*  ತಪ್ಪೊಪ್ಪಿಕೊಂಡು ರಾಜೀನಾಮೆ ನೀಡಿದ ಸಿದ್ದಪ್ಪ ಕಂಬಳಿ ಕಾನೂನು ಕಾಲೇಜಿನ ಡಾ. ಶೇಷಗಿರಿ*  ವಿದ್ಯಾರ್ಥಿನಿಯರ ವಾಟ್ಸ್‌ಆ್ಯಪ್‌ಗೆ ನೈಸ್‌, ಸೂಪರ್‌ ಎಂದೆಲ್ಲ ಕಮೆಂಟ್‌ ಮಾಡುತ್ತಿದ್ದ ಅತಿಥಿ ಉಪನ್ಯಾಸಕ*  ವಿದ್ಯಾರ್ಥಿನಿಯರು ಸಂಘಟನೆಗಳ ಮೊರೆ ಹೋಗಿರುವುದು ಪ್ರಾಚಾರ್ಯರಿಗೆ ಅಸಮಾಧಾನ ತಂದಂತಿದೆ 

ಧಾರವಾಡ(ಜೂ.29): ಸರ್‌ ಸಿದ್ದಪ್ಪ ಕಂಬಳಿ ಕಾನೂನು ಕಾಲೇಜಿನ ಅರ್ಥಶಾಸ್ತ್ರ ವಿಷಯದ ಅತಿಥಿ ಉಪನ್ಯಾಸಕ ಡಾ. ಶೇಷಗಿರಿ ವಿದ್ಯಾರ್ಥಿನಿಯರ ಮೊಬೈಲ್‌ಗೆ ವಾಟ್ಸ್‌ಆ್ಯಪ್‌ ಮೂಲಕ ಅಸಭ್ಯ ಸಂದೇಶಗಳನ್ನು ಕಳುಹಿಸಿದ ಪರಿಣಾಮ ಬಹಿರಂಗವಾಗಿ ತಪ್ಪೊಪ್ಪಿಕೊಂಡು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

Add Asianetnews Kannada as a Preferred SourcegooglePreferred

ವಿದ್ಯಾರ್ಥಿನಿಯರ ವಾಟ್ಸ್‌ಆ್ಯಪ್‌ ಸ್ಟೇಟಸ್‌ಗೆ ಆರಂಭದಲ್ಲಿ ನೈಸ್‌, ಸೂಪರ್‌ ಎಂದೆಲ್ಲ ಕಮೆಂಟ್‌ ಮಾಡುತ್ತಿದ್ದ ಶೇಷಗಿರಿ, ಬಳಿಕ ತೀರಾ ಅತಿರೇಕದ ಮೆಸೇಜ್‌ಗಳನ್ನು ಕಳುಹಿಸಿದ್ದಾನೆ. ಇದರಿಂದ ರೋಸಿ ಹೋದ ವಿದ್ಯಾರ್ಥಿನಿಯರು ಈ ಸಂಗತಿಯನ್ನು ಕರ್ನಾಟಕ ರಾಜ್ಯ ಕಾನೂನು ವಿದ್ಯಾರ್ಥಿಗಳ ಸಂಘಟನೆ ಗಮನಕ್ಕೆ ತಂದಿದ್ದಾರೆ. ಸಂಘಟನೆಯವರು ವಿಷಯ ತಿಳಿದು ಕಾಲೇಜಿಗೆ ಹೋಗಿ ಈ ಬಗ್ಗೆ ಕೇಳುತ್ತಿದ್ದಂತೆಯೇ ಶೇಷಗಿರಿ ತನ್ನ ತಪ್ಪು ಒಪ್ಪಿಕೊಂಡಿದ್ದಾನೆ. ಜತೆಗೆ ತನ್ನ ಕೆಲಸಕ್ಕೆ ರಾಜೀನಾಮೆ ಕೊಟ್ಟಿದ್ದಾನೆ.

Hubli Crime News: ಕಾರ್ಪೋರೆಟರ್ ಹತ್ಯೆಗೆ ಪತಿಯಿಂದಲೇ ಯತ್ನ: ದೂರು ದಾಖಲು

ಈ ಸಂಗತಿ ಕಾಲೇಜು ಪ್ರಾಚಾರ್ಯರ ಗಮನಕ್ಕಿಲ್ಲ. ಆದರೆ, ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪ್ರಾಚಾರ್ಯ ಡಾ. ಶರತ್‌ ಬಾಬು, ಶೇಷಗಿರಿ ಹಲವು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಅವರ ವಾಟ್ಸ್‌ಆ್ಯಪ್‌ ಸಂದೇಶಕ್ಕೆ ಸಂಬಂ​ಧಿಸಿದಂತೆ ಈ ವರೆಗೂ ತಮಗೆ ದೂರು ಬಂದಿಲ್ಲ ಎನ್ನುತ್ತಾರೆ. ತಮ್ಮ ಬಳಿ ದೂರನ್ನು ಹೇಳಿಕೊಳ್ಳಬೇಕಿದ್ದ ವಿದ್ಯಾರ್ಥಿನಿಯರು ನೇರವಾಗಿ ಸಂಘಟನೆಗಳ ಮೊರೆ ಹೋಗಿರುವುದು ಸಹ ಪ್ರಾಚಾರ್ಯರಿಗೆ ಅಸಮಾಧಾನ ತಂದಂತಿದೆ.