ಪೊಲೀಸರಿಗೆ ಗಾಂಜಾ ಹುಟ್ಟಿದ ಪಾಠ ಹೇಳಿದ ಗಾಂಜಾ ಆರೋಪಿ| ಪರಸಪ್ಪ ಬಂಧಿತ ಗಾಂಜಾ ಆರೋಪಿ|ಹಿಂದೆ ಇದ್ದ ಐವರು ಶರಣರು ಕೂಡಿಕೊಂಡು ಬಿತ್ತಿದ ಬೀಜವೇ ಗಾಂಜಾ ಗಿಡವಾಗಿದೆ| 

ರಾಯಚೂರು(ಸೆ.12): ಪರಮಾತ್ಮ ಮೇಲಿಂದ ಭೂಮಿಗೆ ಒಗೆದ ಕಣ್ಣು ಒಡೆದು ಬಿತ್ತಿದಾಗ ಅದು ಗಾಂಜಾ ಬೀಜವಾಗಿದೆ ಎಂದು ಗಾಂಜಾ ಆರೋಪಿ ಪರಸಪ್ಪ(68) ಪೊಲೀಸರಿಗೆ ನೀತಿ ಕಥೆ ಹೇಳಿರುವ ಪ್ರಸಂಗ ಜಿಲ್ಲೆಯ ಲಿಂಗಸುಗೂರಿನ ಗುಜಲೋರದೊಡ್ಡಿಯಲ್ಲಿ ಶುಕ್ರವಾರ ನಡೆದಿದೆ.

Add Asianetnews Kannada as a Preferred SourcegooglePreferred

ತಮ್ಮ ಹೊಲದಲ್ಲಿ ತೊಗರಿ ಜೊತೆಗೆ ಗಾಂಜಾ ಬೆಳೆದಿದ್ದ ಪರಸಪ್ಪ ಮತ್ತು ಅಮರೇಶನನ್ನು ಬಂಧಿಸಿ, 16 ಸಾವಿರ ಮೌಲ್ಯದ 9 ಕೆಜಿ ಗಾಂಜಾ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದ ವೇಳೆ ಆರೋಪಿ ಪರಸಪ್ಪ, ಪರಮಾತ್ಮನ ಒಂದು ಕಣ್ಣು ಭೂಮಿ ಮೇಲೆ ಬಿದ್ದಿದ್ದು, ಅದನ್ನು ಹಿಂದಿನ ಶರಣರು ಒಡೆದು ಭೂಮಿಯಲ್ಲಿ ಬಿತ್ತಿದಾಗ ಗಾಂಜಾ ಗಿಡವಾಗಿ ಬೆಳೆದಿದೆ. 

ಕಲಬುರಗಿ ಗಾಂಜಾಕೋರ ಬಿಜೆಪಿ ಕಾರ್ಯಕರ್ತ: ಕಾಂಗ್ರೆಸ್‌

ಹಿಂದೆ ಇದ್ದ ಐವರು ಶರಣರು ಕೂಡಿಕೊಂಡು ಬಿತ್ತಿದ ಬೀಜವೇ ಗಾಂಜಾ ಗಿಡವಾಗಿದೆ. ಮಾನವ ಜನ್ಮ ಪಂಚಭವತಿ, ನಾ ಪಂಚಭವತಿ ಇದನ್ನು ಅವರೇ ಹೇಳಿದ್ದಾರೆ. ಹೀಗೆ ತನಗೆ ತಿಳಿದಿರುವ ಕಥೆಯನ್ನು ಹೇಳಿರುವ ಆರೋಪಿ ಮಾತುಗಳಿಗೆ ಪೊಲೀಸರು ಹೂಂಗುಟ್ಟಿದ್ದಾರೆ.