*   ಬಸ್‌ ಚಾಲಕನಿಂದ ಕೃತ್ಯ*   ಆತನ ಬ್ಯಾಂಕ್‌ ಖಾತೆಯಲ್ಲಿ 2.5 ಕೋಟಿ ಪತ್ತೆ*   ವಂಚಿಸುವುದನ್ನೇ ಉದ್ಯೋಗ ಮಾಡಿಕೊಂಡ ಅರೋಪಿ ಮಂಜುನಾಥ್‌ 

ಬೆಂಗಳೂರು(ಅ.17): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಸಂಚಾರಿ ನಿರೀಕ್ಷರ ಹುದ್ದೆ ಕೊಡಿಸುವುದಾಗಿ ನಂಬಿಸಿ ನೂರಾರು ಮಂದಿ​ಯಿಂದ ಕೋಟ್ಯಂತರ ರುಪಾಯಿ ಪಡೆದು ವಂಚಿ​ಸಿರುವ(Fraud) ಆರೋಪದಡಿ ಕೆಎ​ಸ್‌​ಆ​ರ್‌​ಟಿಸಿ(KSRTC) ಚಾಲಕ ಸೇರಿ ಇಬ್ಬರು ಆರೋ​ಪಿ​ಗ​ಳನ್ನು ಮಾಗಡಿ ರಸ್ತೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಳ್ಳಾರಿಯ(Ballari) ಹಗರಿಬೊಮ್ಮನಹಳ್ಳಿ ಮೂಲ​ದ ಮಂಜುನಾಥ್‌ ಬಿಲ್ಲಾ ನಾಯ​ಕ್‌ (45) ಹಾಗೂ ಆತನ ಸ್ನೇಹಿತ ಅನಿಲ್‌ (41) ಬಂಧಿತರು(Arrest). ಆರೋ​ಪಿ​ಗಳು(Accused) ಸುಮಾರು ನೂರಕ್ಕೂ ಅಧಿಕ ಮಂದಿಯಿಂದ ಕೋಟ್ಯಂತರ ರುಪಾಯಿ ಪಡೆದು ವಂಚಿಸಿದ್ದಾರೆ ಎನ್ನಲಾಗಿದೆ. ಆರೋಪಿಗಳ ಖಾತೆಯಲ್ಲಿದ್ದ ಸುಮಾರು 2.5 ಕೋಟಿ ಇರು​ವುದು ಪತ್ತೆ​ಯಾ​ಗಿದೆ ಎಂದು ಪೊಲೀಸರು(Police) ಹೇಳಿದ್ದಾರೆ.

ಶಂಕರ್ ಬಿದರಿಗೆ ಸೈಬರ್ ವಂಚಕರ ಗಾಳ.. 89 ಸಾವಿರ ಕಳಕೊಂಡ ನಿವೃತ್ತ ಅಧಿಕಾರಿ

ಆರೋಪಿ ಮಂಜು​ನಾಥ್‌ ಬಿಲ್ಲಾ ನಾಯಕ್‌ ಕೆಎಸ್‌ಆ​ರ್‌​ಟಿಸಿ ಚಾಲ​ಕ​ನಾ​ಗಿದ್ದು(Driver), ತನ್ನ ಸ್ನೇಹಿ​ತರನ್ನು ಮಧ್ಯ​ವ​ರ್ತಿ​ಗ​ಳ​ನ್ನಾಗಿ ಮಾಡಿ​ಕೊಂಡು ದಂಧೆ ನಡೆ​ಸು​ತ್ತಿದ್ದ. ಇತ್ತೀ​ಚೆಗೆ ಬಾಗ​ಲ​ಕೋಟೆ(Bagalkot) ಜಿಲ್ಲೆಯ ವಿ.ಎ​ಸ್‌.​ಅ​ರ​ಗಿ​ಶೆಟ್ಟಿ ಎಂಬ​ವ​ರಿಗೆ ಟ್ರಾಫಿಕ್‌ ಇನ್‌​ಸ್ಪೆ​ಕ್ಟರ್‌(Traffic Ipector) ಹುದ್ದೆ ಕೊಡಿ​ಸು​ವು​ದಾಗಿ 11 ಲಕ್ಷ ಪಡೆದು ವಂಚಿ​ಸಿ​ದ್ದರು. ಈ ಸಂಬಂಧ ಅರಗಿಶೆಟ್ಟಿ ಎಂಬುವರು ಕೊಟ್ಟ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ.

ಮಂಜುನಾಥ್‌ ವಂಚಿಸುವುದನ್ನೇ ಉದ್ಯೋಗ(Job) ಮಾಡಿಕೊಂಡಿದ್ದಾನೆ. ಅದ​ಕ್ಕಾಗಿ ಕಾರೊಂದನ್ನು ಖರೀದಿಸಿ ಅದಕ್ಕೆ ಕರ್ನಾಟಕ ಸರ್ಕಾ​ರದ(Government Of Karnataka) ನಾಮ​ಫ​ಲಕ ಹಾಕಿ​ಕೊಂಡು ಉತ್ತರ ಕರ್ನಾ​ಟ​ಕ​ದಲ್ಲಿ(North Karnataka) ತನ್ನ ಸ್ನೇಹಿ​ತ​ರ ಜತೆ ಸುತ್ತಾ​ಡು​ತ್ತಿ​ದ್ದ. ಈ ವೇಳೆ ಮತ್ತು ಕರ್ತ​ವ್ಯದ ವೇಳೆ​ಯಲ್ಲಿ ಪರಿ​ಚ​ಯ​ವಾ​ಗುವ ಸಾರ್ವ​ಜ​ನಿ​ಕ​ರನ್ನು ಗುರಿ​ಯಾ​ಗಿ​ಸಿ​ಕೊಂಡು ಕೆಎಸ್‌ಆರ್‌ಟಿಸಿಯಲ್ಲಿ ಟ್ರಾಫಿಕ್‌ ಇನ್‌ಸ್ಪೆಕ್ಟರ್‌ ಉದ್ಯೋಗ ಕೊಡಿಸುವುದಾಗಿ ನಂಬಿಸುತ್ತಿದ್ದ. ಬಳಿಕ ಅವರಿಂದ ಹಣ ವಸೂಲಿ ಮಾಡಿಕೊಂಡು ನಾಪತ್ತೆಯಾಗುತ್ತಿದ್ದ. ಬಂದ ಹಣದಲ್ಲಿ ಮೋಜು ಮಾಡುತ್ತಿದ್ದ. ಬಂದ ಹಣದಲ್ಲಿ ಮಧ್ಯವರ್ತಿಯಾಗಿದ್ದ(Mediator) ಅನಿಲ್‌ಗೆ ಇಂತಿಷ್ಟು ಎಂದು ಹಣ ನೀಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.