Asianet Suvarna News Asianet Suvarna News

Double Murder Case: ಈಗಲ್‌ಟನ್‌ ರೆಸಾರ್ಟಲ್ಲಿ ವೃದ್ಧ ದಂಪತಿ ಕೊಲೆ: ಆರೋಪಿ ಸೆರೆ

*   ಆರೋ​ಪಿ​ಯನ್ನು ಬಂಧಿ​ಸಿ​ದ ಬಿಡದಿ ಠಾಣೆ ಪೊಲೀ​ಸರು
*   ಕೊಲೆ​ಯಾದ ರಘು​ರಾ​ಜನ್‌- ಆಶಾ
*   ಬಿಹಾರ ಮೂಲದ ಜೋಗೀಂದರ್‌ ಯಾದವ್‌ ಬಂಧಿತ ಆರೋಪಿ 
 

Accused Arrested For Double Murder Case in Ramanagara grg
Author
Bengaluru, First Published Feb 10, 2022, 5:00 AM IST | Last Updated Feb 10, 2022, 5:00 AM IST

ರಾಮನಗರ(ಫೆ.10): ಈಗಲ್‌ಟನ್‌ ರೆಸಾರ್ಟ್‌ನ ವಿಲ್ಲಾ​ದಲ್ಲಿ ಸೋಮವಾರ ನಡೆ​ದಿದ್ದ ವೃದ್ಧ ದಂಪ​ತಿ ಕೊಲೆ(Murder) ಪ್ರಕ​ರ​ಣಕ್ಕೆ ಸಂಬಂಧಿ​ಸಿ​ದಂತೆ ಓರ್ವ ಆರೋ​ಪಿ​ಯನ್ನು(Accused) ಬಿಡದಿ ಠಾಣೆ ಪೊಲೀ​ಸರು(Police) ಬಂಧಿ​ಸಿ​ದ್ದಾರೆ. ಕೊಲೆ​ಯಾದ ರಘು​ರಾ​ಜನ್‌ ಮತ್ತು ಆಶಾರವರ ಮನೆ​ಯಲ್ಲಿ ಕೆಲಸ ಮಾಡಿ​ಕೊಂಡಿದ್ದ ಬಿಹಾರ(Bihar) ಮೂಲದ ಜೋಗೀಂದರ್‌ ಯಾದವ್‌(23) ಬಂಧಿತ(Arrest) ಆರೋಪಿ. ಮತ್ತೊಬ್ಬ ಆರೋ​ಪಿ​, ಬಂಧಿತನ ಸಂಬಂಧಿ ರವೀಂದ್ರ ಯಾದವ್‌ ಪರಾ​ರಿ​ಯಾ​ಗಿದ್ದು, ಬಂಧನಕ್ಕೆ ಬಲೆ ಬೀಸಿದ್ದಾರೆ. ಬಂಧಿ​ತ​ನಿಂದ 56,000 ನಗದು ವಶ ಪಡಿ​ಸಿ​ಕೊಂಡಿ​ದ್ದಾರೆ.

ಇಂಡಿ​ಯನ್‌ ಏರ್‌ಫೋರ್ಸ್‌ನಲ್ಲಿ ವಿಂಗ್‌ ಕಮಾಂಡರ್‌ ಆಗಿದ್ದ ರಘು​ರಾ​ಜನ್‌ ಐದು ವರ್ಷ​ಗಳ ಹಿಂದೆ ನಿವೃ​ತ್ತಿ​ಯಾಗಿದ್ದು, ಪತ್ನಿ ಆಶಾ ಜತೆ ಈಗಲ್‌ಟನ್‌ ರೆಸಾರ್ಟ್‌ನ ವಿಲ್ಲಾ​ದಲ್ಲಿ ವಾಸ​ವಿ​ದ್ದರು. ಈ ದಂಪತಿ ಪುತ್ರ ಮತ್ತು ಪುತ್ರಿ ದೆಹ​ಲಿ​ಯಲ್ಲಿ ಉದ್ಯೋ​ಗ​ದ​ಲ್ಲಿ​ದ್ದ ಕಾರಣ ಇವ​ರಿ​ಬ್ಬರೇ ಮನೆ​ಯ​ಲ್ಲಿ​ದ್ದರು. ಮನೆ​ಗೆ​ಲಸ ಹಾಗೂ ನಾಯಿ ನೋಡಿಕೊಳ್ಳಲು ಬಿಹಾರ ಮೂಲದ ಜೋಗಿಂದರ್‌ ಯಾದವ್‌ನನ್ನು ನಿಯೋ​ಜಿ​ಸಿ​ಕೊಂಡಿ​ದ್ದರು. ಹಣದಾಸೆಗಾಗಿ ವೃದ್ಧ ದಂಪತಿ ಕೊಲೆ ಮಾಡಿರುವ ಆರೋಪಿ, ರಘು​ರಾ​ಜನ್‌ರವರ ಮೊಬೈಲ್‌ನಿಂದ ಹಣ ವರ್ಗಾ​ವ​ಣೆಗೆ ಪ್ರಯತ್ನಿಸಿದ್ದಾನೆ. ಸೋಮ​ವಾರ ರಾತ್ರಿ ಮತ್ತು ಮಂಗ​ಳ​ವಾರ ಬೆಳಗ್ಗೆ ದಂಪತಿ ಕರೆ ಸ್ವೀಕ​ರಿ​ಸ​ದಿ​ದ್ದಾಗ ಪುತ್ರ ಅನುಮಾನಗೊಂಡು, ರೆಸಾರ್ಟ್‌ನ ಸೆಕ್ಯೂ​ರಿಟಿ ಗಾರ್ಡ್‌ನನ್ನು ಸಂಪ​ರ್ಕಿಸಿ ಮನೆ​ಗೆ ಹೋಗಿ ಬರು​ವಂತೆ ತಿಳಿ​ಸಿ​ದಾಗ ಪ್ರಕರಣ ಬೆಳಕಿಗೆ ಬಂದಿತ್ತು.

