Asianet Suvarna News Asianet Suvarna News

Gadag Bike Accident: ಕೊಪ್ಪಳ ಜಾತ್ರೆ ಮುಗಿಸಿ ಮನೆಗೆ ಹೊರಟವರು ಮಸಣ ಸೇರಿದರು

ಕೊಪ್ಪಳದ ಜಾತ್ರೆಯನ್ನು ಮುಗಿಸಿ ಸಂಬಂಧಿಕರ ಮನೆಗೆ ಹೊರಟಿದ್ದವರ ಬೈಕ್‌ ಅಪಘಾತವುಂಟಾಗಿ ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಳ್ಳಿಗುಡಿ ಗ್ರಾಮದ ಬಳಿ‌ ಘಟನೆ ನಡೆದಿದೆ. 

Gadag Bike Accident Those who went home after the Koppal fair joined mortuary sat
Author
First Published Jan 8, 2023, 9:14 PM IST | Last Updated Jan 8, 2023, 9:14 PM IST

ಗದಗ (ಜ.08):  ಕೊಪ್ಪಳದ ಜಾತ್ರೆಯನ್ನು ಮುಗಿಸಿ ಸಂಬಂಧಿಕರ ಮನೆಗೆ ಹೊರಟಿದ್ದವರ ಬೈಕ್‌ ಅಪಘಾತವುಂಟಾಗಿ ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಳ್ಳಿಗುಡಿ ಗ್ರಾಮದ ಬಳಿ‌ ಘಟನೆ ನಡೆದಿದೆ.  

ನಾಡಿನ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾಗಿರುವ ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಗೆ ತೆರಳಿದ್ದವರು ಸಂಜೆ ವೇಳೆ ಗದಗಿನ ಕಣಗಿನಹಾಳದಲ್ಲಿದ್ದ ಸಂಬಂಧಿಕರ ಮನೆಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಆದರೆ, ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಳ್ಳಿಗುಡಿ ಗ್ರಾಮದ ಬಳಿ ಬೈಕ್‌ಗಳ ನಡುವೆ ಡಿಕ್ಕಿಯಾಗಿದೆ. ಈ ವೇಳೆ ಬೈಕ್‌ನಿಂದ ಕೆಳಗೆ ಬಿದ್ದವರ ಮೇಲೆ ಹಿಂದೆ ವೇಗವಾಗಿ ಬರುತ್ತಿದ್ದ ಲಾರಿ ಹರಿದಿದೆ. ಲಾರಿ ಹರಿದ ರಭಸಕ್ಕೆ ಇಬ್ಬರ ದೇಹಗಳು ಚಿತ್ರಗೊಂಡಿದ್ದು, ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ. ಇನ್ನು ಅಪಘಾತ ಮಾಡಿದ ಲಾರಿ ಚಾಲಕ ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿ ಆಗಿದ್ದಾನೆ.

Gadag: ಅನ್ನದಾತ ಬಾಳಲ್ಲಿ ಬಂಗಾರವಾಗಬೇಕಿದ್ದ ಬಾಳೆ ಬೆಂಕಿಗಾಹುತಿ!

ಅಲ್ಲಾ ಸಾಬ್ ನದಾಫ್ (62) ರಮಜಾನ್ ಬೇಗಂ (14) ಮೃತ ದುರ್ದೈವಿಗಳು. ಇವರು ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿಯಿಂದ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಗೆ ಹೋಗಿದ್ದರು. ಅಲ್ಲಿಂದ ಗದಗ ಜಿಲ್ಲೆಯ ಕಣಗಿನಹಾಳದ ಸಂಬಂಧಿಕರ ಮನೆಗೆ ಹೊರಟಿದ್ದರು. ಆದರೆ ಅಪಫಾತದಿಂದ ಮನೆಗೆ ಸೇರಬೇಕಿದ್ದವರು ಮಸಣ ಸೇರುವಂತಾಗಿದೆ. ಇನ್ನು ಘಟನೆಯಲ್ಲಿ ಮತ್ತೊಂದು ಬೈಕ್‌ನಲ್ಲಿ ಹೋಗುತ್ತಿದ್ದ ಲಲಿತಾ ಹಂಚಿನಾಳ, ಅಪ್ಪಣ್ಣ ಹಿರೇಮಠ ಅವರೂ ಬೈಕ್‌ನಿಂದ ರಸ್ತೆಯ ಅಂಚಿನ ಕಡೆಗೆ ಬಿದ್ದಿದ್ದು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಡರಗಿ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

Latest Videos
Follow Us:
Download App:
  • android
  • ios