Asianet Suvarna News Asianet Suvarna News

ಎಣ್ಣೆ ಹೊಡೆದ ವಿಷ್ಯ, ಅಪ್ಪನಿಗೆ ಹೇಳಿದ್ದಕ್ಕೆ ಕೊಂದೇ ಬಿಟ್ರು: ಎರಡು ಡಿಚ್ಚಿ, ನಾಲ್ಕು ಗುನ್ನಾಗೆ ಮಟಾಷ್‌

ಮನೆ ಉದ್ಘಾಟನೆ ಪಾರ್ಟಿ ವೇಳೆ ಮದ್ಯ ಸೇವನೆ ಮಾಡಿದ ವಿಚಾರವನ್ನು ಮನೆಯಲ್ಲಿ ಹೇಳಿದ ವ್ಯಕ್ತಿಯನ್ನು ಅಮಾನುಷವಾಗಿ ಹೊಡೆದ ಕೊಲೆ ಮಾಡಿದ ಘಟನೆ ಹಾಸನದಲ್ಲಿ ನಡೆದಿದೆ.

Hassan youths killed the person who told him about drinking alcohol at home sat
Author
First Published Aug 2, 2023, 3:14 PM IST

ಕೆ.ಎಂ. ಹರೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್

ಹಾಸನ (ಆ.02): ಮದ್ಯ ಸೇವನೆ ಮಾಡಿದ ನಂತರ ಆಗುವ ಅವಾಂತರಗಳು ಒಂದೆರಡಲ್ಲ. ಇಲ್ಲೊಬ್ಬ ಯುವಕ ತಾನು ಮದ್ಯ ಸೇವನೆ ಮಾಡುವುದರ ಬಗ್ಗೆ ಮನೆಯವರಿಗೆ ಮಾಹಿತಿ ಇರಲಿಲ್ಲ. ಆದರೆ, ಗೌಪ್ಯವಾಗಿ ಎಣ್ಣೆ ಹೊಡೆದ ಬಗ್ಗೆ ಅವರ ಅಪ್ಪನಿಗೆ ಹೇಳಿದ ವ್ಯಕ್ತಿಯನ್ನು ಕುಡಿದ ಮತ್ತಿನಲ್ಲಿಯೇ ಕೊಲೆ ಮಾಡಿದ ದುರ್ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

ಈಗ ಮದ್ಯಸೇವನೆ ಎನ್ನುವುದು ಯುವಕರಲ್ಲಿಯೂ ಸರ್ವೇ ಸಾಮಾನ್ಯವಾಗುತ್ತಿದೆ. ಆದರೆ, ಅದೆಷ್ಟೋ ಹುಡುಗರು ತಮ್ಮ ಸ್ವಂತ ಕಾಲ ಮೇಲೆ ನಿಲ್ಲುವವರೆಗೂ ಮನೆಯಲ್ಲಿ ಎಣ್ಣೆ ಹೊಡೆಯುವ ವಿಚಾರ ಗೊತ್ತಾಗದಂತೆ ಗೌಪ್ಯವಾಗಿ ಕಾಪಾಡಿಕೊಂಡಿರುತ್ತಾರೆ. ಇಲ್ಲೊಬ್ಬ ಯುವಕನೂ ಕೂಡ ತಾನು ಮದ್ಯ ಸೇವನೆ ಮಾಡುವ ವಿಚಾರ ಮನೆಯ ಸದಸ್ಯರಿಗೆ ಗೊತ್ತಾಗದಂತೆ ಗೌಪ್ಯವಾಗಿ ಇಟ್ಟುಕೊಂಡಿದ್ದನು. ಇನ್ನು ಮದ್ಯ ಸೇವನೆ ಮಾಡಿದರೂ ಮನೆಯಿಂದ ಹೊರಗಿದ್ದು, ಬೆಳಗ್ಗೆ ಮನೆಗೆ ಬರುತ್ತಿದ್ದನು. ಒಂದು ವೇಳೆ ಮನೆಗೆ ಬರುವಂತಿದ್ದರೂ ಮದ್ಯರಾತ್ರಿ ವೇಳೆ ಮನೆಗೆ ಬಂದು ಸುಮ್ಮನೆ ಮಲಗುತ್ತಿದ್ದನು. ಆದರೆ, ಇಲ್ಲಿ ಎಣ್ಣೆ ಹೊಡೆಯುವ ವಿಚಾರವನ್ನು ಮನೆಯಲ್ಲಿ ಹೇಳಿದ್ದಕ್ಕೆ ಕೋಪಗೊಂಡು ದೂರು ನೀಡಿದ ವ್ಯಕ್ತಿಯನ್ನೇ ಕೊಲೆ ಮಾಡಿದ್ದಾನೆ.

