Asianet Suvarna News Asianet Suvarna News

ಹುಬ್ಬಳ್ಳಿ ಗಲಭೆಕೋರರ ಬೆಂಬಲಕ್ಕೆ ನಿಂತ ಅಂಜುಮನ್ ಇಸ್ಲಾಂ ಸಂಸ್ಥೆ

* ಹುಬ್ಬಳ್ಳಿ ಗಲಭೆ ಪ್ರಕರಣ
* ಗಲಭೆಕೋರರ ಬೆಂಬಲಕ್ಕೆ ನಿಂತ ಅಂಜುಮನ್ ಇಸ್ಲಾಂ ಸಂಸ್ಥೆ
* ನಮ್ಮ‌ ಪರಂಪರೆಯೇ ಹೀಗೆ, ಮೊದಲಿನಿಂದಲೂ ಮಾಡಿಕೊಂಡ ಬಂದಿದ್ದೇವೆ ಎಂದ ಯೂಸುಫ್ ಸವಣೂರು  ..!

Anjuman Institute Backs Hubballi Violence Accused rbj
Author
Dharwad, First Published Apr 29, 2022, 2:38 PM IST

ವರದಿ: ಗುರುರಾಜ್ ಹೂಗಾರ್
ಹುಬ್ಬಳ್ಳಿ, (ಫೆ.29): ಶಾಂತವಾಗಿದ್ದ ಹುಬ್ಬಳ್ಳಿಯನ್ನು ಧಗಧಗಿಸುವಂತೆ ಮಾಡಿದ್ದ ಮುಸ್ಲಿಂ ಪುಂಡರು, ಏಪ್ರಿಲ್ ೧೬ರ ರಾತ್ರಿ ಸೃಷ್ಟಿಸಿ ಗಲಭೆ, ಒಂದು ವಾರದ ಕಾಲ ಹುಬ್ಬಳ್ಳಿ ಜನರನ್ನು ಭಯದಲ್ಲಿ ಬದುಕುವಂತೆ ಮಾಡಿದ್ರು. ಕಲ್ಲು ತೂರಾಟ ನಡೆಸಿ ಪುಂಡಾಡ ನಡೆಸಿದ್ದ 156 ಜನ ಗಲಭೆಕೋರರನ್ನ  ಬಂಧನ ಮಾಡಲಾಗಿದೆ. ಆದರೆ ಇಲ್ಲೊಂದು ಸಂಸ್ಥೆ ಗಲಭೆಕೋರರ ಬೆನ್ನಿಗೆ ನಿಂತು ರಕ್ಷಣೆ ನೀಡಲು ಮುಂದಾಗಿದೆ. ಅಷ್ಟಕ್ಕೂ ಯಾವುದು ಆ ಪ್ರಕರಣ..? ಗಲಭೆಕೋರರ ರಕ್ಷಣೆಗೆ ನಿಂತಿರುವ ಸಂಸ್ಥೆ ಆದರೂ ಯಾವುದು ಅಂತೀರಾ ಈ ಸ್ಟೋರಿ ನೋಡಿ..

ಹಳೇಹುಬ್ಬಳ್ಳಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಬಂಧಿತರಾದ 156 ಹೆಚ್ಚು ಆರೋಪಿಗಳಿಗೆ ಜಾಮೀನು ಕೊಡಿಸಿ, ನೀತಿ ಬೋಧನೆ ಮಾಡಲು ಹುಬ್ಬಳ್ಳಿ ಅಂಜುಮನ್‌ ಸಂಸ್ಥೆ ಸಿದ್ಧತೆ ನಡೆಸಿದೆ. ಹೌದು.. ಬಂಧಿತ ಪಾಲಕರ ಜೊತೆ ಸಂಸ್ಥೆ ಪದಾಧಿಕಾರಿಗಳು ಹಾಗೂ ಸಮಾಜದ ಮುಖಂಡರು ಚರ್ಚಿಸಿ, ವಕೀಲರ ಮೂಲಕ ಅಗತ್ಯ ಮಾಹಿತಿ ಹಾಗೂ ಕಾಗದ ಪತ್ರ ಸಂಗ್ರಹಿಸಲಾಗುತ್ತಿದೆ. 

ಹುಬ್ಬಳ್ಳಿ ಗಲಭೆಕೋರರಿಗೆ ಜಮೀರ್ ಬಾಸು ಕಾಸು, ರೇಣುಕಾಚಾರ್ಯ ಬುಸ್‌..ಬುಸ್..

