂದು ನಿರ್ಧರಿಸಲಾಗಿತ್ತು. ಆದ್ದರಿಂದ ಫೋರೆನ್ಸಿಕ್ ಸರ್ಜನ್ ಸೇರಿದಂತೆ ತಂಡ ಸ್ಥಳಕ್ಕೆ ಆಗಮಿಸಿತ್ತು. ಆದರೆ ಮೃತದೇಹ ಕೊಳೆತಿರಲಿಲ್ಲವಾದ್ದರಿಂದ ಫೋರೆನ್ಸಿಕ್ ತಂಡ ವಾಪಸ್ ಹೋಯಿತು. ಸಮಾಧಿಯಲ್ಲಿ ಕುಳಿತಿರುವಂತೆ ಮೃತದೇಹ ಪತ್ತೆಯಾಗಿದೆ. ಮೃತದೇಹದ ಸುತ್ತಲೂ ಭಸ್ಮ ಮತ್ತು ಪೂಜಾ ಸಾಮಗ್ರಿಗಳಿದ್ದವು. ಹೃದಯ ಭಾಗದವರೆಗೆ ಪೂಜಾ ಸಾಮಗ್ರಿಗಳನ್ನು ತುಂಬಿದ ಸ್ಥಿತಿಯಲ್ಲಿತ್ತು. 

ಜಿಲ್ಲಾಧಿಕಾರಿಯ ಆದೇಶದ ಮೇರೆಗೆ ಎರಡು ದಿನಗಳ ಹಿಂದೆ ಸಮಾಧಿ ತೆರೆಯಲು ಪ್ರಯತ್ನಿಸಿದರೂ, ಪ್ರತಿಭಟನೆಯಿಂದಾಗಿ ಹಿಂದೆ ಸರಿದಿದ್ದರು. ಗೋಪನ್ ಸ್ವಾಮಿ ನಾಪತ್ತೆಯಾಗಿರುವ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಸಮಾಧಿ ತೆರೆದು ಪರಿಶೀಲಿಸುವುದಕ್ಕೆ ಯಾವುದೇ ಅಡ್ಡಿಯಿಲ್ಲ ಎಂದು ನ್ಯಾಯಾಲಯ ಹೇಳಿತ್ತು. ಬಳಿಕ ಪೊಲೀಸರು ತನಿಖೆ ಮುಂದುವರಿಸಲು ನಿರ್ಧರಿಸಿದರು. ಬೆಳಗ್ಗೆ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಮನೆಗೆ ಬಂದು ಸಮಾಧಿ ತೆರೆಯಲಾಯಿತು. ಆದರೆ, ಮೊದಲು ಪ್ರತಿಭಟನೆ ನಡೆದಿದ್ದರೂ, ಇಂದು ಸಮಾಧಿ ತೆರೆಯುವಾಗ ಕುಟುಂಬದಿಂದ ಯಾವುದೇ ಪ್ರತಿಭಟನೆ ವ್ಯಕ್ತವಾಗಲಿಲ್ಲ. 
ಗೊತ್ತಿಲ್ಲದೆ ಸೈಬರ್ ಪೊಲೀಸ್‌ಗೆ ಕರೆ ಮಾಡಿದ ನಕಲಿ ಪೊಲೀಸ್, ವಂಚಿಸಲು ಹೋದವ ಏನಾದ?