Asianet Suvarna News Asianet Suvarna News

ಮಾನವೀಯತೆ ಮರೆತ ಕ್ಯಾಬ್ ಚಾಲಕ, ಪುಟ್ಟ ಮರಿಗಳ ಮೇಲೆ ಕಾರು ಹತ್ತಿಸಿದ!

ಭುವನೇಶ್ವರದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದ್ದು, ಕ್ಯಾಬ್ ಚಾಲಕನೊಬ್ಬ ಪುಟ್ಟ ನಾಯಿ ಮರಿಗಳ ಮೇಲೆ ಕ್ಯಾಬ್ ಚಲಾಯಿಸಿದ್ದಾನೆ,

Cab driver arrested for running over 4 puppies in Bhubaneswar
Author
Bangalore, First Published Nov 19, 2019, 1:46 PM IST

ಭುವನೇಶ್ವರ[ನ.19]: ಮಾನವೀಯತೆ ಮರೆತ ಕ್ಯಾಬ್ ಚಾಲಕನೊಬ್ಬ ರಸ್ತೆ ಬದಿಯಲ್ಲಿದ್ದ ನಾಲ್ಕು ಪುಟ್ಟ ನಾಯಿ ಮರಿಗಳ ಮೇಲೆ ಕಾರು ಚಲಾಯಿಸಿರುವ ಘಟನೆ ಒಡಿಶಾದ ಭುವನೇಶ್ವರದಲ್ಲಿ ನಡೆದಿದೆ. ಪ್ರಾಣಿ ದಯಾ ಸಂಘದ ಸದಸ್ಯರು ನೀಡಿದ ದೂರನ್ನು ಸ್ವೀಕರಿಸಿದ ಪೊಲೀಸರು ಸದ್ಯ ಕ್ಯಾಬ್ ಚಾಲಕನನ್ನು ಬಂಧಿಸಿದ್ದಾರೆ.

ಈ ಸಂಬಂಧ ಮಾಹಿತಿ ನೀಡಿರುವ ಭುವನೇಶ್ವರ ಡಿಸಿಪಿ ಅನುಪ್ ಕುಮಾರ್ ಸಾಹೂ 'ಭಾನುವಾರದಂದು ಈ ಘಟನೆ ನಡೆದಿದ್ದು, ಭುವನೇಶ್ವರದ ಶೈಲಶ್ರೀ ವಿಹಾರ್ ಪ್ರದೇಶದಲ್ಲಿ ಕ್ಯಾಬ್ ಚಾಲಕ ಕನ್ಹು ಚರಣ್ ಗಿರಿ ನಾಯಿ ಮರಿಗಳನ್ನು ಆಹುತಿ ಪಡೆದಿದ್ದಾನೆ. ಅಲ್ಲೇ ಕರ್ತವ್ಯದಲ್ಲಿದ್ದ ಸೆಕ್ಯುರಿಟಿ ಗಾರ್ಡ್ ಕ್ಯಾಬ್ ಚಾಲಕನನ್ನು ತಡೆಯಲು ಯತ್ನಿಸಿದರಾದರೂ ಚಾಲಕ ಪರಾರಿಯಾಗಿದ್ದಾನೆ' ಎಂದಿದ್ದಾರೆ.

ಪೀಕ್ ಟೈಮ್‌ನಲ್ಲಿ ಬೆಲೆ ಹೆಚ್ಚಳವಿಲ್ಲ; ಪ್ರಯಾಣಿಕರಿಗೆ ಒಲಾ ಕೊಡುಗೆ!

ಘಟನೆಯ ಮಾಹಿತಿ ಪಡೆದ ಪ್ರಾಣಿ ದಯಾ ಸಂಘದ ಸದಸ್ಯರು ಕೂಡಲೇ ಪೊಲೀಸ್ ಠಾಣೆಗೆ ತೆರಳಿ ಐಪಿಸಿ ಸೆಕ್ಷನ್ 279, 429 ಹಾಗೂ ಮೋಟಾರು ವಾಹನ ಕಾಯ್ದೆ184ರಡಿಯಲ್ಲಿ ಕ್ಯಾಬ್ ಚಾಲಕನ ವಿರುದ್ಧ ದೂರು ದಾಖಲಿಸಿದ್ದಾರೆ. 

2016ರ ಮಾರ್ಚ್ ನಲ್ಲಿ 8 ನಾಯಿ ಮರಿಗಳನ್ನು ಕೊಂದಿದ್ದ ಆರೋಪದಡಿಯಲ್ಲಿ ನಿವೃತ್ತ ವಾಯಿಸೇನಾಧಿಕಾರಿಯ ಪತ್ನಿಯನ್ನು ಬಂಧಿಸಲಾಗಿತ್ತು. ಬಳಿಕ ತಾನು ತಾಯಿ ನಾಯಿಗೆ ಬುದ್ಧಿ ಕಲಿಸುವ ಸಲುವಾಗಿ ಹೀಗೆ ಮಾಡಿದ್ದೆ ಎಂಬ ಉತ್ತರ ನೀಡಿದ್ದರು.

Follow Us:
Download App:
  • android
  • ios