ಹನಿಟ್ರ್ಯಾಪ್ ಮಾಡಿ 50-60 ಮಂದಿಗೆ ವಂಚಿಸಿದ್ದ ಮಾಜಿ ಶಿಕ್ಷಕಿ ಬಲೆಗೆ
ಮೋಸ ಹೋಗಬೇಡಿ | ಮ್ಯಾಟ್ರಿಮೋನಿಯಲ್ನಲ್ಲಿ ಪರಿಚಯಿಸಿಕೊಂಡು ಕೃತ್ಯ | ಹಣ ನೀಡಲು ಒಪ್ಪದಿದ್ದರೆ ಅತ್ಯಾಚಾರ ಕೇಸ್ ಹಾಕಿ ಬೆದರಿಕೆ
ಬೆಂಗಳೂರು(ಝ.05): ಹನಿಟ್ರ್ಯಾಪ್ ಮೂಲಕ ಶ್ರೀಮಂತ ವ್ಯಕ್ತಿಗಳಿಂದ ಲಕ್ಷಾಂತರ ರುಪಾಯಿ ಸುಲಿಗೆ ಮಾಡುತ್ತಿದ್ದ ಮಾಜಿ ಶಿಕ್ಷಕಿಯೊಬ್ಬಳು ಇಂದಿರಾನಗರ ಠಾಣೆ ಪೊಲೀಸರು ಬಲೆಗೆ ಬಿದ್ದಿದ್ದಾಳೆ.
ದೇವಯ್ಯಪಾರ್ಕ್ ನಿವಾಸಿ ಕವಿತಾ(38) ಬಂಧಿತೆ. ಪ್ರೇಮ್ ಡ್ಯಾನಿಯಲ್ ಎಂಬುವರು ಕೊಟ್ಟದೂರಿನ ಮೇರೆಗೆ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
2ನೇ ಹೆಂಡತಿಯೊಂದಿಗೆ ಸಂಬಂಧ, ಪಕ್ಕದ ಮನೆಯವನ ಶಿಶ್ನವನ್ನೇ ಕತ್ತರಿಸಿದ!
ಕವಿತಾ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಳು. ಅಲ್ಲಿನ ಮುಖ್ಯಶಿಕ್ಷಕರ ಮೇಲೆ ಹಲ್ಲೆ ನಡೆಸಿದ ಆರೋಪದಡಿಯಲ್ಲಿ ಈಕೆಯ ವಿರುದ್ಧ ಲಿಂಗದಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಲ್ಲದೆ, ಸರಿಯಾಗಿ ಕೆಲಸಕ್ಕೆ ಹಾಜರಾಗದಿರುವುದು, ಮೌಲ್ಯಮಾಪನಕ್ಕೆ ಹೋಗದೆ ನಿರ್ಲಕ್ಷ್ಯ ಮಾಡಿದ ಆರೋಪದಡಿಯಲ್ಲಿ ಈಕೆಯನ್ನು 2009ರಲ್ಲಿ ಕೆಲಸದಿಂದ ವಜಾ ಮಾಡಲಾಗಿದೆ. ಇದಾದ ಬಳಿಕ ಆರೋಪಿ ನಗರಕ್ಕೆ ಬಂದು ನೆಲೆಸಿದ್ದಳು.
ವಿವಾಹವಾಗುವ ನೆಪದಲ್ಲಿ ಹನಿಟ್ರ್ಯಾಪ್: ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಪ್ರೇಮ್ ಡ್ಯಾನಿಯಲ್ ‘ಜೀವನ್ ಸಾಥಿ.ಕಾಂ’ನಲ್ಲಿ ತಮ್ಮ ವೈಯಕ್ತಿಕ ವಿವರ ಹಾಕಿದ್ದರು. ತನ್ನ ವಿವರನ್ನು ಕೂಡ ಹಾಕಿದ್ದ ಕವಿತಾ, ಪ್ರೇಮ್ ಸ್ವವಿವರ ನೋಡಿ ವಿವಾಹವಾಗುವ ಬಗ್ಗೆ ಪ್ರಸ್ತಾಪ ಮಾಡಿದ್ದಳು.
ವೈಟ್ ಕಾರ್ ಎಡವಟ್ಟು.. ಸಿಗ್ನಲ್ ಕೊಟ್ಟರೂ ನಿಲ್ಲಿಸಲಿಲ್ಲ.. ವಿದ್ಯಾರ್ಥಿ ಮೇಲೆ ಗುಂಡಿನ ಮಳೆ!
