Asianet Suvarna News Asianet Suvarna News

ಆರ್‌ಆರ್‌ ನಗರದ ರಾಜರಾಜೇಶ್ವರಿ ದೇವಾಲಯದ ಬಳಿ ಅಗ್ನಿ ಅವಘಡ, ಕಾರಣ ನಿಗೂಢ

ರಾಜರಾಜೇಶ್ವರಿ ದೇವಾಲಯದ ಬಳಿ ಅಗ್ನಿ ಅವಘಡ| ಪಕ್ಕದ ನಿರ್ಮಾಣ ಹಂತದಲ್ಲಿದ್ದ ಧ್ಯಾನ ಮಂದಿರದಲ್ಲಿ ಕಾಣಿಸಿಕೊಂಡ ಬೆಂಕಿ| ಕೆಲ ಕಾಲ ಆತಂಕದ ವಾತಾವರಣ

Fire accident at near rajarajeshwari temple RR Nagar Bengaluru
Author
Bengaluru, First Published Jan 5, 2020, 11:55 PM IST

ಬೆಂಗಳೂರು(ಜ. 05) ಬೆಂಗಳೂರಿನ ರಾಜರಾಜೇಶ್ವರಿ ನಗರದ  ರಾಜರಾಜೇಶ್ವರಿ ದೇವಾಲಯ ಪಕ್ಕದಲ್ಲೇ ಅಗ್ನಿ ಅವಘಡ ಸಂಭವಿಸಿದ್ದು ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ನೂತನವಾಗಿ ನಿರ್ಮಾಣ ಆಗುತ್ತಿದ್ದ ಧ್ಯಾನ ಮಂದಿರದಲ್ಲಿ ಕಾಣಿಸಿಕೊಂಡ ಬೆಂಕಿ ಕಾಣಿಸಿಕೊಂಡಿತ್ತು. ರಾಜರಾಜೇಶ್ವರಿ ದೇವಾಲಯ ಪಕ್ಕದಲ್ಲಿ ನಿರ್ಮಾಣ ಆಗುತ್ತಿದ್ದ ಕಟ್ಟಡದಲ್ಲಿ ಅಗ್ನಿ ಕಾಣಿಸಿಕೊಂಡು ಆತಂಕ ಹೆಚ್ಚಿಸಿತ್ತು.

ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತಂದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.

ಒಂದು ಹಂತದಲ್ಲಿ ರಾಜರಾಜೇಶ್ವರಿ ದೇವಾಲಯದಲ್ಲಿಯೇ ಅಗ್ನಿ ಅವಘಡ ಸಂಭವಿಸಿದೆ ಎಂಬ ವರದಿಯಾಗಿತ್ತು. ನಂತರ ಪಕ್ಕದ ಧ್ಯಾನಮಂದಿರ ಎಂಬುದು ಗೊತ್ತಾಗಿದೆ.

Follow Us:
Download App:
  • android
  • ios