ಮನೆಯ ಮುಂದೆ ಬಿಟ್ಟಿದ್ದ ಬೈಕ್‌ಗೆ ಬೆಂಕಿ ಇಟ್ಟ ದುಷ್ಕರ್ಮಿಗಳು| ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ನಡೆದ ಘಟನೆ| ಮನೆಯ ಹೊರಗೆ ಬೈಕ್‌, ಕಾರು ಬಿಡಲು ಭಯ ಪಡುತ್ತಿರುವ ಜನತೆ| ಈ ಸಂಬಂಧ ಗಂಗಾವತಿ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು| 

ಗಂಗಾವತಿ(ಮಾ.08): ನಗರದ ಪಂಪಾನಗರ 1ನೇ ವಾರ್ಡ್‌ನಲ್ಲಿ ಮನೆಯ ಮುಂದೆ ಬಿಟ್ಟಿದ್ದ ಬೈಕ್‌ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಪರಾರಿಯಾದ ಘಟನೆ ಶನಿವಾರ ಮಧ್ಯರಾತ್ರಿ ನಡೆದಿದೆ. 

Add Asianetnews Kannada as a Preferred SourcegooglePreferred

ಪಾಂಡುರಂಗ ದೇವಸ್ಥಾನದ ಹಿಂಭಾಗದಲ್ಲಿ ಗ್ರಾಮಶಕ್ತಿ ಬ್ಯಾಂಕ್‌ ನೌಕರ ಮಹ್ಮದ್‌ ರಫಿ ಎಂಬವರ ಬೈಕ್‌ಗೆ ಬೆಂಕಿ ಹಚ್ಚಲಾಗಿದೆ. ಬೆಂಕಿ ನೋಡಿ ಗಾಬರಿಯಾದ ಜನರು ನಂದಿಸಲು ಹೋಗುವಷ್ಟರಲ್ಲಿ ಕರಕಲಾಗಿದೆ. ಇತ್ತೀಚೆಗೆ ಬೈಕ್‌ಗಳಲ್ಲಿ ಪೆಟ್ರೋಲ್‌ ಕಳ್ಳತನ ಅಲ್ಲದೆ ಕಳೆದ ವರ್ಷ ಬಸವಣ್ಣ ವೃತ್ತದ ಮನೆಯೊಂದರ ಹೊರಗೆ ನಿಲ್ಲಿಸಿದ್ದ ಬೈಕ್‌ಗೆ ಬೆಂಕಿ ಹಚ್ಚಿದ ಉದಾಹರಣೆ ಇದೆ.

ರೌಡಿಶೀಟರ್ ಕಿರಣ್ ಮೇಲೆ ಫೈರಿಂಗ್, ಇದೀಗ ಪೊಲೀಸ್ ವಶಕ್ಕೆ

ಈಗ ನಗರದಲ್ಲಿ ಜನರು ಮನೆಯ ಹೊರಗೆ ಬೈಕ್‌, ಕಾರು ಬಿಡಲು ಭಯ ಉಂಟಾಗಿದ್ದು, ಪೊಲೀಸರು ನಿಗಾ ವಹಿಸಬೇಕಿದೆ ಎಂದು ನಾಗರಿಕರು ಒತ್ತಾಯಿಸಿದ್ದಾರೆ. ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.