ಮೋಸ ಹೋದ ಮಹಿಳೆ ಬೆಂಡಿಗೇರಿ ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಕುರಿತು ಬೆಂಡಿಗೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರೆದಿದೆ.

ಹುಬ್ಬಳ್ಳಿ(ಫೆ.10): ಮಾಟ ಮಂತ್ರದ ನೆಪವೊಡ್ಡಿ ಆಗಂತುಕನೊಬ್ಬ ಚಿನ್ನಾಭರಣ ಎಗರಿಸಿಕೊಂಡು ಹೋದ ಘಟನೆ ಇಲ್ಲಿಯ ಮಿಲ್ಲತನಗರದಲ್ಲಿ ನಡೆದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಹಿಳೆಯೊಬ್ಬರನ್ನು ಭೇಟಿ ಮಾಡಿದ ಅಪರಿಚಿತನೊಬ್ಬ ನಿಮ್ಮ ಮನೆಗೆ ಮಾಟಮಂತ್ರ ಮಾಡಿಸಿದ್ದಾರೆ. ನಿಮಗೆ ದೊಡ್ಡ ತೊಂದರೆ ತಪ್ಪಿದ್ದಲ್ಲ ಎಂದು ಹೆದರಿಸಿದ್ದಾನೆ. ಒಟ್ಟು ₹ 1.65 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಮಹಿಳೆಯ ಮಗಳ ಕೊರಳಲ್ಲಿ ಇದ್ದುದ್ದನ್ನು ತೆಗೆಯಿಸಿ ಚಿಕ್ಕ ಮಣ್ಣಿನ ಗಡಿಗೆಗೆ ಹಾಕಿಸಿದ್ದಾನೆ. ಇನ್ನೊಂದು ಗಡಿಗೆಯಲ್ಲಿ ಲಿಂಬೆಹಣ್ಣು, ಸಣ್ಣ ಕಲ್ಲು ಹಾಕಿ ಹಸಿರು ಬಟ್ಟೆ ಸುತ್ತಿದ್ದನ್ನು ಕೊಟ್ಟಿದ್ದಾನೆ. 

ಏಕಾಂಗಿ ಜೀವನ ನಡೆಸುತ್ತಿದ್ದ ವೃದ್ಧೆ; ಆಸ್ತಿ ವಿಚಾರಕ್ಕೆ ದುಷ್ಕರ್ಮಿಗಳಿಂದ ಹತ್ಯೆ!

ಚಿನ್ನಾಭರಣವಿದ್ದ ಗಡಿಗೆ ತೆಗೆದುಕೊಂಡು ಹೋಗಿದ್ದಾನೆ ಎಂದು ಮಹಿಳೆಯು ಬೆಂಡಿಗೇರಿ ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಕುರಿತು ಬೆಂಡಿಗೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರೆದಿದೆ.