ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ನಡೆದ ಘಟನೆ| ಗ್ರೇಡ್ 2 ತಹಸೀಲ್ದಾರ್‌ ಮೇಲೆ ಸೀಮೆ ಎಣ್ಣೆ ಸುರಿದು ಕೊಲೆಗೆ ಯತ್ನ| ಹೊರಗಡೆ ಓಡಿ ಹೋಗಿ ಪ್ರಾಣ ಉಳಿಸಿಕೊಂಡ ನಾಗಪ್ಪ ಬಿರಡಿ| ಇಬ್ಬರು ಆರೋಪಿಗಳ ಬಂಧನ| 

ಬಾಗಲಕೋಟೆ(ಫೆ.25): ಸಹೋದರರ ಮಧ್ಯೆ ಆಸ್ತಿ ವಿವಾದದಲ್ಲಿ ತಮ್ಮ ಹೆಸರಿಗೆ ಆಸ್ತಿ ಪತ್ರ ಮಾಡಿಕೊಡದ ಹಿನ್ನೆಲೆಯಲ್ಲಿ ಗ್ರೇಡ್ 2 ತಹಸೀಲ್ದಾರ್‌ ಮೇಲೆ ಸೀಮೆ ಎಣ್ಣೆ ಸುರಿದು ಕೊಲೆಗೆ ಯತ್ನಿಸಿದ ಘಟನೆ ಜಿಲ್ಲೆಯ ಜಮಖಂಡಿ‌ ನಗರದಲ್ಲಿ ನಡೆದಿದೆ. ಫೆ. 20 ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜಮಖಂಡಿ‌ ನಗರದ ತಹಸೀಲ್ದಾರ ಕಚೇರಿಯಲ್ಲಿ ಗ್ರೇಡ್ 2 ತಹಸೀಲ್ದಾರ್‌ ನಾಗಪ್ಪ ಬಿರಡಿ ಅವರ ಮೇಲೆ ಸೀಮೆ ಎಣ್ಣೆ ಸುರಿದು ಕೊಲೆಗೆ ಯತ್ನ ನಡೆದಿದೆ. ರೈತ ಲಕ್ಷ್ಮಣ ಕಿತ್ತೂರ(70) ಹಾಗೂ ಮಗ ಬಸವರಾಜ ಕಿತ್ತೂರು(48) ಎಂಬುವರು ನಾಗಪ್ಪ ಬಿರಡಿ ಅವರ ಮೇಲೆ ಸೀಮೆ ಎಣ್ಣೆ ಸುರಿದು ಕೊಲೆ ಮಾಡಲು ಯತ್ನಿಸಿದ್ದಾರೆ. ಈ ವೇಳೆ ತಹಸೀಲ್ದಾರ ನಾಗಪ್ಪ ಬಿರಡಿ ಅವರು ಹೊರಗಡೆ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. 

ಗಾಜಿನ ಚೂರಿಂದ ಪತ್ತೆಯಾಯ್ತು ಸ್ವಿಗ್ಗಿ ಹುಡುಗರ ಕೊಂದ ಕಾರು..!

ಈ ಸಂಬಂಧ ತಹಸೀಲ್ದಾರ ನಾಗಪ್ಪ ಬಿರಡಿ ಅವರು ಜಮಖಂಡಿ ನಗರ ಪೊಲೀಸ್ ಠಾಣೆಯಲ್ಲಿ ಫೆ. 22 ರಂದು ದೂರು ದಾಖಲು ದಾಖಲಿಸಿದ್ದಾರೆ. ಘಟನೆಯನ್ನ ಖಂಡಿಸಿದ ತಹಶೀಲ್ದಾರ್‌ ಕಚೇರಿಯ ಸಿಬ್ಬಂದಿ ಪ್ರತಿಭಟನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು. ಹೀಗಾಗಿ ಆರೋಪಿಗಳಾದ ತಂದೆ-ಮಗನನ್ನು ಬಂಧಿಸಿ‌ದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.