ಏಪ್ರಿಲ್.30ಕ್ಕೆ ಜಾಮೀನು ಅರ್ಜಿ ಸಲ್ಲಿಸಲು ನಿರ್ಧರಿಸಲಾಗಿದೆ. ಗಲಭೆ ನಡೆದ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾ, ಆ ಸಂದರ್ಭದ ವಿಡಿಯೊ ಹಾಗೂ ಮೊಬೈಲ್‌ ಕರೆ ಆಧರಿಸಿ ಹಳೇಹುಬ್ಬಳ್ಳಿ ಠಾಣೆ ಪೊಲೀಸರು 156 ಮಂದಿ ಬಂಧಿಸಿದ್ದಾರೆ. ಬಂಧಿತರಲ್ಲಿ ಬಹುತೇಕರು ಆನಂದ ನಗರದ, ಟಿಪ್ಪು ನಗರ, ನೂರಾನಿ ಪ್ಲಾಟ್‌, ಅಧ್ಯಾಪಕ ನಗರ, ಮೇದಾರ ಓಣಿ, ಚನ್ನಪೇಟೆ, ಬೀರಬಂದರ ಓಣಿ ಸೇರಿದಂತೆ ಹಳೇ ಹುಬ್ಬಳ್ಳಿಯ ಭಾಗದವರೇ ಆಗಿದ್ದಾರೆ. ಭದ್ರತೆ ಹಿನ್ನೆಲೆಯಲ್ಲಿ ಅವರನ್ನೆಲ್ಲ ಕಲಬುರಗಿ, ಬಳ್ಳಾರಿ ಮತ್ತು ಮೈಸೂರು ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಾಮೀನು ಕೊಡಿಸಲು ಅಂಜುಮನ್ ಇಸ್ಲಾಂ ಸಂಸ್ಥೆ ಮುಂದಾಗಿದೆ.

ಇನ್ನೂ ನೈತಿಕ ಪಾಠ ಹೇಳುವ ಕೆಲಸವನ್ನು ಇಪ್ಪತ್ತು ವರ್ಷಗಳಿಂದ ಮಾಡಲಾಗುತ್ತಿದೆ.  ಧರ್ಮ ಗುರುಗಳ, ಮುಖಂಡರು ಹಾಗೂ ಪಾಲಕರಿಂದ ಬದುಕಿನ ಮೌಲ್ಯದ ತಿಳಿಸಿಕೊಡುವುದಲ್ಲದೇ, ಅಪರಾಧ ಚಟುವಟಿಕೆಗಳಿಂದ ದೂರ ಇರುವಂತೆ ಮನಃ ಪರಿವರ್ತಿಸಲಾಗುತ್ತದೆ. ಅಲ್ಲದೇ ಮೈಸೂರು, ಬಳ್ಳಾರಿ, ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಗಂಭೀರ ಪ್ರಕರಣದ ಆರೋಪಿಗಳನ್ನು ಇರಿಸಲಾಗುತ್ತದೆ. ಅವರಲ್ಲಿ ಕೆಲವರು ನಟೋರಿಯಸ್‌ ರೌಡಿಗಳು ಇರುತ್ತಾರೆ. ಬಂಧಿತ ಬಹುತೇಕ ಆರೋಪಿಗಳು 20 ರಿಂದ 25 ವರ್ಷದ ಒಳಗಿನವರು. ಕಾರಾಗೃಹದ ವಾತಾವರಣ ಅವರ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ. ಆ ಹಿನ್ನೆಲೆಯಲ್ಲಿ ಜಾಮೀನು ಕೊಡಿಸುವ ಯತ್ನ ನಡೆದಿದೆ ಎನ್ನುತ್ತಾರೆ ಅಂಜುಮನ್ ಸಂಸ್ಥೆ ಉಪಾಧ್ಯಕ್ಷ ಅಲ್ತಾಫ್‌ ಕಿತ್ತೂರ.

ಒಟ್ಟಿನಲ್ಲಿ ಹುಬ್ಬಳ್ಳಿಯು ಗಲಭೆಯಿಂದ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಪೊಲೀಸ್ ಕಮೀಷನರೇಟ್ ಕಾರ್ಯದಿಂದ ಆಗಬಹುದಾದ ಬಹುದೊಡ್ಡ ಅನಾಹುತ ತಪ್ಪದಂತಾಗಿದೆ. ಈಗ ಗಲಭೆಕೋರರಿಗೆ ಜಾಮೀನು ಕೋಡಿಸಿ ಹೊರ ಕರೆತರುವ ಅಗತ್ಯ ಏನೀತ್ತು..? ಪುಂಡರಿಗೆ ಕಠಿಣ ಶಿಕ್ಷೆ ಆಗುವಂತೆ ಮಾಡಬೇಕಾದ ಸಮಯದಲ್ಲಿ ಜಾಮೀನು ಕೊಡಿಸಿ ಕರೆತರಲು ಮುಂದಾಗಿದ್ದು ಎಷ್ಟು ಸರಿ. ಹುಬ್ಬಳ್ಳಿಯ ಜನರು ನೆಮ್ಮದಿಯಾಗಿರೋದು ಅಂಜುಮನ್ ಸಂಸ್ಥೆಗೆ ಬೇಡವಾಗಿದೇನಾ? ಎಂಬ ಅನುಮಾನ ಮೂಡಿದೆ.

Follow Us:
Download App:
  • android
  • ios