ಮೊಬೈಲ್‌ ಚಾರ್ಜರ್ ಶಾಕ್‌ ತಾಗಿ 8 ತಿಂಗಳ ಮಗು ಸಾವು

ಮನೆ ಉದ್ಘಾಟನೆಗೆ ಹೋಗಿ ಮದ್ಯ ಸೇವಿಸಿದ್ದರು: ಎಣ್ಣೆ ಕುಡಿದ ವಿಚಾರಕ್ಕೆ ಶುರುವಾದ ಕಿರಿಕ್ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಾಲೂಕಿನ ಚಿಕ್ಕಗೇಣಿಗೆರೆ ಗ್ರಾಮದಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿ ಪ್ರಕಾಶ್(38) ಆಗಿದ್ದಾನೆ. ಕೊಲೆ ಮಾಡಿದವರನ್ನು ಪುನೀತ್‌ ಮತ್ತು ಯಶ್ವಂತ ಎಂದು ಹೇಳಲಾಗುತ್ತಿದೆ. ಇನ್ನು ಕೊಲೆಯಾದ ವ್ಯಕ್ತಿ ಗಾರೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದನು. ಅದೇ ಗ್ರಾಮದ ಹರೀಶ ಎಂಬುವವರು ಹೊಸದಾಗಿ ಕಟ್ಟುತ್ತಿರುವ ಮನೆಗೆ ಮೋಲ್ಡ್ ಹಾಕಿಸಿದ್ದರಿಂದ ಪ್ರಕಾಶ್‌ನನ್ನು ಊಟಕ್ಕೆ ಕರೆದಿದ್ದರು. ಪ್ರಕಾಶ ಅವರ ಪತ್ನಿ ಪುಟ್ಟಲಕ್ಷ್ಮಿ, ಗಾರ್ಮೆಂಟ್ಸ್‌ನಲ್ಲಿ ಹೆಲ್ಪರ್ ಕೆಲಸಕ್ಕೆ ಹೋಗಿ ಸಂಜೆ 7 ಗಂಟೆಗೆ ಮನೆಗೆ ಬಂದಿದ್ದಾಳೆ. ಆಗ ಪ್ರಕಾಶ್ ಮನೆಯಲ್ಲಿ ಹಾಸಿಗೆ ಮೇಲೆ ಮಲಗಿದ್ದರು. ಆಗ, ಹಲ್ಲೆ ಮಾಡಿದ ಘಟನೆಯನ್ನು ತಿಳಿಸಿದ್ದಾನೆ. 

ಇಲ್ಲಿದ ನೋಡಿ ಹಲ್ಲೆಗೆ ಕಾರಣ: ಪುನೀತ್ ತಂದೆ ರಂಗಸ್ವಾಮಿ ಅವರು ಪ್ರಕಾಶ್‌ಗೆ ಫೋನ್‌ಮಾಡಿ ನನ್ನ ಮಗ ಪುನೀತ್ ನಿನ್ನ ಜೊತೆ ಎಣ್ಣೆ ಕುಡಿದ್ನಾ ಎಂದು ಕೇಳಿದ್ದಾರೆ. ಅದಕ್ಕೆ ಪ್ರಕಾಶ್ ಇಲ್ಲ ಎಂದಿದ್ದಾರೆ. ಸುಳ್ಳು ಹೇಳಬೇಡ, ನೀನು ಹೇಳಿದೆ ಎಂದು ಪುನೀತನಿಗೆ ಹೇಳುವುದಿಲ್ಲಾ ಹೇಳು ಎಂದು ಒತ್ತಾಯ ಮಾಡಿದಾಗ, ಪ್ರಕಾಶ ಹೌದು ನಾನು, ಪುನೀತ, ಯಶ್ವಂತ ಮೂರೂ ಜನ ಎಣ್ಣೆ ಕುಡಿದಿದ್ದಾಗಿ ಹೇಳಿದ್ದಾರೆ. ಇದೇ ಕಾರಣಕ್ಕೆ ಸಂಜೆ 6 ಗಂಟೆಯಲ್ಲಿ ಪುನೀತ ಮತ್ತು ಯಶ್ವಂತ ಇಬ್ಬರೂ ಪ್ರಕಾಶ್ ಮನೆಯ ಹತ್ತಿರ ಬಂದು ಮನೆಯ ಜಗುಲಿಯ ಮೇಲೆ ಕುಳಿತಿದ್ದ ಪ್ರಕಾಶ್‌ನೊಂದಿಗೆ ಜಗಳ ಆರಂಭಿಸಿದ್ದಾರೆ. 

