Asianet Suvarna News Asianet Suvarna News

ಸಾಲಪಾವತಿಗೆ ಬ್ಯಾಂಕ್‌ ನೋಟಿಸ್‌: ರೈತ ಆತ್ಮಹತ್ಯೆಗೆ ಶರಣು

*  ಗದಗ ಜಿಲ್ಲೆಯ ರೋಣ ತಾಲೂಕಿನ ಅರಹುಣಸಿ ಗ್ರಾಮದಲ್ಲಿ ನಡೆದ ಘಟನೆ
*  1.98 ಲಕ್ಷ ಬೆಳೆ ಸಾಲ ಪಡೆದಿದ್ದ ರೈತ 
*  ಸಾಲ ತುಂಬುವಂತೆ ಕಳೆದ 6 ತಿಂಗಳಿನಿಂದ ನೋಟಿಸ್‌ ನೀಡುತ್ತಿದ್ದ ಕೆವಿಜಿ ಬ್ಯಾಂಕ್‌ 

Farmer Committed Suicide at Ron in Gadag grg
Author
Bengaluru, First Published Jun 17, 2022, 1:30 AM IST

ರೋಣ(ಜೂ.17):  ಸಾಲ ಪಾವತಿಸುವಂತೆ ಬ್ಯಾಂಕಿನವರು ನೋಟಿಸ್‌ ನೀಡಿದ್ದರಿಂದ ಬೇಸತ್ತು ರೈತ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಅರಹುಣಸಿ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ. 

ಮೃತ ರೈತ ಬಸವರಾಜ ಆರೇರ (49) ರೋಣದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನಲ್ಲಿ 3 ವರ್ಷಗಳ ಹಿಂದೆ .1.98 ಲಕ್ಷ ಬೆಳೆ ಸಾಲ ಪಡೆದಿದ್ದ. ರೈತ 4 ಎಕರೆ ಜಮೀನು ಹೊಂದಿದ್ದು, ಕಳೆದ 3 ವರ್ಷದಿಂದ ಸರಿಯಾಗಿ ಬೆಳೆ ಬಾರದೇ ಸಂಕಷ್ಟಕ್ಕಿಡಾಗಿದ್ದ. ತನ್ನಿಂದ ಬ್ಯಾಂಕ್‌ ಸಾಲ ತೀರಿಸಲು ಆಗುತ್ತಿಲ್ಲ ಎಂದು ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದಾನೆ. 

ಮಾನಸಿಕ ಖಿನ್ನತೆ: ರೈಫಲ್‌ನಿಂದ ಶೂಟ್ ಮಾಡಿಕೊಂಡು ಪೇದೆ ಆತ್ಮಹತ್ಯೆ!

ಸಾಲ ತುಂಬುವಂತೆ ಕಳೆದ 6 ತಿಂಗಳಿನಿಂದ ಕೆವಿಜಿ ಬ್ಯಾಂಕಿನವರು ನೋಟಿಸ್‌ ನೀಡುತ್ತಿದ್ದರು. ಅಲ್ಲದೇ ಬುಧವಾರ ಮತ್ತೊಂದು ನೋಟಿಸ್‌ ಬಂದಿತ್ತು. ಇದರಿಂದ ಸಾಲ ತೀರಿಸಲು ನನ್ನಿಂದಾಗುತ್ತಿಲ್ಲ ಎಂದು ನನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತ ರೈತನ ಪತ್ನಿ ಗೀತಾ ಆರೇರ ದೂರು ನೀಡಿದ್ದಾರೆ.
 

Follow Us:
Download App:
  • android
  • ios