ಡಿ.26ರಂದು ಪ್ರೇಮ್ಗೆ ಕರೆ ಮಾಡಿದ್ದ ಕವಿತಾ, ಬಳಿಕ ಮನೆಗೆ ಹೋಗಿದ್ದಾಳೆ. ಪ್ರೇಮ್ ಜತೆ ಸಲುಗೆಯಿಂದ ನಡೆದುಕೊಂಡಿದ್ದಳು. ಆ ದೃಶ್ಯವನ್ನು ಇಬ್ಬರು ಲ್ಯಾಪ್ಟಾಪ್ ಮೂಲಕ ಸೆರೆಹಿಡಿದು ಕೊಂಡಿದ್ದರು. ನಂತರ ತಡರಾತ್ರಿ 12.30ರ ಸುಮಾರಿಗೆ ಏಕಾಏಕಿ ಆರೋಪಿ, ಪ್ರೇಮ್ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಹಾಗೂ ಮನೆಯಲ್ಲಿದ್ದ ಹಣ ಕೊಡುವಂತೆ ಒತ್ತಾಯಿಸಿದ್ದಾಳೆ. ಪ್ರೇಮ್ ನಿರಾಕರಿಸಿದ್ದು, ಇಬ್ಬರ ನಡುವೆ ವಾಗ್ವಾದ ನಡೆದಿದೆ. ಅದರಿಂದ ಆಕ್ರೋಶಗೊಂಡ ಕವಿತಾ, ಹಣ, ಚಿನ್ನದ ಸರ ಕೊಡದಿದ್ದರೆ ಅತ್ಯಾಚಾರ ಆರೋಪದಡಿ ಪ್ರಕರಣ ದಾಖಲಿಸುವುದಾಗಿ ಹೇಳಿ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರೇಮ್ ವಿರುದ್ಧ ದೂರು ನೀಡಿದ್ದಳು.
ಬಯಲಾದ ಸತ್ಯ:
ವಿಚಾರಣೆಗೆ ಬಂದ ಪ್ರೇಮ್, ನಡೆದ ಘಟನೆಯನ್ನು ವಿವರಿದ್ದರು. ಲ್ಯಾಪ್ಟಾಪ್ನಲ್ಲಿದ್ದ ವಿಡಿಯೋವನ್ನು ತೋರಿಸಿ ಕವಿತಾ, .5 ಲಕ್ಷ ಕೊಡಬೇಕು. ಇಲ್ಲವಾದರೆ ಅತ್ಯಾಚಾರ ಆರೋಪದಡಿ ದೂರು ನೀಡುತ್ತೇನೆ ಎಂದು ಬೆದರಿಕೆ ಹಾಕಿದ್ದಳು. ಹೀಗಾಗಿ ಎರಡು ಲಕ್ಷ ಕೊಟ್ಟಿದ್ದೆ. ಆದರೂ ಆಕೆ ಮತ್ತೊಮ್ಮೆ ಹಣಕ್ಕೆ ಬೇಡಿಕೆ ಇಟ್ಟಿದ್ದಳು. ಕೊಡದಿದ್ದಾಗ ಅತ್ಯಾಚಾರದ ದೂರು ನೀಡಿದ್ದಾಳೆ ಎಂದು ಆರೋಪಿ ಪ್ರೇಮ್ ವಿಚಾರಣೆಯಲ್ಲಿ ಹೇಳಿಕೆ ನೀಡಿದ್ದರು. ಅಲ್ಲದೆ, ಕವಿತಾ ವಿರುದ್ಧ ಪ್ರತ್ಯೇಕವಾಗಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಆಕೆಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.
50-60 ಮಂದಿಗೆ ವಂಚನೆ?
ಹನಿಟ್ರ್ಯಾಪ್ ಮಾಡುವುದನ್ನೇ ಆರೋಪಿ ವೃತ್ತಿಯನ್ನಾಗಿಸಿಕೊಂಡಿದ್ದಳು. ಮ್ಯಾಟ್ರಿಮೋನಿಯಲ್ನಲ್ಲಿ ಪರಿಚಯವಾಗುವ ಶ್ರೀಮಂತ ವ್ಯಕ್ತಿಗಳನ್ನು ಸಂಪರ್ಕಿಸುವ ಆರೋಪಿ, ಅವರೊಂದಿಗೆ ಸಲುಗೆಯಿಂದ ಇರುತ್ತಿದ್ದಳು. ಆ ವಿಡಿಯೋವನ್ನು ತೆಗೆದುಕೊಂಡು ಹಣ ನೀಡುವಂತೆ ಒತ್ತಾಯಿಸುತ್ತಿದ್ದಳು. ಹಣ ನೀಡದಿದ್ದರೆ ಅತ್ಯಾಚಾರ ಆರೋಪದಡಿ ಪ್ರಕರಣ ದಾಖಲಿಸುವುದಾಗಿ ಲಕ್ಷಾಂತರ ರುಪಾಯಿ ವಸೂಲಿ ಮಾಡುತ್ತಿದ್ದಳು. ಈ ಹಿಂದೆ ಮಲ್ಲೇಶ್ವರಂ ಮತ್ತು ಮಹದೇವಪುರ ಠಾಣೆಯಲ್ಲಿ ಹಣ ನೀಡದವರ ವಿರುದ್ಧ ಅತ್ಯಾಚಾರ ದೂರು ನೀಡಿದ್ದಾಳೆ. ಸುಮಾರು 50-60 ಮಂದಿಗೆ ಹನಿಟ್ರ್ಯಾಪ್ ಮೂಲಕ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.