Illicit Relationship : ಯೋಗ ಕ್ಲಾಸ್‌ನಲ್ಲಿ ಲವ್ವಿ-ಡವ್ವಿ,  ಪತಿಯನ್ನೇ ಸುಪಾರಿ ಕೊಟ್ಟು ಮುಗಿಸಿದ ಹಾಸನದ ಹಂತಕಿ!

ಮನೆ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳ ಸೆರೆ

ಕೊಪ್ಪಳ(Koppal): ನಗರದಲ್ಲಿ ಫೆ. 2ರಂದು ಐದು ಮನೆಗಳ ಕಳ್ಳತನ(Theft) ಮಾಡಿದ್ದ ಇಬ್ಬರು ಕಳ್ಳರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ವಿಜಯನಗರ(Vijayanagara) ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕುಪ್ಪನಕೇರಿಯ ರಾಜಾ(ಪೋತರಾಜಾ)(ಸದ್ದಾಂ ಹುಸೇನ್‌), ಬಳ್ಳಾರಿ ಜಿಲ್ಲೆಯ ಕಂಪ್ಲಿಯ 22ನೇ ವಾರ್ಡ್‌ನ ಇರ್ಫಾನ ಅಲಿ(ಕಡ್ಡಿ) ಎಂಬವರನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ .8,70,000 ಬೆಲೆ ಬಾಳುವ 180 ಗ್ರಾಂ ಬಂಗಾರದ ಆಭರಣ ಹಾಗೂ .60000 ಜಪ್ತಿ ಮಾಡಿದ್ದಾರೆ.

ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾದ ನಗರ ಠಾಣೆ ಪಿಎಸ್‌ಐ ಮಾರುತಿ ಗುಳ್ಳಾರಿ ಹಾಗೂ ಪೊಲೀಸ್‌ ಸಿಬ್ಬಂದಿ ಕಾರ್ಯಕ್ಕೆ ಜಿಲ್ಲಾ ಎಸ್ಪಿ ಅರುಣಾಂಗ್ಷು ಗಿರಿ, ಡಿವೈಎಸ್ಪಿ ಗೀತಾ ಬೇನಾಳ ಶ್ಲಾಘಿಸಿದ್ದಾರೆ.

ಹಾಡಹಗಲೇ ಮೊಬೈಲ್‌ ಕಳವು: ಇಬ್ಬರ ಬಂಧನ

ಬೆಂಗಳೂರು(Bengaluru): ಹಾಡಹಗಲೇ ಸಾರ್ವಜನಿಕರ ಮೊಬೈಲ್‌ ಹಾಗೂ ದ್ವಿಚಕ್ರ ವಾಹನ ಕಳವು(Two-Wheeler Theft) ಮಾಡುತ್ತಿದ್ದ ಇಬ್ಬರು ಕುಖ್ಯಾತ ಕಳ್ಳರನ್ನು ವಿಶ್ವೇಶ್ವರಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಾರು ನಿಲ್ಲಿಸಬೇಡ ಎಂದಿದ್ದೇ ತಪ್ಪಾಯ್ತು... ಮನೆಗೆ ನುಗ್ಗಿ ರಾಡ್ ನಿಂದ ಹೊಡೆದು ಕೊಂದ ನೆರೆಮನೆಯವರು!

ವಾಲ್ಮೀಕಿನಗರದ ಮಹಮದ್‌ ಸಲ್ಮಾನ್‌(30) ಮತ್ತು ಕನಕನಗರದ ಹಫೀಜ್‌ ಶರೀಫ್‌(38) ಬಂಧಿತರು. ಆರೋಪಿಗಳು ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ಐದು ಲಕ್ಷ ರು. ಮೌಲ್ಯದ ವಿವಿಧ ಕಂಪನಿಗಳ 25 ಮೊಬೈಲ್‌ ಫೋನ್‌ಗಳು ಹಾಗೂ ಒಂದು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಫೆ.2ರಂದು ವ್ಯಕ್ತಿಯೊಬ್ಬರು ಕೆಲಸ ಮುಗಿಸಿ ತಿಂಡಿ ತಿನ್ನಲು ಸಂಜೆ 5 ಗಂಟೆ ಸುಮಾರಿಗೆ ಕೈಯಲ್ಲಿ ಮೊಬೈಲ್‌ ಫೋನ್‌ ಹಿಡಿದುಕೊಂಡು ವಿಶ್ವೇಶ್ವರಪುರಂನ ಫುಡ್‌ ಸ್ಟ್ರೀಟ್‌ನತ್ತ ಹೋಗುತ್ತಿದ್ದರು. ಈ ವೇಳೆ ಸಜ್ಜನ ರಾವ್‌ ವೃತ್ತದ ಕಡೆಯಿಂದ ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿಗಳು ಏಕಾಏಕಿ ಆ ವ್ಯಕ್ತಿಯ ಮೊಬೈಲ್‌ ಕಿತ್ತುಕೊಂಡು ಪರಾರಿಯಾಗಿದ್ದರು. ಬಳಿಕ ಆ ವ್ಯಕ್ತಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಗಸ್ತು ಕರ್ತವ್ಯದಲ್ಲಿದ್ದ ವಿಶ್ವೇಶ್ವರಪುರಂ ಠಾಣೆಯ ಸಿಬ್ಬಂದಿ ನವೀನ್‌ ಕುಮಾರ್‌ ಮತ್ತು ಲೋಕೇಶ್‌ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
 

Latest Videos
Follow Us:
Download App:
  • android
  • ios