ಮುಖಕ್ಕೆ ಡಿಚ್ಚಿ, ಗುನ್ನಾ ಕೊಟ್ಟ ಕುಡುಕರು: ಮುಂದುವರೆದು, ನಾವು ಕುಡಿದಿರುವ ವಿಚಾರವನ್ನು ನಮ್ಮ ಮನೆಯಲ್ಲಿ ನೀನೇ ಹೇಳಿದ್ದೀಯಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ನೀನು ಬದುಕಿದ್ದರೆ ತಾನೆ ಇನ್ನುಮುಂದೆ ದುರು ಹೇಳೋದು ನಿನ್ನನ್ನು ಸಾಯಿಸುತ್ತೇನೆ ಎಂದು ಏಕಾಏಕಿ ಪುನೀತ ಮತ್ತು ಯಶ್ವಂತ ಇಬ್ಬರೂ ಪ್ರಕಾಶನ ಮುಖಕ್ಕೆ ಮತ್ತು ಬಾಯಿಗೆ ಬಲವಾಗಿ ಗುದ್ದಿ, ತಲೆ ಹಿಡಿದು ಗೋಡೆಗೆ ಡಿಚ್ಚಿ ಹೊಡೆಸಿದ್ದಾರೆ. ಪ್ರಕಾಶ ಕೂಗಿಕೊಂಡಾಗ ಮನೆಯಲ್ಲಿದ್ದ ಪ್ರಕಾಶನ ತಾಯಿ ಹುಚ್ಚಮ್ಮ ಮತ್ತು ಅಲ್ಲೇ ಪಕ್ಕದ ಸೈಟಿನಲ್ಲಿ ಕೆಲಸ ಮಾಡುತ್ತಿದ್ದ ಅಣ್ಣ ಕೇಶವೇಗೌಡ ಮತ್ತು ಅತ್ತಿಗೆ ಸುಭದ್ರಾದೇವಿ ಓಡಿ ಬಂದಿದ್ದಾರೆ. ಆಗ ಪುನೀತ ಮತ್ತು ಯಶ್ವಂತ ಇಬ್ಬರೂ ಓಡಿ ಹೋಗಿದ್ದಾರೆ.

ಪತ್ನಿ ಹಾಗೂ ಪೋಷಕರ ಕಿರುಕುಳಕ್ಕೆ ಬೇಸತ್ತು ನವವಿವಾಹಿತ ಆತ್ಮಹತ್ಯೆಗೆ ಶರಣು!

ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರೂ ಫಲಿಸದ ಚಿಕಿತ್ಸೆ: ನಂತರ ಪ್ರಕಾಶನ ಬಾಯಲ್ಲಿ ರಕ್ತ ಬರುತ್ತಿದ್ದುದರಿಂದ ಆಟೋದಲ್ಲಿ ಹಾಸನದ ಸಂಜೀವಿನಿ ನಂತರ ಮಂಗಳಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಪ್ರಥಮ ಚಿಕಿತ್ಸೆ ಮಾಡಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ಅಲ್ಲಿಂದ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ಆದರೆ, ಬೆಂಗಳೂರಿಗೆ ಹೋಗಲಾಗದೆ ಜೀವಜ್ಯೋತಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಂಜೆ ಪ್ರಕಾಶ್ ಮೃತಪಟ್ಟಿದ್ದಾರೆ. ಇದಕ್ಕೆ ಕಾರಣರಾದ ಪುನೀತ ಮತ್ತು ಯಶ್ವಂತ ಅವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರು ದಾಖಲಿಸಲಾಗಿದೆ. ದೂರು ಆಧರಿಸಿ ಹಾಸನ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Follow Us:
Download App:
  • android
  • ios