Asianet Suvarna News Asianet Suvarna News

ಧಾರವಾಡ: ಸಾಲ​ಬಾಧೆ ತಾಳದೆ ರೈತ ಆತ್ಮ​ಹ​ತ್ಯೆ

4 ಎಕರೆ ಜಮೀನಿನಲ್ಲಿ ಮುಂಗಾರು ಬೆಳೆ ಬರದೇ ನಷ್ಟ ಅನುಭವಿಸಿದ್ದ ರೈತ| ಮನೆಯಲ್ಲಿ ನೇಣಿಗೆ ಶರಣಾದ ರೈತ| ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮದಲ್ಲಿ ನಡೆದ ಘಟನೆ| ಈ ಸಂಬಂಧ ಗರಗ ಠಾಣೆಯಲ್ಲಿ ಪ್ರಕರಣ ದಾಖಲು| 

Farmer Committed Suicide in Dharwad grg
Author
Bengaluru, First Published Dec 28, 2020, 3:21 PM IST

ಧಾರವಾಡ(ಡಿ.28): ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮದ ವಿರಕ್ತಮಠದ ಓಣಿಯ ರೈತ ಜಗದೀಶ ಈರಯ್ಯ ಇಂಚಗೇರಿಮಠ (39) ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ತನ್ನ ಪಾಲಿಗೆ ಬಂದ 4 ಎಕರೆ ಜಮೀನಿನಲ್ಲಿ ಮುಂಗಾರು ಬೆಳೆ ಬರದೇ ನಷ್ಟ ಅನುಭವಿಸಿದ್ದ ಈರಯ್ಯ ಭಾನುವಾರ ನಸುಕಿನಲ್ಲಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. 

ಹಗರಿಬೊಮ್ಮನಹಳ್ಳಿ: ಗ್ರಾಮ ಪಂಚಾ​ಯಿತಿ ಅಭ್ಯ​ರ್ಥಿ ಆತ್ಮ​ಹ​ತ್ಯೆ

ಈರಯ್ಯ ಹೆಸರಿನಲ್ಲಿ 5 ಲಕ್ಷ ಗಳವರೆಗೆ ಸಾಲವಿದೆ ಎಂದು ತಿಳಿದು ಬಂದಿದೆ. ಈ ಸಂಬಂಧ ಗರಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Follow Us:
Download App:
  • android
  • ios